ಆ್ಯಪ್ನಗರ

ಮಕ್ಕಳಿಗೆ ಬಾಲ್ಯದಲ್ಲಿಯೇ ಸಾಹಸ ಕಲೆ ಕಲಿಸಿ

ಬಾಲ್ಯದಲ್ಲಿಯೇ ಮಕ್ಕಳಿಗೆ ಸಾಹಸ ಕಲೆ ಕಲಿಸುವಂತ ಕೆಲಸವಾಗಬೇಕು. ಇದರಿಂದ ಮುಂದೆ ಎಂತಹ ಕಷ್ಟ ಬಂದರೂ ಅದನ್ನು ಎದುರಿಸಲು ಸಿದ್ಧರಾಗುತ್ತಾರೆ ಎಂದು ಮಹಾನಗರ ಪಾಲಿಕೆ ಉಪಮೇಯರ್‌ ಎಸ್‌.ಎನ್‌.ಚನ್ನಬಸಪ್ಪ ಹೇಳಿದರು.

Vijaya Karnataka 26 Sep 2019, 5:00 am
ಶಿವಮೊಗ್ಗ:ಬಾಲ್ಯದಲ್ಲಿಯೇ ಮಕ್ಕಳಿಗೆ ಸಾಹಸ ಕಲೆ ಕಲಿಸುವಂತ ಕೆಲಸವಾಗಬೇಕು. ಇದರಿಂದ ಮುಂದೆ ಎಂತಹ ಕಷ್ಟ ಬಂದರೂ ಅದನ್ನು ಎದುರಿಸಲು ಸಿದ್ಧರಾಗುತ್ತಾರೆ ಎಂದು ಮಹಾನಗರ ಪಾಲಿಕೆ ಉಪಮೇಯರ್‌ ಎಸ್‌.ಎನ್‌.ಚನ್ನಬಸಪ್ಪ ಹೇಳಿದರು.
Vijaya Karnataka Web 25ganesh7


ನಗರದ ವಾಸವಿ ಶಾಲೆಯಲ್ಲಿಮಂಗಳವಾರ 6ನೇ ತರಗತಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಸಂಸ್ಕೃತ ಮತ್ತು ಸಾಹಸ ಘಟಕ ಉದ್ಘಾಟಿಸಿ ಅವರು ಮಾತನಾಡಿ, ಮಕ್ಕಳಿಗೆ ಪ್ರಕೃತಿ ಮಡಿಲಿನಲ್ಲಿಸಾಹಸ ಕಲೆಗಳನ್ನು ಹೇಳಿಕೊಡುವ ಮೂಲಕ ನದಿಗಳಲ್ಲಿಈಜಾಡುವುದು, ಗುಡ್ಡಬೆಟ್ಟಗಳನ್ನು ಹತ್ತುವುದು, ಪರ್ವತ ಏರುವಂತ ಸಾಹಸ ಪ್ರವೃತ್ತಿ ಮಕ್ಕಳಲ್ಲಿಬೆಳೆಯುತ್ತದೆ ಎಂದರು.

ಆಂಜನೇಯ ಅತ್ಯಂತ ಮೇದಾವಿ ಸಂಸ್ಕೃತ ವಿದ್ವಾಂಸನಾಗಿದ್ದ ಎಂದು ಪುರಾಣ ತಿಳಿಸುತ್ತದೆ. ಆದೇ ರೀತಿ ಆಂಜನೇಯ ಸಾಹಸದ ಪ್ರತೀಕ ಕೂಡ ಹೌದು ಎಂದು ತಿಳಿಸಿದ ಅವರು, ವಾಸವಿ ಸಂಸ್ಕೃತ ಅಧ್ಯಯನ ಕೇಂದ್ರ, ಸಂಸ್ಕೃತ ಭಾರತಿ ಮತ್ತು ತರುಣೋದಯ ಸಂಸ್ಕೃತ ಸೇವಾ ಸಂಸ್ಥೆಯವರು ಇಂತಹ ಘಟಕಗಳನ್ನು ನಗರದ ಎಲ್ಲಶಾಲೆಗಳಲ್ಲೂತೆರೆದು ವಿದ್ಯಾರ್ಥಿಗಳಲ್ಲಿಸಾಹಸ ಮನೋಭಾವನೆ ಬೆಳೆಸುವಂತಾಗಬೇಕೆಂದರು.

ತರುಣೋದಯ ಸಂಸ್ಕೃತ ಸೇವಾ ಸಂಸ್ಥೆ ಅಧ್ಯಕ್ಷ ಟಿ.ವಿ.ನರಸಿಂಹಮೂರ್ತಿ ಪ್ರಾಸ್ತಾವಿಕ ಮಾತನಾಡಿದರು. ಶಾಲಾ ಕೋಶಾಧ್ಯಕ್ಷ ಶ್ಯಾಮಸುಂದರ್‌, ಶಾಲಾ ಪ್ರಾಂಶುಪಾಲ ಧನಲಕ್ಷ್ಮಿ, ಆಶಾ, ರಾಜೇಂದ್ರ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ