ಆ್ಯಪ್ನಗರ

‘ರಾಮ ಜನ್ಮಸ್ಥಳದಲ್ಲಿ ಶೀಘ್ರ ಮಂದಿರ ನಿರ್ಮಿಸಲಿ ’

ಪ್ರತಿಯೊಬ್ಬ ಭಾರತೀಯರ ಜೀವನ ಪಾವನವಾಗಲು ಸಹಕಾರಿಯಾಗುವ ತತ್ವಾದರ್ಶ ಶ್ರೀರಾಮಾಯಣ ಮಹಾಕಾವ್ಯದಲ್ಲಿದೆ. ಇವುಗಳನ್ನು ಅಳವಡಿಸಿಕೊಳ್ಳದಿದ್ದರೆ ಭವಿಷ್ಯ ಮಾರಕವಾಗಲಿದೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್‌ ಮುತಾಲಿಕ್‌ ಹೇಳಿದರು.

Vijaya Karnataka 23 Dec 2018, 5:00 am
ಸಾಗರ : ಪ್ರತಿಯೊಬ್ಬ ಭಾರತೀಯರ ಜೀವನ ಪಾವನವಾಗಲು ಸಹಕಾರಿಯಾಗುವ ತತ್ವಾದರ್ಶ ಶ್ರೀರಾಮಾಯಣ ಮಹಾಕಾವ್ಯದಲ್ಲಿದೆ. ಇವುಗಳನ್ನು ಅಳವಡಿಸಿಕೊಳ್ಳದಿದ್ದರೆ ಭವಿಷ್ಯ ಮಾರಕವಾಗಲಿದೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್‌ ಮುತಾಲಿಕ್‌ ಹೇಳಿದರು.
Vijaya Karnataka Web SMR-21sgr1


ಇಲ್ಲಿನ ಶೃಂಗೇರಿ ಶಂಕರಮಠದ ಭಾರತೀತೀರ್ಥ ಸಭಾಭವನದಲ್ಲಿ ಗುರುವಾರ ರವೀಂದ್ರ ಪುಸ್ತಕಾಲಯ ಹಾಗೂ ಶೃಂಗೇರಿ ಶಂಕರಮಠ ಏರ್ಪಡಿಸಿದ್ದ ಡಾ.ಪಾವಗಡ ಪ್ರಕಾಶ್‌ ಅವರ ರಾಮಾಯಣ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.

ರಾಮನ ಜನ್ಮಸ್ಥಾನದಲ್ಲಿ ಇದುವರೆಗೂ ದೇವಸ್ಥಾನ ನಿರ್ಮಾಣವಾಗಿಲ್ಲ ಎನ್ನುವುದು ನೋವಿನ ಸಂಗತಿ. ಕೇಂದ್ರದಲ್ಲಿ ಬಿಜೆಪಿ ಆಡಳಿತ ಮತ್ತು ಪ್ರಧಾನಿ ನರೇಂದ್ರ ಮೋದಿ ನಿಶ್ಚಿತವಾಗಿ ರಾಮಮಂದಿರ ನಿರ್ಮಾಣ ಮಾಡುತ್ತಾರೆ ಎನ್ನುವ ವಿಶ್ವಾಸ ನಮಗೆಲ್ಲ ಇದೆ. ಎಲ್ಲರೂ 50ಪೈಸೆ ಅಂಚೆ ಕಾರ್ಡ್‌ನಲ್ಲಿ ರಾಮಮಂದಿರವನ್ನು ಶೀಘ್ರ ನಿರ್ಮಿಸಿ ಎಂದು ಪ್ರಧಾನಿಗೆ ಪತ್ರ ಬರೆಯುವ ಮೂಲಕ ಅಂಚೆ ಚಳವಳಿ ಪ್ರಾರಂಭಿಸಿ ಎಂದು ಕೋರಿದರು.

ಡಾ. ಪಾವಗಡ ಪ್ರಕಾಶ್‌ ಮಾತನಾಡಿ, ವಿಶ್ವಾದ್ಯಂತ ಕ್ರೈಸ್ತರು, ಮುಸ್ಲಿಮರು ಕೂಡ ರಾಮಾಯಣ ಓದುತ್ತಾರೆ. ಜನಸಾಮಾನ್ಯರಿಗೂ ಅರ್ಥವಾಗುವ ಕಥೆ ರಾಮಾಯಣ. ರಾಮಾಯಣದ ತತ್ವಾದರ್ಶಗಳ ಅಳವಡಿಕೆ ಅಗತ್ಯ ಎಂದರು. ಮಾಜಿ ಶಾಸಕ ಎಲ್‌.ಟಿ.ಹೆಗಡೆ, ರವೀಂದ್ರ ಗ್ರಂಥಾಲಯದ ಎ.ವೈ.ದಂತಿ, ಶೃಂಗೇರಿ ಶಂಕರಮಠದ ಅಶ್ವಿನಿಕುಮಾರ್‌, ವಿಶ್ವಹಿಂದೂ ಪರಿಷತ್‌ ತಾಲೂಕು ಅಧ್ಯಕ್ಷ ಐ.ವಿ.ಹೆಗಡೆ, ಬ್ರಾಹ್ಮಣ ಮಹಾಸಭಾದ ಸಂಘಟನಾ ಕಾರ್ಯದರ್ಶಿ ಮ.ಸ.ನಂಜುಂಡಸ್ವಾಮಿ, ಆರ್‌.ಎಂ.ಬಾಪಟ್‌ ಇತರರು ಇದ್ದರು. ಸವಿತಾ ಬದರೀಶ್‌ ನಿರ್ವಹಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ