ಆ್ಯಪ್ನಗರ

‘ಪರಿಸರ ಕಾಪಾಡಲು ಸಮಯ ಮೀಸಲಿಡಿ‘

ಪರಿಸರ ರಕ್ಷ ಣೆಯಾಗಬೇಕಾದರೆ ಬಗರ ಹುಕುಂ ಸಾಗುವಳಿ ತಡೆಯಬೇಕೆಂದು ಡಿಸಿಸಿ ಬ್ಯಾಂಕ್‌ ನಿರ್ದೇಶಕ ಅಗಡಿ ಅಶೋಕ ಹೇಳಿದರು.

Vijaya Karnataka 10 Jun 2019, 5:00 am
ಶಿರಾಳಕೊಪ್ಪ: ಪರಿಸರ ರಕ್ಷ ಣೆಯಾಗಬೇಕಾದರೆ ಬಗರ ಹುಕುಂ ಸಾಗುವಳಿ ತಡೆಯಬೇಕೆಂದು ಡಿಸಿಸಿ ಬ್ಯಾಂಕ್‌ ನಿರ್ದೇಶಕ ಅಗಡಿ ಅಶೋಕ ಹೇಳಿದರು.
Vijaya Karnataka Web SMR-08SLKP01 PHOTO 01


ಪಟ್ಟಣದಲ್ಲಿ ಶುಕ್ರವಾರ ಆದಿತ್ಯ ಗ್ಯಾಸ್‌ ಹಂಚಿಕೆದಾರರು ಹಾಗೂ ಅರಣ್ಯ ಇಲಾಖೆ ನೇತೃತ್ವದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ ಹಾಗೂ ರೈತರಿಗೆ ಸಸಿ ವಿತರಣೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಸರಕಾರಿ ನೌಕರರು ಪರಿಸರ ರಕ್ಷ ಣೆಗಾಗಿ ತಮ್ಮ ಸಮಯ ಮೀಸಲಿಡಬೇಕಾಗಿದೆ. ಭೂಮಿ ಮೇಲೆ 2 ಡಿಗ್ರಿ ತಾಪಮಾನ ಹೆಚ್ಚಾದರೂ ಮಂಜುಗಡ್ಡೆಗಳು ಕರಗಿ ಭೂಮಿ ನಾಶವಾಗುವ ಹಂತಕ್ಕೆ ತಲುಪುತ್ತದೆ ಎಂದು ಎಚ್ಚರಿಕೆ ನೀಡಿದರು.

ವಲಯ ಅರಣ್ಯಾಧಿಕಾರಿ ಮಂಜುನಾಥ ಮಾತನಾಡಿ, ಪರಿಸರವನ್ನು ಪ್ಲಾಸ್ಟಿಕ್‌ ಮುಕ್ತಗೊಳಿಸಬೇಕಾಗಿದೆ. ಹೆಚ್ಚು ಸಸಿಗಳನ್ನು ನೆಡುವ ಮೂಲಕ ಪರಿಸರ ಸಮತೋಲನ ಕಾಪಾಡಬೇಕೆಂದರು. ತೊಗರ್ಸಿ ಮಹಾಂತದೇಶಿಕೇಂದ್ರ ಸ್ವಾಮೀಜಿ ಸಸಿ ನೆಡುವ ಮೂಲಕ ಕಾರ‍್ಯಕ್ರಮ ಉದ್ಘಾಟಿಸಿದರು. ಎಪಿಎಂಸಿ ಮಾಜಿ ಅಧ್ಯಕ್ಷ ತೊಗರ್ಸಿ ಹನುಮಂತಪ್ಪ, ಆಶಾ ಮಂಜುನಾಥ, ಜಮಾತೆ ಇಸ್ಲಾಂ ಹಿಂದ್‌ ಚಮನ್‌ ಮಿಯಾಸಾಬ್‌, ಉದ್ಯಮಿ ಲಯನ್ಸ್‌ ಕ್ಲಬ್‌ ಅಧ್ಯಕ್ಷ ರಾಜೀವ್‌, ಈಸ್ಲೂರು ಉಮೇಶ್‌, ಉದ್ಯಮಿ ಎಂ.ಆರ್‌.ಗಿರೀಶ್‌, ಅಗಡಿ ಆದಿತ್ಯ, ಗಂಗಾಧರ್‌, ಸುಭಾಷ್‌ ಜಾಧವ್‌, ಉಪವಲಯ ಅರಣ್ಯಾಧಿಕಾರಿಗಳಾದ ಖಾಸಿಂ, ಬಸವರಾಜ್‌ , ಪ್ರವೀಣ್‌ ಸೇರಿದಂತೆ ಅರಣ್ಯ ಇಲಾಖೆ ಸಿಬ್ಬಂದಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ