ಆ್ಯಪ್ನಗರ

ಮಹಿಳೆ ಸಾವು, ಮೊತ್ತೊಬ್ಬನ ಸ್ಥಿತಿ ಗಂಭೀರ

ಅತಿವೇಗ ಮತ್ತು ನಿರ್ಲಕ್ಷ್ಯತನದಿಂದ ವಾಹನ ಚಾಲನೆ ಮಾಡಿದ ಪರಿಣಾಮ ಮಹಿಳೆ ಸ್ಥಳದಲ್ಲಿಯೇ ಮೃತಪಟ್ಟು ಸರಣಿ ಅಪಘಾತ ಸಂಭವಿಸಿದ ಘಟನೆ ತಾಲೂಕಿನ ಬಟ್ಟೆಮಲ್ಲಪ್ಪದಲ್ಲಿಬುಧವಾರ ಸಂಜೆ ನಡೆದಿದೆ.

Vijaya Karnataka 19 Sep 2019, 8:13 pm
ಹೊಸನಗರ (ಶಿವಮೊಗ್ಗ): ಅತಿವೇಗ ಮತ್ತು ನಿರ್ಲಕ್ಷ್ಯತನದಿಂದ ವಾಹನ ಚಾಲನೆ ಮಾಡಿದ ಪರಿಣಾಮ ಮಹಿಳೆ ಸ್ಥಳದಲ್ಲಿಯೇ ಮೃತಪಟ್ಟು ಸರಣಿ ಅಪಘಾತ ಸಂಭವಿಸಿದ ಘಟನೆ ತಾಲೂಕಿನ ಬಟ್ಟೆಮಲ್ಲಪ್ಪದಲ್ಲಿಬುಧವಾರ ಸಂಜೆ ನಡೆದಿದೆ.
Vijaya Karnataka Web the death of a woman the condition of a man is serious
ಮಹಿಳೆ ಸಾವು, ಮೊತ್ತೊಬ್ಬನ ಸ್ಥಿತಿ ಗಂಭೀರ


ಅಪಘಾತದಲ್ಲಿಮೃತಪಟ್ಟ ಮಹಿಳೆಯನ್ನು ಭಾರತಿ(31) ಎಂದು ಗುರುತಿಸಲಾಗಿದೆ. ಸ್ಥಳೀಯ ನಿವಾಸಿ ಗಣೇಶ ಎಂಬಾತ ಮಾರುತಿ ರಿಟ್‌್ಜ ಕಾರನ್ನು ಅಡ್ಡಾದಿಡ್ಡಿಯಾಗಿ ಚಲಾಯಿಸಿದ್ದಾನೆ. ಮೊದಲಿಗೆ ಮುಡುಬ ಗ್ರಾಮದ ಬಳಿ ಎದುರಿನಿಂದ ಬಂದ ಬೈಕ್‌ ಸವಾರನಿಗೆ ಡಿಕ್ಕಿ ಹೊಡಿಸಿದ್ದಾನೆ. ಅಪಘಾತವಾದರೂ ಕಾರು ನಿಲ್ಲಿಸದೇ ಚಲಾಯಿಸಿದ್ದು, ಬಟ್ಟೆಮಲ್ಲಪ್ಪ ವೃತ್ತದಲ್ಲಿರಸ್ತೆ ದಾಟುತ್ತಿದ್ದ ಭಾರತಿ ಅವರಿಗೆ ಡಿಕ್ಕಿ ಹೊಡೆದು ಸಮೀಪದ ಮೋರಿಯ ಕಟ್ಟೆಗೆ ಕಾರು ಗುದ್ದಿದೆ. ಬೈಕ್‌ ಸವಾರ ಹೂವಿನಕೋಣೆ ಗ್ರಾಮದ ಹಾಲೇಶ(40) ಅವರಿಗೆ ಗಂಭೀರ ಗಾಯಗಳಾಗಿದೆ. ಚಾಲಕ ಗಣೇಶ ಕುಡಿದ ಮತ್ತಿನಲ್ಲಿದ್ದು, ಸ್ಥಳೀಯರು ಆತನಿಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ. ಸ್ಥಳೀಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ