ಆ್ಯಪ್ನಗರ

ಬಿಜೆಪಿ ಪ್ರಣಾಳಿಕೆ ಬರೀ ಘೋಷಣೆ

ಬಿಜೆಪಿ ಈಗ ಜಾತಿ, ಧರ್ಮದ ಹೆಸರಲ್ಲಿ ಚುನಾವಣೆ ಮಾಡುತ್ತಿದೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್‌ ಆಪಾದಿಸಿದರು.

Vijaya Karnataka 12 Apr 2019, 5:00 am
ಶಿರಾಳಕೊಪ್ಪ: ಬಿಜೆಪಿ ಈಗ ಜಾತಿ, ಧರ್ಮದ ಹೆಸರಲ್ಲಿ ಚುನಾವಣೆ ಮಾಡುತ್ತಿದೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್‌ ಆಪಾದಿಸಿದರು.
Vijaya Karnataka Web SMR-11SLKP01 PHOTO 01


ಪಟ್ಟಣದಲ್ಲಿ ಗುರುವಾರ ಜೆಡಿಎಸ್‌, ಕಾಂಗ್ರೆಸ್‌ ಮೈತ್ರಿ ಅಭ್ಯರ್ಥಿ ಪರವಾಗಿ ನಡೆದ ಪ್ರಮುಖರ ಸಭೆ ಉದ್ದೇಶಿಸಿ ಅವರು ಮಾತನಾಡಿ, ಬಿಜೆಪಿ ಕಳೆದ 5ವರ್ಷದ ಹಿಂದೆ ಘೋಷಣೆ ಮಾಡಿದ್ದ ಚುನಾವಣೆ ಪ್ರಣಾಳಿಕೆಗಳನ್ನು ಜಾರಿಗೆ ತರದೆ ಮೂಲೆಗೆ ಎಸೆದಿದೆ ಎಂದರು.

ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್‌ ಭಾರತದಲ್ಲಿ ಮೋದಿ ಸರಕಾರ ಮತ್ತೆ ಆಡಳಿತಕ್ಕೆ ಬರಬೇಕು ಎಂದು ಹೇಳಿಕೆ ನೀಡಿದ್ದಾರೆ. ಅವರು ಅಪ್ಪಿತಪ್ಪಿ ರಾಹುಲ್‌ ಗಾಂಧಿ ಪ್ರಧಾನಿ ಆಗಬೇಕೆಂದು ಹೇಳಿದ್ದರೆ ಕಾಂಗ್ರೆಸ್‌ ನಾಯಕರನ್ನು ದೇಶ ದ್ರೋಹಿಗಳು ಎಂದು ದೂಷಿಸುತ್ತಿದ್ದರು ಎಂದು ಲೇವಡಿ ಮಾಡಿದರು.

ಕುಡಿಯುವ ನೀರಿಗಾಗಿ ಜಿ.ಪಂ.ಮೂಲಕ ನೀಡುತ್ತಿದ್ದ ಅನುದಾನವನ್ನು ಕೇಂದ್ರ ಸರಕಾರ ಕಡಿತಗೊಳಿಸಿದೆ ಹಾಗೂ ನರೇಗಾ ಹಣ ಏಕೆ ಬಿಡುಗಡೆ ಮಾಡಿಲ್ಲ ಎಂದು ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಉತ್ತರಿಸಬೇಕೆಂದು ಆಗ್ರಹಿಸಿದರು. ಸಭೆಯಲ್ಲಿ ಜೆಡಿಎಸ್‌ ಮುಖಂಡರಾದ ಎಚ್‌.ಟಿ.ಬಳಿಗಾರ್‌, ಶಿಕಾರಿಪುರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಗೋಣಿ ಮಾಲತೇಶ್‌, ನಗರದ ಮಹಾದೇವಪ್ಪ, ವಿಧಾನ ಪರಿಷತ್‌ ಮಾಜಿ ಸದಸ್ಯ ಶಾಂತವೀರಪ್ಪ ಗೌಡ, ಜಿ.ಪಂ. ಸದಸ್ಯ ನರಸಿಂಗ್‌ ನಾಯ್ಕ್‌, ಶಿರಾಳಕೊಪ್ಪ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಜೆ.ಪಕ್ಕೀರಪ್ಪ , ಕಾರ್ಯದರ್ಶಿ ಮಿತ್ರೇಶ್‌, ಕಾಂಗ್ರೆಸ್‌ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ನಯಾಜ್‌ ಅಹಮದ್‌, ಜೆಡಿಎಸ್‌ ತಾಲೂಕು ಅಧ್ಯಕ್ಷ ಬಿಳಿಕಿ ನಾಗರಾಜ್‌ ಗೌಡ, ಟೌನ್‌ ಅಧ್ಯಕ್ಷ ರಾಘವೇಂದ್ರ, ಮಕ್ಬೂಲ್‌ ಸಾಬ್‌, ಉಮೇಶ್‌ ಕೋಡಿಹಳ್ಳಿ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ