ಆ್ಯಪ್ನಗರ

ಪ್ರತಿಭೆ ಸಾಧಕ ಸ್ವತ್ತು

ಎಲ್ಲರನ್ನು ಕೈ ಬೀಸಿ ಕರೆದರೂ ಕಲೆಯನ್ನು ಕೆಲವರು ಮಾತ್ರ ಆಯ್ಕೆ ಮಾಡಿಕೊಳ್ಳುತ್ತಾರೆ. ಹುಟ್ಟುವಾಗಲೇ ಕೆಲವರು ಪ್ರತಿಭೆ ಜೊತೆ ಹುಟ್ಟುತ್ತಾರೆ. ಸಾಧನೆ ಮೂಲಕ ಕೆಲವರು ಕಲೆಯನ್ನು ಒಲಿಸಿಕೊಳ್ಳುತ್ತಾರೆ ಎಂದು ಶಾಸಕ ಆರಗಜ್ಞಾನೇಂದ್ರ ಹೇಳಿದರು.

Vijaya Karnataka 15 Sep 2019, 5:00 am
ತೀರ್ಥಹಳ್ಳಿ: ಎಲ್ಲರನ್ನು ಕೈ ಬೀಸಿ ಕರೆದರೂ ಕಲೆಯನ್ನು ಕೆಲವರು ಮಾತ್ರ ಆಯ್ಕೆ ಮಾಡಿಕೊಳ್ಳುತ್ತಾರೆ. ಹುಟ್ಟುವಾಗಲೇ ಕೆಲವರು ಪ್ರತಿಭೆ ಜೊತೆ ಹುಟ್ಟುತ್ತಾರೆ. ಸಾಧನೆ ಮೂಲಕ ಕೆಲವರು ಕಲೆಯನ್ನು ಒಲಿಸಿಕೊಳ್ಳುತ್ತಾರೆ ಎಂದು ಶಾಸಕ ಆರಗಜ್ಞಾನೇಂದ್ರ ಹೇಳಿದರು.
Vijaya Karnataka Web talent is an asset
ಪ್ರತಿಭೆ ಸಾಧಕ ಸ್ವತ್ತು


ತಾಲೂಕಿನಲ್ಲಿ ಬಾವಿಕೈಸರುನಲ್ಲಿ ಶನಿವಾರ ಕ್ಲಸ್ಟರ್‌ ಮಟ್ಟದ ಪ್ರತಿಭಾ ಕಾರಂಜಿ ಕಾರ‍್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಪ್ರತಿಭೆ ಸಾಧಕ ಸ್ವತ್ತು ಎಂಬುದು ಮೊದಲಿನಿಂದಲೂ ಪ್ರಚಲಿತದಲ್ಲಿದೆ. ಸಾಧನೆ ಇಲ್ಲದೆ ಯಾವುದನ್ನು ಗಳಿಸುವುದು ಸಾಧ್ಯವಿಲ್ಲ. ಪ್ರತಿಭಾ ಕಾರಂಜಿ ಕಾರ‍್ಯಕ್ರಮ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ವೇದಿಕೆ ಆಗಿದೆ. ಪ್ರತಿಭಾ ಕಾರಂಜಿ ಕಾರ‍್ಯಕ್ರಮಗಳ ಮೂಲಕ ಅನೇಕ ಪ್ರತಿಭೆಗಳು ಅನಾವರಣಗೊಳ್ಳಲು ಸಾಧ್ಯ ಎಂದು ಆರಗಜ್ಞಾನೇಂದ್ರ ಹೇಳಿದರು.

ಸಮಾರಂಭದಲ್ಲಿ ಜಿ.ಪಂ.ಸದಸ್ಯೆ ಅಪೂರ್ವ ಶರಧಿ, ತಾ.ಪಂ.ಸದಸ್ಯರಾದ ಸಾಲೇಕೊಪ್ಪರಾಮಚಂದ್ರ, ಟಿ.ಮಂಜುನಾಥ್‌, ಪ್ರಶಾಂತ್‌ಕುಕ್ಕೆ , ತ್ರಿಯಂಬಕಪುರ ಗ್ರಾ.ಪಂ. ಅಧ್ಯಕ್ಷ ಜಾನಕಿ, ಮಾಜಿ ಅಧ್ಯಕ್ಷ ಮಂಜುಳಾ, ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು, ಪೋಷಕರು, ಶಿಕ್ಷಕರು ಭಾಗವಹಿಸಿದ್ದರು.

--------
ತೀರ್ಪುಗಾರರು ನೈಜ ಪ್ರತಿಭೆಯನ್ನು ಅನ್ವೇಷಣೆ ಮಾಡಿ ಪ್ರೋತ್ಸಾಹಿಸಬೇಕು. ಪ್ರತಿಭೆಗೆ ಅನ್ಯಾಯವಾಗದಂತೆ ಎಚ್ಚರಿಕೆ ವಹಿಸುವುದು ತುಂಬಾ ಅಗತ್ಯ. ಸಣ್ಣದೊಂದು ತಪ್ಪು ನಿರ್ಧಾರದಿಂದ ಪ್ರತಿಭಾವಂತರ ಭವಿಷ್ಯ ಮಂಕಾಗಬಹುದು.

- ಆರಗಜ್ಞಾನೇಂದ್ರ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ