ಶಿವಮೊಗ್ಗ: ತಂತ್ರಜ್ಞಾನವನ್ನು ಮಾಹಿತಿ ಸಂಗ್ರಹಕ್ಕಾಗಿ ಬಳಸಬೇಕೇ ವಿನಹ ಅದರ ದುರುಪಯೋಗ ಮಾಡಿಕೊಳ್ಳಬಾರದೆಂದು ಸಾಹಿತಿ ವಿಜಯ ಶ್ರೀಧರ್ ಸಲಹೆ ನೀಡಿದರು.
ನಗರದ ಶ್ರೀ ರವಿಶಂಕರ ವಿದ್ಯಾಮಂದಿರದಲ್ಲಿಗುರುವಾರ ಆಯೋಜಿಸಿದ್ದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿಮಾತನಾಡಿ, ಮಕ್ಕಳು ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ದೇಶದ ನೇತಾರರ ಜೀವನ ಸಾಧನೆ ಓದಿ ತಿಳಿದುಕೊಂಡು ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಹೇಳಿದರು.
ಜೀವನದಲ್ಲಿಸತ್ಯವಂತರಾಗಿ ಗುಣಶೀಲರಾಗಿ ಸಾಮಾಜಿಕ ಕಾಳಜಿ ರೂಢಿಸಿಕೊಳ್ಳಬೇಕು. ನಮ್ಮ ಪುರಾಣದಲ್ಲಿರುವ ಅನೇಕ ಸತ್ಯ ಕಥೆಗಳು ನಮ್ಮ ಬದುಕಿಗೆ ಪ್ರೇರಣೆಯಾಗಿವೆ. ಇದರ ಅಧ್ಯಯನದಿಂದ ಭಾರತೀಯ ಸಂಸ್ಕೃತಿಯನ್ನು ಪೂರ್ಣವಾಗಿ ತಿಳಿದುಕೊಳ್ಳಬಹುದು. ನಿತ್ಯ ಜೀವನದಲ್ಲಿಆದರ್ಶಗಳ ಆಚರಣೆಗೆ ಪ್ರಯತ್ನಿಸಬೇಕು. ತಂದೆ, ತಾಯಿ ಹಾಗೂ ಗುರುಗಳಿಗೆ ಗೌರವಿಸಬೇಕು ಎಂದರು.
ಶಾಲೆ ಆಡಳಿತ ಮಂಡಳಿ ಸದಸ್ಯ ರಮೇಶ್ಬಾಬು ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದಿನ ಮಕ್ಕಳೇ ಮುಂದಿನ ಪ್ರಜೆಗಳಾಗಿದ್ದಾರೆಂಬ ಮಾತು ಹಳೆಯದಾಗಿದೆ. ಇಂದಿನ ಮಕ್ಕಳು ಇಂದಿನ ಪ್ರಜೆಗಳಾಗಿದ್ದು, ಅವರಿಗೆ ಉತ್ತಮ ಸಂಸ್ಕಾರ ನೀಡುವ ಅಗತ್ಯವಿದೆ ಎಂದು ಹೇಳಿದರು.
ಪ್ರಾಂಶುಪಾಲ ರಮೇಶ್ ಉಪಸ್ಥಿತರಿದ್ದರು. ಸ್ಪರ್ಧೆಯಲ್ಲಿವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಸಮೂಹ ಗಾಯನ ಹಾಗೂ ನೃತ್ಯ, ಕಥೆ, ಸ್ವರಚಿತ ಕವನ ವಾಚನ, ಪ್ರಶ್ನೋತ್ತರ, ಪದ್ಯ ವಾಚನ, ಭಜನೆ ಇತ್ಯಾದಿ ಕಾರ್ಯಕ್ರಮಗಳನ್ನು ಶಾಲೆಯ ಎಲ್ಲಶಿಕ್ಷಕರೇ ಮಾಡುವ ಮೂಲಕ ಮಕ್ಕಳನ್ನು ರಂಜಿಸಿದರು. ಭಾವನಾ ಹೆಗಡೆ ಪ್ರಾರ್ಥಿಸಿ, ಇಂದಿರಾ ಸ್ವಾಗತಿಸಿದರು. ಉಮಾ ಶ್ರೀಕಾಂತ್ ನಿರೂಪಿಸಿ, ಸರೋಜಾ ವಂದಿಸಿದರು.
===