ಆ್ಯಪ್ನಗರ

ಮತ್ಸ್ಯ ಮರಣದ ಕಾರಣವಿನ್ನೂ ನಿಗೂಢ

'ಮತ್ತೂರು ಮತ್ಸ್ಯಧಾಮ'ದಲ್ಲಿ ಸಾವಿರಾರು ಜಲಚರಗಳ ಪ್ರಾಣ ಕಸಿದ ಪ್ರಕರಣ ಸಂಬಂಧ ಮೀನುಗಾರಿಕೆ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಹಲವು ಕಾರಣಗಳನ್ನೇನೋ ನೀಡುತ್ತಿದ್ದಾರೆ. ಆದರೆ, ಅವರ ಕೈಗೆ ಇನ್ನೂ ವರದಿಯೇ ಸೇರಿಲ್ಲ!

Vijaya Karnataka 29 Apr 2019, 5:00 am
ಶಿವಮೊಗ್ಗ: 'ಮತ್ತೂರು ಮತ್ಸ್ಯಧಾಮ'ದಲ್ಲಿ ಸಾವಿರಾರು ಜಲಚರಗಳ ಪ್ರಾಣ ಕಸಿದ ಪ್ರಕರಣ ಸಂಬಂಧ ಮೀನುಗಾರಿಕೆ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಹಲವು ಕಾರಣಗಳನ್ನೇನೋ ನೀಡುತ್ತಿದ್ದಾರೆ. ಆದರೆ, ಅವರ ಕೈಗೆ ಇನ್ನೂ ವರದಿಯೇ ಸೇರಿಲ್ಲ!
Vijaya Karnataka Web the cause of the fishhes death till mystery
ಮತ್ಸ್ಯ ಮರಣದ ಕಾರಣವಿನ್ನೂ ನಿಗೂಢ


ಮತ್ತೂರು, ಹೊಸಹಳ್ಳಿ ಮಧ್ಯೆ ಹರಿಯುವ ತುಂಗಾ ನದಿಯಲ್ಲಿ ಇತ್ತೀಚೆಗೆ ಮೀನುಗಳ ಮಾರಣಹೋಮವಾದ ತಕ್ಷಣ ಭದ್ರಾವತಿಯ ಪಾಲಿಟೆಕ್ನಿಕ್‌ ಕಾಲೇಜು ಪ್ರಯೋಗಾಲಯಕ್ಕೆ ನೀರಿನ ಮಾದರಿ ಕಳುಹಿಸಲಾಗಿತ್ತು. ಅದರ ವರದಿ ಕೂಡ ಬಂದಿರುವುದಾಗಿ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ. ಆದರೆ, ಪ್ರಯೋಗಾಲಯದ ವರದಿ ನೀಡುವಂತೆ ಕೇಳಿದರೆ, 'ತಮಗೆ ಇನ್ನೂ ವರದಿಯ ಪ್ರತಿ ಕೈಸೇರಿಲ್ಲ. ಅದರ ಬಗ್ಗೆ ಕೆಲವು ಮಾಹಿತಿಗಳಷ್ಟೇ ಬಂದಿವೆ' ಎಂದು ಸಬೂಬು ನೀಡುತ್ತಾರೆ.

'ಮೀನುಗಳು ಸಾಯುವುದಕ್ಕೆ ನೀರಿನಲ್ಲಿ ಪಿಎಚ್‌(ರಸಸಾರ) ಪ್ರಮಾಣ ಏರಿಕೆ ಹಾಗೂ ಕರಗಿನ ಆಮ್ಲಜನಕ ಪ್ರಮಾಣ ಕಡಿಮೆ ಆಗಿರುವುದೇ ಕಾರಣ. ನದಿಯ ಅಕ್ಕಪಕ್ಕ ಅಡಕೆ, ಭತ್ತದ ಗದ್ದೆಗಳಿವೆ. ಅಲ್ಲಿ ಬಳಕೆ ಮಾಡಿರಬಹುದಾದ ರಾಸಾಯನಿಕ, ಫರ್ಟಿಲೈಸರ್‌ಗಳಿಂದಾಗಿ ಹೊಳೆಯ ನೀರಿನಲ್ಲಿ ಪಾಚಿಸೃಷ್ಟಿಯಾಗಿದೆ. ಜತೆಗೆ, ನೀರೂ ಕಡಿಮೆ ಇದ್ದುದ್ದರಿಂದ ಮೀನುಗಳು ಮೃತಪಟ್ಟಿರಬಹುದು. ಒಟ್ಟಾರೆ, ಮೀನಿಗೆ ಬೇಡವಾದ ಎಲ್ಲ ರಾಸಾಯನಿಕಗಳು ನೀರಲ್ಲಿ ಕಂಡುಬಂದಿದೆ' ಎಂದು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ