ಆ್ಯಪ್ನಗರ

ತಂತ್ರಜ್ಞಾನ ,ವ್ಯಾಕರಣ ಜ್ಞಾನ ಪ್ರತಿಭೆಗೆ ಬಲ

ದೃಶ್ಯಮಾಧ್ಯಮದ ತಂತ್ರಜ್ಞಾನ, ವ್ಯಾಕರಣದ ಜ್ಞಾನ ಹೆಚ್ಚಿಸಿಕೊಂಡು ಯುವಜನತೆ ತಮ್ಮ ಪ್ರತಿಭೆ ಅಭಿವ್ಯಕ್ತಿಗೊಳಿಸಬೇಕೆಂದು ಕರ್ನಾಟಕ ರಾಜ್ಯ ಅಕಾಡೆಮಿ ನಿಕಟಪೂರ್ವ ಸದಸ್ಯೆ ಎಂ.ವಿ.ಪ್ರತಿಭಾ ಹೇಳಿದರು.

Vijaya Karnataka 3 Dec 2019, 5:00 am
ಸಾಗರ : ದೃಶ್ಯಮಾಧ್ಯಮದ ತಂತ್ರಜ್ಞಾನ, ವ್ಯಾಕರಣದ ಜ್ಞಾನ ಹೆಚ್ಚಿಸಿಕೊಂಡು ಯುವಜನತೆ ತಮ್ಮ ಪ್ರತಿಭೆ ಅಭಿವ್ಯಕ್ತಿಗೊಳಿಸಬೇಕೆಂದು ಕರ್ನಾಟಕ ರಾಜ್ಯ ಅಕಾಡೆಮಿ ನಿಕಟಪೂರ್ವ ಸದಸ್ಯೆ ಎಂ.ವಿ.ಪ್ರತಿಭಾ ಹೇಳಿದರು.
Vijaya Karnataka Web 02SGR2_46
ಸಾಗರದ ಸಂಕಲ್ಪ ಕ್ರಿಯೇಶನ್‌ ಏರ್ಪಡಿಸಿದ್ದ ಕಾರ‍್ಯಕ್ರಮದಲ್ಲಿಸ್ಥಳೀಯ ಯುವ ಪ್ರತಿಭೆಗಳು ಹೊರ ತಂದಿರುವ 'ಹೊಂಟೋಗ್ಬಿಟ್ಳು' ಮ್ಯೂಸಿಕ್‌ ಆಲ್ಬಂ.


ಇಲ್ಲಿನ ಶಿವಗೋಪಾಲಕೃಷ್ಣ ದೇವಸ್ಥಾನದ ಸಭಾಂಗಣದಲ್ಲಿಶನಿವಾರ ಸಂಕಲ್ಪ ಕ್ರಿಯೇಶನ್‌ ಏರ್ಪಡಿಸಿದ್ದ ಕಾರ‍್ಯಕ್ರಮದಲ್ಲಿಸ್ಥಳೀಯ ಯುವ ಪ್ರತಿಭೆಗಳು ಹೊರ ತಂದಿರುವ 'ಹೊಂಟೋಗ್ಬಿಟ್ಳು' ಮ್ಯೂಸಿಕ್‌ ಆಲ್ಬಂ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಆಧುನಿಕ ತಂತ್ರಜ್ಞಾನ ಉನ್ನತೀಕರಣಗೊಂಡಿದೆ. ಕಿರುಚಿತ್ರ, ಮ್ಯೂಸಿಕ್‌ ಆಲ್ಬಂ ನಿರ್ಮಾಣದಲ್ಲಿ ಗ್ರಾಮೀಣ ಪ್ರದೇಶದ ಯುವ ತಲೆಮಾರು ಹೆಚ್ಚಿನ ಸಂಖ್ಯೆಯಲ್ಲಿಪಾಲ್ಗೊಳ್ಳುತ್ತಿರುವುದು ಆರೋಗ್ಯಕರ ಬೆಳವಣಿಗೆ. ತಂತ್ರಜ್ಞಾನ ಬಳಸಿಕೊಂಡು ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಕೆಲಸದತ್ತ ಯುವಪ್ರತಿಭೆಗಳು ಗಮನ ಹರಿಸಬೇಕೆಂದರು.

ಸಂಕಲ್ಪ ಕ್ರಿಯೇಶನ್‌ ಸಂಸ್ಥೆಯ ಪ್ರಮುಖ ಮನು ಮಾಸೂರು ಮಾತನಾಡಿ, ಈ ಭಾಗದ ಸುತ್ತಮುತ್ತಲಿನ ಯುವಕ ಯುವತಿಯರು ಸೇರಿ ಹೊರತಂದಿರುವ ಪ್ರಥಮ ಮ್ಯೂಸಿಕ್‌ ಆಲ್ಬಂ ಇದು ಎಂದರು. ಸ್ಟೆತ್ರೖಲ್‌ ಡ್ಯಾನ್ಸ್‌ ಅಕಾಡೆಮಿ ಸಂಸ್ಥಾಪಕ ಸೂರಜ್‌ ಸಾಗರ್‌, ಅರವಿಂದ ಶೆಟ್ಟಿ, ಗಣೇಶ್‌ಆಚಾರ್ಯ, ಪವನ್‌ ಸಾಗರ್‌, ಮನೋಜ್‌, ಮೋನಿಕ್‌, ಅನಘಾ, ಪವನ್‌ ಮಾಸೂರು, ವರುಣ್‌, ಭರತ್‌, ಅಜಯ್‌, ದಿನು ಸಾಗರ್‌ ಇತರರು ಇದ್ದರು.

------
ಸಾಗರದ ಪ್ರತಿಭೆಗಳಾದ ಮೆಲ್ವಿನ್‌, ಸೂರಜ್‌ ಸಾಗರ್‌, ಗಣೇಶ ಮುಂತಾದವರು ಕೆಲಸ ಮಾಡಿದ್ದಾರೆ. ಈಗಾಗಲೇ ಯೂಟ್ಯೂಬ್‌ನಲ್ಲಿ16ಸಾವಿರಕ್ಕೂ ಹೆಚ್ಚು ಜನರು ಇದನ್ನು ವೀಕ್ಷಿಸಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
-ಮನು ಮಾಸೂರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ