ಆ್ಯಪ್ನಗರ

ತಾವರೆಕೆರೆ ಸ್ವಚ್ಛಗೊಳಿಸಿದ ಗವಟೂರು ಪಡೆ

ಸೇವೆ ಮಾಡಲು ಇಂತಹದೆ ಕ್ಷೇತ್ರವೆಂಬುದಿಲ್ಲ, ಮಾಡುವ ಮನೋಭಾವನೆ ಇದ್ದರೆ ಸಾಕು ಎಂಬುದಕ್ಕೆ ಗವಟೂರು ಗ್ರಾಮದ ಕೆಲ ಯುವಕರ ಪರಿಸರ ಪ್ರಜ್ಞೆಯೇ ಸಾಕ್ಷಿಯಾಗಿದೆ.

Vijaya Karnataka 5 Jun 2019, 5:00 am
ರಿಪ್ಪನ್‌ಪೇಟೆ: ಸೇವೆ ಮಾಡಲು ಇಂತಹದೆ ಕ್ಷೇತ್ರವೆಂಬುದಿಲ್ಲ, ಮಾಡುವ ಮನೋಭಾವನೆ ಇದ್ದರೆ ಸಾಕು ಎಂಬುದಕ್ಕೆ ಗವಟೂರು ಗ್ರಾಮದ ಕೆಲ ಯುವಕರ ಪರಿಸರ ಪ್ರಜ್ಞೆಯೇ ಸಾಕ್ಷಿಯಾಗಿದೆ.
Vijaya Karnataka Web SMR-3rpt1


ಸೋಮವಾರ ಮುಂಜಾನೆ ಪಟ್ಟಣದ ಶಿವಮೊಗ್ಗ-ಹೊಸನಗರ ರಾಜ್ಯ ಹೆದ್ದಾರಿ ಪಕ್ಕದಲ್ಲೇ ಇರುವ ತಾವರೆಕೆರೆಯನ್ನು ಸ್ವಚ್ಛಗೊಳಿಸುವುದರ ಮೂಲಕ ಗ್ರಾಮಸ್ಥರ ಪ್ರಶಂಸೆಗೆ ಪಾತ್ರರಾದರು .

ರಾಮಚಂದ್ರಾಪುರ ಮಠ, ಕೊಡಚಾದ್ರಿ-ಸಿಗಂದೂರು-ಕೊಲ್ಲೂರು ಹೀಗೆ ಪ್ರವಾಸಿ ಮತ್ತು ಪವಿತ್ರ ಯಾತ್ರಾ ಸ್ಥಳಗಳಿಗೆ ಪ್ರತಿನಿತ್ಯ ಸಾವಿರಾರು ಭಕ್ತರು ಮತ್ತು ಪ್ರವಾಸಿಗರು ಈ ಮಾರ್ಗದ ಮೂಲಕ ತೆರಳುತ್ತಾರೆ. ರಸ್ತೆಯ ಬದಿಯಲ್ಲಿಯೆ ಈ ಕೆರೆ ಇರುವುದರಿಂದ ಪ್ರವಾಸಿಗರು ಕುಡಿದು ಖಾಲಿಯಾದ ಪ್ಲಾಸ್ಟಿಕ್‌ ಬಾಟಲ್‌ ಮತ್ತು ಮದ್ಯದ ಖಾಲಿಬಾಟಲಿ ಸೇರಿದಂತೆ ಇನ್ನಿತರ ತ್ಯಾಜ್ಯ ವಸ್ತುಗಳನ್ನು ಕೆರೆಗೆ ಎಸೆದು ಹೋಗುತ್ತಿದ್ದರಿಂದ ಸುತ್ತಮುತ್ತಲಿನ ಪರಿಸರದ ಮೇಲೆ ವ್ಯತ್ತಿರಿಕ್ತ ಪರಿಣಾಮ ಬೀರಿತ್ತು. ಅಲ್ಲದೆ, ಇದ್ದ ಅಲ್ಪಸ್ವಲ್ಪ ನೀರು ಕಲುಷಿತಗೊಂಡು ದುರ್ನಾತ ಬೀರುವಂತಾಗಿ ಕೆರೆಯ ದಂಡೆಯ ಮೇಲೆ ಓಡಾಡದಂತಹ ಸ್ಥಿತಿ ನಿರ್ಮಾಣವಾಗಿತ್ತು. ಜಲಚರಗಳಾದ ಕಪ್ಪೆಗಳು, ಗೊಜಮಟ್ಟೆಗಳು ಬತ್ತಿ ಹೋಗಿರುವ ಕೆರೆಯಲ್ಲಿ ತ್ಯಾಜ್ಯಗಳಿಂದ ಮೃತಪಟ್ಟಿದ್ದವು.

ಇದನ್ನು ಕಂಡ ಯುವಕರ ತಂಡ ಬೆಳ್ಳಂಬೆಳಗ್ಗೆ ಕೆರೆ ಬಳಿ ಜಮಾಯಿಸಿ ಮದ್ಯದ ನೂರಾರು ಬಾಟಲಿಗಳು , ಪ್ಲಾಸ್ಟಿಕ್‌ ಮತ್ತು ಇನ್ನಿತರ ತ್ಯಾಜ್ಯವಸ್ತುಗಳನ್ನು ಸಂಗ್ರಹಿಸಿ ಆಟೋದಲ್ಲಿ ತುಂಬಿ ಬೇರೆಡೆಗೆ ಸಾಗಿಸಿದರು. ಕಲುಷಿತಗೊಂಡ ಕೆರೆಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿದರು.

ಇನ್ನಾದರೂ ಇಲ್ಲಿನ ಕೆರೆಗೆ ತ್ಯಾಜ್ಯ ವಸ್ತುಗಳನ್ನು ಎಸೆಯದಂತೆ ಮತ್ತು ಜಲಚರಗಳನ್ನು ಉಳಿಸುವಂತಹ ನಾಮಫಲಕವನ್ನು ಅಳವಡಿಸುವುದು ಹಾಗೂ ಅಕಸ್ಮಿಕವಾಗಿ ಎಸೆದವರ ವಿರುದ್ಧ ದಂಡ ಹಾಕುವಂತೆ ಮಾಡಬೇಕೆಂದು ಗ್ರಾಮಾಡಳಿತಕ್ಕೆ ಯುವಕರು ಸಲಹೆ ನೀಡಿದ್ದಾರೆ.

ಸ್ವಚ್ಛತಾ ಕಾರ್ಯದಲ್ಲಿ ವಾಸುಶೆಟ್ಟಿ, ಸುಧೀಂದ್ರ ಪೂಜಾರ್‌,ಲಕ್ಷ ್ಮಣ ಆಟೋ, ವೈ.ಜೆ.ಕೃಷ್ಣ, ಸುರೇಶ್‌,ಅರ್ಚನಾ ವಾಸುಶೆಟ್ಟಿ, ಅರುಣಾ, ಸತೀಶ್‌ ಮತ್ತಿತರರು ಪಾಲ್ಗೊಂಡಿದ್ದರು.

--------
ಗ್ರಾಮದ ಯುವ ಪಡೆ ಒಂದಾಗಿ ಗ್ರಾಮಸ್ವಚ್ಛತೆಗೆ ಆದ್ಯತೆ ನೀಡಿರುವುದು ಸ್ವಾಗತಾರ್ಹ. ಯುವಕರ ತಂಡ ನಮ್ಮೂರಿನ ಕೆರೆಯನ್ನು ನಾವುಗಳೇ ಏಕಿ ಸ್ವಚ್ಛ ಮಾಡಬಾರದು ಎಂದು ಯೋಚಿಸಿ ಕಾರ್ಯಪ್ರವೃತ್ತರಾಗಿದ್ದು, ಇನ್ನೊಬ್ಬರಿಗೆ ಪ್ರೇರಣೆಯಾಗಿದೆ.
-ದುಂಡರಾಜಪ್ಪ ಗೌಡ, ಗವಟೂರು, ರಿಪ್ಪನ್‌ಪೇಟೆ ಗ್ರಾ.ಪಂ. ಮಾಜಿ ಉಪಾಧ್ಯಕ್ಷ


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ