ಭದ್ರಾವತಿ : ಜಾಗತಿಕ ತಾಪಮಾನದಿಂದ ಭೂಮಿಯ ಮೇಲ್ಮೈ ಉಷ್ಣತೆ ಹೆಚ್ಚಾಗಿ ಸಮುದ್ರದ ನೀರಿನ ಮಟ್ಟ ಉಬ್ಬರದಿಂದ ಪ್ರವಾಹದಂತಹ ಪ್ರಕೃತಿ ವಿಕೋಪ ಉಂಟಾಗುತ್ತದೆ. ಸಮುದ್ರ ತೀರ ಪ್ರದೇಶಗಳಲ್ಲಿ ಸವಕಳಿಯಿಂದ ನಿರ್ಗಲ್ಲುಗಳು ಕರಗಿ ಪ್ರವಾಹ ಹೆಚ್ಚಾಗಲಿದೆ ಎಂದು ಜಿ.ಪಂ ಮುಖ್ಯ ಯೋಜನಾಧಿಕಾರಿ ಉಮಾ ಡಿ.ಸದಾಶಿವಯ್ಯ ಹೇಳಿದರು.
ಅವರು ಗುರುವಾರ ತಾ.ಪಂ ಸಭಾಂಗಣದಲ್ಲಿ ಗ್ರಾ.ಪಂ ಚುನಾಯಿತ ಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ನವೀಕರಿಸಬಹುದಾದ ಇಂಧನ, ಮಳೆ ನೀರು ಕೊಯ್ಲು ಮತ್ತು ಪರಿಸರ ಸಂರಕ್ಷ ಣೆ ಅರಿವು ಮೂಡಿಸುವ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ನವೀಕರಿಸಬಹುದಾದ ಇಂಧನಗಳಾದ ಸೋಲಾರ್ ಬಳಕೆಯಿಂದ ಪರಿಸರಕ್ಕೆ ಹಾನಿಯಾಗುವುದಿಲ್ಲ. ಜಲ ವಿದ್ಯುತ್ಛಕ್ತಿ ಯೋಜನೆಯಡಿ ಕಡಿಮೆ ವೆಚ್ಚದಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲು ಸಾಧ್ಯವಾಗುತ್ತದೆ. ಮಳೆ ಆಧಾರಿತ ಗುಡ್ಡಗಾಡು ಪ್ರದೇಶಗಳಲ್ಲಿ ಸೋಲಾರ್ ಬಳಕೆ ಮಾಡುವುದರಿಂದ ಪರಿಸರಕ್ಕೆ ಧಕ್ಕೆಯಾಗುವುದಿಲ್ಲ. ಕೈಗಾರಿಕೆ, ವಾಹನಗಳಿಂದ ಮತ್ತು ದಿನನಿತ್ಯ ಬಳಕೆಯ ಡೀಸೆಲ್, ಪೆಟ್ರೋಲ್, ಕಲ್ಲಿದ್ದಲು, ನೈಸರ್ಗಿಕ ಅನಿಲ, ಖನಿಜ ಅನಿಲಗಳ ಬಳಕೆ ಹೆಚ್ಚಿನಿಂದ ಹಾಗೂ ಮನೆ ಅನಿಲಗಳಾದ ಕಾರ್ಬನ್ ಡೈಆಕ್ಸಿಡ್, ಮಿಥೇನ್ ಮತ್ತು ಸಾರಜನಿಕದಿಂದ ಭೂಮಿಯ ಮೇಲೆ ಉಷ್ಣತೆ ಹೆಚ್ಚಾಗಲಿದೆ ಎಂದರು.
ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷ ಣಾಧಿಕಾರಿ ನಟರಾಜ ದೇಸಾಯಿ ಮಾತನಾಡಿ, 2020ರಿಂದ 2040ರ ಸಾಲಿಗೆ ಇಂಧನಗಳಾದ ಪೆಟ್ರೋಲ್, ಡೀಸೆಲ್ಗಳ ಲಭ್ಯತೆ ಕಡಿಮೆಯಾಗಲಿದೆ. ಈಗಾಗಲೆ ಕೊಳವೆಬಾವಿಗಳಲ್ಲಿ ನೀರು ಲಭ್ಯವಾಗತ್ತಿಲ್ಲ. ಅದ್ದರಿಂದ ಎಚ್ಚೆತ್ತುಕೊಂಡು ಮುಂದಿನ ದಿನಗಳಲ್ಲಿ ಹೊಂಗೆ, ಬೇವು ಹಾಗು ಸೀಮೋಕೋಬ ಮರಗಳಿಂದ ಜೈವಿಕ ಇಂಧನಗಳನ್ನು ಪಡೆಯಲು ತಂತ್ರಜ್ಞಾನ ಅಳವಡಿಸಿಕೊಂಡಲ್ಲಿ ಒಳಿತಾಗುತ್ತದೆ ಎಂದರು.
ತಾಪಂ ಅಧ್ಯಕ್ಷೆ ಯಶೋದಮ್ಮ ಅಧ್ಯಕ್ಷ ತೆ ವಹಿಸಿ ಮಾತನಾಡಿ, ಜನರು ತಮ್ಮ ಮನೆಗಳಲ್ಲಿ ದಿನನಿತ್ಯ ಉತ್ಪತ್ತಿಯಾಗುವ ಘನತ್ಯಾಜ್ಯ ವಸ್ತುಗಳನ್ನು ಗೊಬ್ಬರವಾಗಿ ಮಾರ್ಪಸಿಕೊಂಡು ಸಾವಯವ ಕೃಷಿಗೆ ಬಳಸಿಕೊಳ್ಳಬೇಕೆಂದರು.
ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರೇಮ್ ಕುಮಾರ್ ಮಾತನಾಡಿದರು. ಸಹಾಯಕ ನಿರ್ದೇಶಕ ಪ್ರವೀಣ್ ಕುಮಾರ್, ಸಂಪನ್ಮೂಲ ಅಧಿಕಾರಿಗಳಾದ ಬಾಲಾಜಿ ಮಡ್ಡಿಕೇರಾ, ಬಾಲಕೃಷ್ಣ ನೀರ್ಚಾಲ್, ಎ.ಎಂ.ವೀರೇಶ್,ಸಿ.ರಮೇಶ್, ಡಾ.ಎಚ್.ಬಿ.ಸುರೇಶ್, ಎಸ್.ಎಂ.ಶೆಣೈ, ಡಾ.ಎಲ್.ಕೆ.ಶ್ರೀಪತಿ, ವಿಶಾಲಾಕ್ಷಿ, ಟಿ.ಎನ್.ಮೋಹನ್, ಕೆ.ಜಿ.ಪ್ರಕಾಶ್, ಎನ್.ಪಿ.ಉಮಾಶಂಕರ್ ಗ್ರಾಪಂ ಕಾರ್ಯದರ್ಶಿ ಮತ್ತು ಪಿಡಿಒ ಗಳಿಗೆ ತರಬೇತಿ ನೀಡಿದರು.
ಬೆಂಗಳೂರಿನ ಮಹಾತ್ಮಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆ, ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ತಾ.ಪಂ, ಹರಿಹರದ ಮಾರ್ಸ್-ಕೆ ಸಂಸ್ಥೆ, ಕರ್ನಾಟಕ ಸಮಗ್ರ ಮತ್ತು ಸುಸ್ಥಿರ ಜಲ ಸಂಪನ್ಮೂಲ ನಿರ್ವಹಣೆ ಹೂಡಿಕೆ ಯೋಜನೆ, ಗೊಂದಿ ನೀರಾವರಿ ಆಧುನೀಕರಣ ಯೋಜನೆ, ಜಿಲ್ಲಾ ಜೈವಿಕ ಇಂಧನ, ಸಂಶೋಧನೆ, ಮಾಹಿತಿ ಪ್ರಾತ್ಯಕ್ಷಿಕೆ ಕೇಂದ್ರ ಹಾಗೂ ಟಾಟಾ ಸೋಲಾರ್ ಸಹಯೋಗದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಅವರು ಗುರುವಾರ ತಾ.ಪಂ ಸಭಾಂಗಣದಲ್ಲಿ ಗ್ರಾ.ಪಂ ಚುನಾಯಿತ ಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ನವೀಕರಿಸಬಹುದಾದ ಇಂಧನ, ಮಳೆ ನೀರು ಕೊಯ್ಲು ಮತ್ತು ಪರಿಸರ ಸಂರಕ್ಷ ಣೆ ಅರಿವು ಮೂಡಿಸುವ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ನವೀಕರಿಸಬಹುದಾದ ಇಂಧನಗಳಾದ ಸೋಲಾರ್ ಬಳಕೆಯಿಂದ ಪರಿಸರಕ್ಕೆ ಹಾನಿಯಾಗುವುದಿಲ್ಲ. ಜಲ ವಿದ್ಯುತ್ಛಕ್ತಿ ಯೋಜನೆಯಡಿ ಕಡಿಮೆ ವೆಚ್ಚದಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲು ಸಾಧ್ಯವಾಗುತ್ತದೆ. ಮಳೆ ಆಧಾರಿತ ಗುಡ್ಡಗಾಡು ಪ್ರದೇಶಗಳಲ್ಲಿ ಸೋಲಾರ್ ಬಳಕೆ ಮಾಡುವುದರಿಂದ ಪರಿಸರಕ್ಕೆ ಧಕ್ಕೆಯಾಗುವುದಿಲ್ಲ. ಕೈಗಾರಿಕೆ, ವಾಹನಗಳಿಂದ ಮತ್ತು ದಿನನಿತ್ಯ ಬಳಕೆಯ ಡೀಸೆಲ್, ಪೆಟ್ರೋಲ್, ಕಲ್ಲಿದ್ದಲು, ನೈಸರ್ಗಿಕ ಅನಿಲ, ಖನಿಜ ಅನಿಲಗಳ ಬಳಕೆ ಹೆಚ್ಚಿನಿಂದ ಹಾಗೂ ಮನೆ ಅನಿಲಗಳಾದ ಕಾರ್ಬನ್ ಡೈಆಕ್ಸಿಡ್, ಮಿಥೇನ್ ಮತ್ತು ಸಾರಜನಿಕದಿಂದ ಭೂಮಿಯ ಮೇಲೆ ಉಷ್ಣತೆ ಹೆಚ್ಚಾಗಲಿದೆ ಎಂದರು.
ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷ ಣಾಧಿಕಾರಿ ನಟರಾಜ ದೇಸಾಯಿ ಮಾತನಾಡಿ, 2020ರಿಂದ 2040ರ ಸಾಲಿಗೆ ಇಂಧನಗಳಾದ ಪೆಟ್ರೋಲ್, ಡೀಸೆಲ್ಗಳ ಲಭ್ಯತೆ ಕಡಿಮೆಯಾಗಲಿದೆ. ಈಗಾಗಲೆ ಕೊಳವೆಬಾವಿಗಳಲ್ಲಿ ನೀರು ಲಭ್ಯವಾಗತ್ತಿಲ್ಲ. ಅದ್ದರಿಂದ ಎಚ್ಚೆತ್ತುಕೊಂಡು ಮುಂದಿನ ದಿನಗಳಲ್ಲಿ ಹೊಂಗೆ, ಬೇವು ಹಾಗು ಸೀಮೋಕೋಬ ಮರಗಳಿಂದ ಜೈವಿಕ ಇಂಧನಗಳನ್ನು ಪಡೆಯಲು ತಂತ್ರಜ್ಞಾನ ಅಳವಡಿಸಿಕೊಂಡಲ್ಲಿ ಒಳಿತಾಗುತ್ತದೆ ಎಂದರು.
ತಾಪಂ ಅಧ್ಯಕ್ಷೆ ಯಶೋದಮ್ಮ ಅಧ್ಯಕ್ಷ ತೆ ವಹಿಸಿ ಮಾತನಾಡಿ, ಜನರು ತಮ್ಮ ಮನೆಗಳಲ್ಲಿ ದಿನನಿತ್ಯ ಉತ್ಪತ್ತಿಯಾಗುವ ಘನತ್ಯಾಜ್ಯ ವಸ್ತುಗಳನ್ನು ಗೊಬ್ಬರವಾಗಿ ಮಾರ್ಪಸಿಕೊಂಡು ಸಾವಯವ ಕೃಷಿಗೆ ಬಳಸಿಕೊಳ್ಳಬೇಕೆಂದರು.
ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರೇಮ್ ಕುಮಾರ್ ಮಾತನಾಡಿದರು. ಸಹಾಯಕ ನಿರ್ದೇಶಕ ಪ್ರವೀಣ್ ಕುಮಾರ್, ಸಂಪನ್ಮೂಲ ಅಧಿಕಾರಿಗಳಾದ ಬಾಲಾಜಿ ಮಡ್ಡಿಕೇರಾ, ಬಾಲಕೃಷ್ಣ ನೀರ್ಚಾಲ್, ಎ.ಎಂ.ವೀರೇಶ್,ಸಿ.ರಮೇಶ್, ಡಾ.ಎಚ್.ಬಿ.ಸುರೇಶ್, ಎಸ್.ಎಂ.ಶೆಣೈ, ಡಾ.ಎಲ್.ಕೆ.ಶ್ರೀಪತಿ, ವಿಶಾಲಾಕ್ಷಿ, ಟಿ.ಎನ್.ಮೋಹನ್, ಕೆ.ಜಿ.ಪ್ರಕಾಶ್, ಎನ್.ಪಿ.ಉಮಾಶಂಕರ್ ಗ್ರಾಪಂ ಕಾರ್ಯದರ್ಶಿ ಮತ್ತು ಪಿಡಿಒ ಗಳಿಗೆ ತರಬೇತಿ ನೀಡಿದರು.
ಬೆಂಗಳೂರಿನ ಮಹಾತ್ಮಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆ, ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ತಾ.ಪಂ, ಹರಿಹರದ ಮಾರ್ಸ್-ಕೆ ಸಂಸ್ಥೆ, ಕರ್ನಾಟಕ ಸಮಗ್ರ ಮತ್ತು ಸುಸ್ಥಿರ ಜಲ ಸಂಪನ್ಮೂಲ ನಿರ್ವಹಣೆ ಹೂಡಿಕೆ ಯೋಜನೆ, ಗೊಂದಿ ನೀರಾವರಿ ಆಧುನೀಕರಣ ಯೋಜನೆ, ಜಿಲ್ಲಾ ಜೈವಿಕ ಇಂಧನ, ಸಂಶೋಧನೆ, ಮಾಹಿತಿ ಪ್ರಾತ್ಯಕ್ಷಿಕೆ ಕೇಂದ್ರ ಹಾಗೂ ಟಾಟಾ ಸೋಲಾರ್ ಸಹಯೋಗದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.