ಶಿರಾಳಕೊಪ್ಪ: 70 ವರ್ಷಗಳ ತಪಸ್ಸಿನ ನಂತರ ಭಾರತ ದೇಶ ಉದ್ಧಾರ ಮಾಡಲು ಮೋದಿ ಬರಬೇಕಾಯಿತು. ಈಗ ದೇಶ ಸಮರ್ಥ ನಾಯಕನ ಕೈಗಳಲ್ಲಿದೆ ಎಂದು ಟೀಮ್ ಮೋದಿ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ಪಟ್ಟಣದ ಬಸ್ ನಿಲ್ದಾಣದಲ್ಲಿ ಗುರುವಾರ ನಡೆದ ಮೋದಿಗಾಗಿ ನಾವು ಕಾರ್ಯಕ್ರಮದ ದಿಕ್ಸೂಚಿ ಭಾಷಣದಲ್ಲಿ ಮಾತನಾಡಿದರು.
ಭಾರತ ಮಾತ್ರವಲ್ಲದೇ ಜಗತ್ತನ್ನೆ ಕಾಡುವ ಭಯೋತ್ಪಾದನೆ ಸರ್ವನಾಶ ಮಾಡಲು ಮತ್ತೊಮ್ಮೆ ಮೋದಿ ದೇಶದ ಚುಕ್ಕಾಣಿ ಹಿಡಿಯುವುದು ಅನಿವಾರ್ಯ. ರೈಲ್ವೆ ನಿಲ್ದಾಣದಲ್ಲಿ ಟೀ ಮಾರುತಿದ್ದ ಯುವಕನಿಗೆ ಮಾತ್ರ ದೇಶದ ಬಡವರ ಕಣ್ಣೀರಿನ ಅರಿವಿದೆ. ಮತ್ತೊಮ್ಮೆ ಮೋದಿಗೆ ಅಧಿಕಾರ ನೀಡಿದರೆ ಭಾರತ ವಿಶ್ವಗುರು ಆಗುವುದರಲ್ಲಿ ಸಂದೇಹವಿಲ್ಲ ಎಂದರು.
ರೈತರ ಸಾಲ ಮನ್ನಾ ಮಾಡುವ ಬದಲು ಅವರಿಗೆ ನೀರು, ಬೀಜ , ವಿದ್ಯುತ್ ಶಕ್ತಿ ನೀಡಿದರೆ ಸ್ವಾವಲಂಬಿ ಬದುಕು ನಡೆಸುತ್ತಾರೆ ಎಂಬ ಪರಿಕಲ್ಪನೆ ಇದೆ. ಮೋದಿಯವರ ಯೋಜನೆಗಳು 10 ವರ್ಷಗಳ ನಂತರವೂ ಪ್ರಸ್ತುತವಾಗಿರುತ್ತದೆ. ನಮ್ಮಲ್ಲಿ ಸಮಸ್ಯೆಗಳಿರುವುದು ಜಾತಿಯದ್ದಲ್ಲ, ಆರ್ಥಿಕತೆಯದ್ದು . ನಾವು ಆರ್ಥಿಕತೆ ಬಲಪಡಿಸಿಕೊಂಡು ಸ್ವಾವಲಂಬಿಗಳಾದರೆ ಜಾತಿ ಲೆಕ್ಕಕ್ಕೆ ಬರುವುದಿಲ್ಲ ಎಂದರು.
ದಿವ್ಯ ಸಾನ್ನಿಧ್ಯ ವಹಿಸಿದ್ದ ಅಭಿನವ ಮಹಾಂತ ದೇಶೀಕೇಂದ್ರ ಸ್ವಾಮಿಜಿ ಆಶೀರ್ವಚನ ನೀಡಿ, ಕಲಿಯುಗದಲ್ಲಿ ಸಂಘಟನೆ ಮುಖ್ಯವಾಗಿದೆ. ಇಂದಿನ ಯುವ ಜನತೆಗೆ ದೇಶಭಕ್ತಿಯ ಸಂಸ್ಕಾರದ ಅಗತ್ಯವಿದೆ. ದೇಶ ಮುನ್ನಡೆಸುವಲ್ಲಿ ಮೋದಿ ಶಕ್ತರಾಗಿದ್ದಾರೆ, ಅವರಿಗೆ ಎಲ್ಲರೂ ಶಕ್ತಿ ತುಂಬಬೇಕಾಗಿದೆ ಎಂದರು. ಟೀಮ್ ಮೋದಿ ಜಿಲ್ಲಾ ಸಂಚಾಲಕ ಶಿವಕುಮಾರ್ ಪ್ರಾಸ್ತಾವಿಕ ಮಾತನಾಡಿದರು. ಇದೇ ಸಂದರ್ಭ ಇಂಡಿಹಳ್ಳಿ ನಾಗರಾಜ್ ರಚಿಸಿದ ಮೋದಿ ಸಾಂಗ್ ಲೋಕಾರ್ಪಣೆಯಾಯಿತು. ಹಾಡಿಗೆ ನೆರೆದ ಪ್ರೇಕ್ಷ ಕರೆಲ್ಲರೂ ಧ್ವನಿಗೂಡಿಸಿದರು. ಬಿಎಸ್ಎಫ್ ಯೋಧ ಕುಮಾರ್ ಗಂಗಾಧರಪ್ಪ ನಂದಿಹಳ್ಳಿ ಅವರನ್ನು ಸನ್ಮಾನಿಸಲಾಯಿತು. ಪವನ್ ನಿರೂಪಿಸಿ, ಚೇತನ್ ಸ್ವಾಗತಿಸಿ, ಅಂಜನ್ ಪ್ರಾರ್ಥಿಸಿ, ನಿರಂಜನ್ ವಂದಿಸಿದರು.
ಪಟ್ಟಣದ ಬಸ್ ನಿಲ್ದಾಣದಲ್ಲಿ ಗುರುವಾರ ನಡೆದ ಮೋದಿಗಾಗಿ ನಾವು ಕಾರ್ಯಕ್ರಮದ ದಿಕ್ಸೂಚಿ ಭಾಷಣದಲ್ಲಿ ಮಾತನಾಡಿದರು.
ಭಾರತ ಮಾತ್ರವಲ್ಲದೇ ಜಗತ್ತನ್ನೆ ಕಾಡುವ ಭಯೋತ್ಪಾದನೆ ಸರ್ವನಾಶ ಮಾಡಲು ಮತ್ತೊಮ್ಮೆ ಮೋದಿ ದೇಶದ ಚುಕ್ಕಾಣಿ ಹಿಡಿಯುವುದು ಅನಿವಾರ್ಯ. ರೈಲ್ವೆ ನಿಲ್ದಾಣದಲ್ಲಿ ಟೀ ಮಾರುತಿದ್ದ ಯುವಕನಿಗೆ ಮಾತ್ರ ದೇಶದ ಬಡವರ ಕಣ್ಣೀರಿನ ಅರಿವಿದೆ. ಮತ್ತೊಮ್ಮೆ ಮೋದಿಗೆ ಅಧಿಕಾರ ನೀಡಿದರೆ ಭಾರತ ವಿಶ್ವಗುರು ಆಗುವುದರಲ್ಲಿ ಸಂದೇಹವಿಲ್ಲ ಎಂದರು.
ರೈತರ ಸಾಲ ಮನ್ನಾ ಮಾಡುವ ಬದಲು ಅವರಿಗೆ ನೀರು, ಬೀಜ , ವಿದ್ಯುತ್ ಶಕ್ತಿ ನೀಡಿದರೆ ಸ್ವಾವಲಂಬಿ ಬದುಕು ನಡೆಸುತ್ತಾರೆ ಎಂಬ ಪರಿಕಲ್ಪನೆ ಇದೆ. ಮೋದಿಯವರ ಯೋಜನೆಗಳು 10 ವರ್ಷಗಳ ನಂತರವೂ ಪ್ರಸ್ತುತವಾಗಿರುತ್ತದೆ. ನಮ್ಮಲ್ಲಿ ಸಮಸ್ಯೆಗಳಿರುವುದು ಜಾತಿಯದ್ದಲ್ಲ, ಆರ್ಥಿಕತೆಯದ್ದು . ನಾವು ಆರ್ಥಿಕತೆ ಬಲಪಡಿಸಿಕೊಂಡು ಸ್ವಾವಲಂಬಿಗಳಾದರೆ ಜಾತಿ ಲೆಕ್ಕಕ್ಕೆ ಬರುವುದಿಲ್ಲ ಎಂದರು.
ದಿವ್ಯ ಸಾನ್ನಿಧ್ಯ ವಹಿಸಿದ್ದ ಅಭಿನವ ಮಹಾಂತ ದೇಶೀಕೇಂದ್ರ ಸ್ವಾಮಿಜಿ ಆಶೀರ್ವಚನ ನೀಡಿ, ಕಲಿಯುಗದಲ್ಲಿ ಸಂಘಟನೆ ಮುಖ್ಯವಾಗಿದೆ. ಇಂದಿನ ಯುವ ಜನತೆಗೆ ದೇಶಭಕ್ತಿಯ ಸಂಸ್ಕಾರದ ಅಗತ್ಯವಿದೆ. ದೇಶ ಮುನ್ನಡೆಸುವಲ್ಲಿ ಮೋದಿ ಶಕ್ತರಾಗಿದ್ದಾರೆ, ಅವರಿಗೆ ಎಲ್ಲರೂ ಶಕ್ತಿ ತುಂಬಬೇಕಾಗಿದೆ ಎಂದರು. ಟೀಮ್ ಮೋದಿ ಜಿಲ್ಲಾ ಸಂಚಾಲಕ ಶಿವಕುಮಾರ್ ಪ್ರಾಸ್ತಾವಿಕ ಮಾತನಾಡಿದರು. ಇದೇ ಸಂದರ್ಭ ಇಂಡಿಹಳ್ಳಿ ನಾಗರಾಜ್ ರಚಿಸಿದ ಮೋದಿ ಸಾಂಗ್ ಲೋಕಾರ್ಪಣೆಯಾಯಿತು. ಹಾಡಿಗೆ ನೆರೆದ ಪ್ರೇಕ್ಷ ಕರೆಲ್ಲರೂ ಧ್ವನಿಗೂಡಿಸಿದರು. ಬಿಎಸ್ಎಫ್ ಯೋಧ ಕುಮಾರ್ ಗಂಗಾಧರಪ್ಪ ನಂದಿಹಳ್ಳಿ ಅವರನ್ನು ಸನ್ಮಾನಿಸಲಾಯಿತು. ಪವನ್ ನಿರೂಪಿಸಿ, ಚೇತನ್ ಸ್ವಾಗತಿಸಿ, ಅಂಜನ್ ಪ್ರಾರ್ಥಿಸಿ, ನಿರಂಜನ್ ವಂದಿಸಿದರು.