ಸಾಗರ : ತಾಳಗುಪ್ಪ ಮತ್ತು ಕೋಟೆಗಂಗೂರು ಎರಡು ಕಡೆ ರೈಲ್ವೆ ಟರ್ಮಿನಲ್ ನಿರ್ಮಾಣಕ್ಕೆ ಸ್ಥಳ ಗುರುತಿಸಲಾಗಿದ್ದು, ತಾಂತ್ರಿಕ ತಜ್ಞರ ಸಮಿತಿ ಪರಿಶೀಲಿಸಿದ ನಂತರ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.
ತಾಲೂಕಿನ ಹೆಗ್ಗೋಡಿನ ನೀನಾಸಮ್ ಆವರಣದಲ್ಲಿಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈಲ್ವೆ ಟರ್ಮಿನಲ್ ಶಿವಮೊಗ್ಗದ ಕೋಟೆಗಂಗೂರು ಹಾಗೂ ತಾಳಗುಪ್ಪದಲ್ಲಿಆಗುವ ಸಂಬಂಧ ಕೆಲವು ಹಿರಿಯರು ಶಿವಮೊಗ್ಗ ಜಿಲ್ಲೆಯನ್ನು ಒಡೆಯುವ ಪ್ರಸ್ತಾಪ ಮಾಡಿರುವುದು ನನಗೆ ಬೇಸರ ತಂದಿದೆ. ಆಗಬೇಕಾದ ಕೆಲಸಗಳ ಬಗ್ಗೆ ಹಿರಿಯರಿಗೆ ಕೇಳುವ ನೈತಿಕ ಹಕ್ಕುಗಳಿವೆ. ಕೇಳುವ ವಿಧಾನದಲ್ಲಿಕೇಳಬೇಕು ಎಂದರು.
ರಾಜ್ಯದಲ್ಲಿಈಗಾಗಲೇ ನಾಲ್ಕು ಕಡೆ ಟರ್ಮಿನಲ್ ಕೆಲಸ ಮಾಡುತ್ತಿದೆ. ಚುನಾಯಿತ ಪ್ರತಿನಿಧಿಯಾಗಿ ಶಿವಮೊಗ್ಗ ಜಿಲ್ಲೆಯಲ್ಲಿರೈಲ್ವೆ ಸೇರಿದಂತೆ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡುತ್ತಿದ್ದೇನೆ. ಬೆಂಗಳೂರಲ್ಲಿಶಿವಮೊಗ್ಗದ ರೈಲುಗಳ ಪರಿಶೀಲನೆ ಆಗುತ್ತಿದ್ದ ಹಿನ್ನೆಲೆಯಲ್ಲಿಜಿಲ್ಲೆಯಲ್ಲಿಟರ್ಮಿನಲ್ ನಿರ್ಮಾಣ ಸಂಬಂಧ ಕೇಂದ್ರದಲ್ಲಿಪ್ರಸ್ತಾಪಿಸಿ ಮೊದಲ ಬಜೆಟ್ನಲ್ಲೇ 60 ಕೋಟಿ ರೂ. ಅನುದಾನ ಕಾದಿರಿಸಲಾಗಿದೆ. ರೈಲ್ವೆ ಇಲಾಖೆ ಅಧಿಕಾರಿಗಳು ಎರಡೂ ಕಡೆ ಸ್ಥಳ ಪರಿಶೀಲಿಸಿದ್ದಾರೆ ಎಂದರು.
ರೈಲ್ವೆ ಟರ್ಮಿನಲ್ ನಿರ್ಮಾಣಕ್ಕೆ ಅಂದಾಜು 30 ಎಕರೆ ಜಮೀನು ಅಗತ್ಯ. ಕೋಟೆಗಂಗೂರಿನಲ್ಲಿ17.2 ಎಕರೆ ಜಮೀನು ಹಾಗೂ ತಾಳಗುಪ್ಪದಲ್ಲಿ19.4 ಎಕರೆ ಜಮೀನು ಲಭ್ಯವಿದೆ. ತಾಂತ್ರಿಕ ಪರಿಶಿಲನೆ ನಂತರ ಅಂತಿಮ ತೀರ್ಮಾನವಾಗಲಿದ್ದು, ಇದರಲ್ಲಿರಾಜಕೀಯ ಹಸ್ತಕ್ಷೇಪ ಇಲ್ಲಎಂದು ಸ್ಪಷ್ಟಪಡಿಸಿದರು.
ರೈಲ್ವೆ ಹೋರಾಟ ಸಮಿತಿ ಮತ್ತು ಅದರ ಹೋರಾಟದ ಬಗ್ಗೆ ಅಪಾರ ಗೌರವವಿದೆ. ಟರ್ಮಿನಲ್ ವಿಷಯಲ್ಲಿಸ್ವಾಗತ ಮನೋಭಾವ ಅಗತ್ಯ ಹೊರತು ರಾಜಕೀಯ ಅನಗತ್ಯ. ಸ್ಥಳದ ಬಗ್ಗೆ ಇನ್ನೂ ಚರ್ಚೆಹಂತದಲ್ಲಿದೆ. ತಾಳಗುಪ್ಪದಲ್ಲಿರೈಲ್ವೆ ಟರ್ಮಿನಲ್ ನಿರ್ಮಾಣಕ್ಕೆ ನನ್ನದೇನು ಅಭ್ಯಂತರವಿಲ್ಲ. ಆದರೆ ರೈಲ್ವೆ ಅಧಿಕಾರಿಗಳು, ತಾಂತ್ರಿಕವಾಗಿ ಇದನ್ನು ಅನುಮೋದಿಸಬೇಕಾಗಿದೆ. ಟರ್ಮಿನಲ್ ಕೇವಲ ಜಿಲ್ಲೆಆಸ್ತಿ ಮಾತ್ರವಲ್ಲ. ಇದನ್ನು ಅರ್ಥಮಾಡಿಕೊಂಡು ಎಲ್ಲರೂ ಸಹಕಾರ ನೀಡಬೇಕು ಎಂದರು.
ಶಿಕಾರಿಪುರ ಜಿಲ್ಲೆಇಲ್ಲ: ಶಿಕಾರಿಪುರವನ್ನು ಜಿಲ್ಲೆಮಾಡಲಾಗುತ್ತದೆ ಎನ್ನುವುದು ಕೇವಲ ಊಹಾಪೋಹದ ಚರ್ಚೆ. ಆ ರೀತಿಯ ಯಾವ ಪ್ರಸ್ತಾಪವೂ ಇಲ್ಲ. ಜಿಲ್ಲೆಯ ಜನರು ಗಾಳಿಮಾತಿಗೆ ಕಿವಿಕೊಡುವ ಅಗತ್ಯವಿಲ್ಲ. ರಾಜ್ಯ ಸರಕಾರದ ಬಳಿ ಇಂತಹ ಯಾವುದೇ ವಿಷಯ ಚರ್ಚೆಯಲ್ಲಿಇಲ್ಲಎಂದು ಬಿವೈಆರ್ ಸ್ಪಷ್ಟಪಡಿಸಿದರು.
ಶಾಸಕ ಎಚ್.ಹಾಲಪ್ಪ ವಿಧಾನ ಪರಿಷತ್ ಸದಸ್ಯ ಎಸ್.ರುದ್ರೇಗೌಡ, ಪ್ರಮುಖರಾದ ಎಸ್.ದತ್ತಾತ್ರಿ, ಪ್ರಸನ್ನ ಕೆರೆಕೈ, ಗುರುಮೂರ್ತಿ, ದೇವೇಂದ್ರಪ್ಪ ಯಲಕುಂದ್ಲಿ, ಯು.ಎಚ್.ರಾಮಪ್ಪ, ಟಿ.ಡಿ.ಮೇಘರಾಜ್ ಇತರರು ಇದ್ದರು.
ಅಡಕೆ ಬಗ್ಗೆ ಕೇಂದ್ರದ ಗಮನ ಸೆಳೆಯುತ್ತೇವೆ : ಕೇಂದ್ರ ಸರಕಾರವು 16 ದೇಶಗಳ ಜತೆಗೆ ಅಡಕೆ ಆಮದು ಮಾಡಿಕೊಳ್ಳುವ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ಒಪ್ಪಂದದಿಂದ ಅಡಕೆ ಬೆಳೆಗಾರರ ಮೇಲೆ ಆಗುವ ಅಡ್ಡ ಪರಿಣಾಮ ಕುರಿತು ಕೇಂದ್ರದ ಗಮನ ಸೆಳೆಯಲಾಗುತ್ತದೆ. ಮಲೆನಾಡು ಭಾಗದ ಎಲ್ಲಸಂಸದರ ಜತೆ ಚರ್ಚಿಸಿ ಅಡಕೆ ಬೆಳೆಗಾರರ ಹಿತಕಾಯಲು ಕೇಂದ್ರ ಸಚಿವರನ್ನು ಭೇಟಿ ಮಾಡಿ ಬೆಳೆಗಾರರ ಹಿತ ಕಾಪಾಡಲಾಗುವುದು. ಅಡಕೆ ಬೆಳೆಗಾರರು ಆತಂಕಕ್ಕೆ ಒಳಗಾಗುವುದು ಬೇಡ.
-ಬಿ.ವೈ.ರಾಘವೇಂದ್ರ, ಸಂಸದರು.