ಆ್ಯಪ್ನಗರ

‘ಸರಕಾರಿ ಶಿಕ್ಷಕರು ಪ್ರತಿಭಾವಂತರು’

ಸರಕಾರಿ ಶಾಲೆಗಳ ಪ್ರಗತಿಗೆ ದಾನಿಗಳ ಸಹಕಾರ ಅತ್ಯಗತ್ಯ ಎಂದು ಪಟ್ಟಣದ ಹೇಮಾ ಪಾಲಿ ಕ್ಲಿನಿಕ್‌ ವೈದ್ಯ ಡಾ.ನವೀನ್‌ಚಂದ್ರ ಹೆಗಡೆ ಹೇಳಿದರು.

Vijaya Karnataka 11 Aug 2018, 5:00 am
ಹೊಳೆಹೊನ್ನೂರು: ಸರಕಾರಿ ಶಾಲೆಗಳ ಪ್ರಗತಿಗೆ ದಾನಿಗಳ ಸಹಕಾರ ಅತ್ಯಗತ್ಯ ಎಂದು ಪಟ್ಟಣದ ಹೇಮಾ ಪಾಲಿ ಕ್ಲಿನಿಕ್‌ ವೈದ್ಯ ಡಾ.ನವೀನ್‌ಚಂದ್ರ ಹೆಗಡೆ ಹೇಳಿದರು.
Vijaya Karnataka Web SMR-10HHR2


ಪಟ್ಟಣ ಸಮೀಪದ ಅಗಸನಹಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಶಾಲೆಯ ಯುಕೆಜಿ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ, ಬೆಲ್ಟ್‌ ಹಾಗೂ ಐಡಿ ಕಾರ್ಡ್‌ ವಿತರಿಸಿ ಅವರು ಮಾತನಾಡಿದರು.

ದುಡಿದು ಗಳಿಸಿದ ಹಣದಲ್ಲಿ ಸ್ವಲ್ಪ ಭಾಗವನ್ನು ಉತ್ತಮ ಕಾರ‍್ಯಕ್ಕೆ ವಿನಿಯೋಗಿಸಿದರೆ ಸಂತೃಪ್ತಿ ಸಿಗುತ್ತದೆ. ಶಾಲೆಯಲ್ಲಿ ಮಕ್ಕಳನ್ನು ಶಿಕ್ಷ ಣದ ಜತೆಗೆ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿ ಕಲಿಕೆಯಲ್ಲಿ ಆಸಕ್ತಿ ಮೂಡಿಸಬೇಕು. ಸರಕಾರಿ ಶಾಲೆಯಲ್ಲಿ ಗುಣಾತ್ಮಕ ಶಿಕ್ಷ ಣ ದೊರೆಯುತ್ತಿದೆ. ಆದರೆ ಪೋಷಕರು ಸ್ವಪ್ರತಿಷ್ಠೆಗಾಗಿ ಸಾವಿರಾರು ರೂ. ವ್ಯಯಿಸಿ ದೂರದ ಖಾಸಗಿ ಶಾಲೆಗೆ ಕಳುಹಿಸುತ್ತಿದ್ದಾರೆ ಎಂದು ವಿಷಾದವ್ಯಕ್ತಪಡಿಸಿದರು.

ಶಾಲೆ ಉತ್ತಮ ಸಾಧನೆಗೆ ಮುಖ್ಯಶಿಕ್ಷ ಕರು ಹಾಗೂ ಸಹ ಶಿಕ್ಷ ಕರ ಅರ್ಪಣಾ ಸೇವಾ ಮನೋಭಾವ ಮುಖ್ಯ. ಉತ್ತಮ ಸಂವಹನದಿಂದ ದಾನಿಗಳಿಂದ ಕೊಡುಗೆ ಪಡೆಯಬಹುದು

ಎಂದರು.

ಶಿಕ್ಷ ಣ ಸಂಯೋಜಕಿ ಶ್ಯಾಮಲಾ ಮಾತನಾಡಿ, ಖಾಸಗಿ ಶಾಲೆಗಿಂತ ಸರಕಾರಿ ಶಾಲೆಗಳಲ್ಲಿ ಪ್ರತಿಭಾವಂತ ಶಿಕ್ಷ ಕರಿದ್ದಾರೆ. ಮಕ್ಕಳನ್ನು ಸರಕಾರಿ ಶಾಲೆಗೆ ದಾಖಲಿಸಬೇಕೆಂದರು.

ಸಮೂಹ ಸಂಪನ್ಮೂಲ ವ್ಯಕ್ತಿ ಸುರೇಶ್‌, ಮುಖ್ಯ ಶಿಕ್ಷ ಕ ಎಚ್‌.ಮಂಜುನಾಥ್‌, ಶಾಲಾಭಿವೃದ್ಧಿ ಸಮಿತಿ ಸದಸ್ಯ ಆರ್‌.ವೆಂಕಟೇಶ್‌ ಮಾತನಾಡಿದರು. ಎಸ್‌ಡಿಎಂಸಿ ಅಧ್ಯಕ್ಷ ವರದರಾಜ್‌ ಅಧ್ಯಕ್ಷ ತೆ ವಹಿಸಿದ್ದರು. ಗ್ರಾಮ ಪಂಚಾಯಿತಿ ಸದಸ್ಯೆ ನಾಗಮ್ಮ, ಎಸ್‌ಡಿಎಂಸಿ ಉಪಾಧ್ಯಕ್ಷೆ ನೇತ್ರಾ ಮಲ್ಲೇಶ್‌, ಸದಸ್ಯರಾದ ಆರ್‌.ಪರಶುರಾಮ್‌, ನಾಗರಾಜ್‌ರಾವ್‌, ಬಿ.ಪರಶುರಾಮ್‌, ಸುರೇಶ್‌, ಲೋಕೇಶ್‌, ಪೋಷಕರು ಹಾಜರಿದ್ದರು. ಈ ಸಂದರ್ಭ ವೈದ್ಯ ಡಾ.ನವೀನ್‌ಚಂದ್ರ ಹೆಗಡೆ ಅವರು ಕೊಡುಗೆಯಾಗಿ ನೀಡಿದ ಸಮವಸ್ತ್ರ, ಬೆಲ್ಟ್‌ ಹಾಗೂ ಐಡಿ ಕಾರ್ಡ್‌ಗಳನ್ನು ಮಕ್ಕಳಿಗೆ ವಿತರಿಸಲಾಯಿತು. ವಿದ್ಯಾರ್ಥಿನಿ ನಂದಿತಾ, ಶ್ವೇತಾ ಪ್ರಾರ್ಥಿಸಿ, ಸಹಶಿಕ್ಷ ಕ ಒ.ಚಂದ್ರಪ್ಪ ಸ್ವಾಗತಿಸಿ, ಆರ್‌.ಜ್ಯೋತಿ ನಿರೂಪಿಸಿ, ತಾಸೀನಾ ಬೀ ವಂದಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ