ಶಿರಾಳಕೊಪ್ಪ: ಹೋರಿ ಬೆದರಿಸುವ ಸ್ಪರ್ಧೆಯಲ್ಲಿಹೋರಿ ತಿವಿದು ಯುವಕ ನೊಬ್ಬ ಮೃತಪಟ್ಟ ಘಟನೆ ಬುಧವಾರ ಶಿಕಾರಿಪುರ ತಾಲೂಕು ತಡಸನಹಳ್ಳಿ ಗ್ರಾಮದಲ್ಲಿನಡೆದಿದೆ. ಹೋರಿ ಬೆದರಿ ಸುವ ಹಬ್ಬ ನೋಡುತ್ತಿದ್ದ ಮಳವಳ್ಳಿ ಗ್ರಾಮದ ನಾಗರಾಜ್(27)ಗೆ ಬೆದರಿ ಬಂದ ಹೋರಿ ತಿವಿದಿದೆ. ತೀವ್ರ ಗಾಯ ಗೊಂಡ ಅವರನ್ನು ಶಿರಾಳಕೊಪ್ಪ ಸಮುದಾಯ ಆರೋಗ್ಯ ಕೇಂದ್ರ, ಬಳಿಕ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ಕೊಲೆ ಕ್ಷುಲ್ಲಕ ಕಾರಣಕ್ಕೆ ಹಾಡುಹಗಲೇ ಹೊಟ್ಟೆ ಭಾಗ ಕತ್ತರಿಸಿ, ಕುತ್ತಿಗೆ ಕಡಿದ ಕೊಲೆ ಪ್ರಕರಣ ಪಟ್ಟಣದ ಆನವಟ್ಟಿ ರಸ್ತೆಯ ಜೈ ಕರ್ನಾಟಕ ರೈಸ್ ಮಿಲ್ ಎದುರು ಬುಧವಾರ ಸಂಜೆ 4-40ಕ್ಕೆ ನಡೆದಿದೆ. ಸೈಯದ್ ಜಾಫರ್ ಮುನ್ನಾ (26) ಕೊಲೆಗೀಡಾದವರು. ಈತ ಪಟ್ಟಣದ ನೆಹರೂ ಕಾಲೋನಿ ನಿವಾಸಿ, ಆನವಟ್ಟಿ ರಸ್ತೆಯಲ್ಲಿಕಬ್ಬಿನ ಹಾಲಿನ ಅಂಗಡಿ ನಡೆಸುತ್ತಿದ್ದ. ಪಕ್ಕದಲ್ಲೇ ಆರೋಪಿ ಜಾವಿದ್ಬೇಗ್ ರಸ್ತೆ ಬದಿ ಕುಷನ್ ವ್ಯಾಪಾರ ನಡೆಸುತ್ತಿದ್ದ. ಮೃತ ವ್ಯಕ್ತಿ ತಂದೆ, ತಾಯಿ ಜತೆಗಿದ್ದು, ಸಂಸಾರದ ನಿರ್ವಹಣೆ ಮಾಡುತ್ತಿದ್ದ. ಶಿರಾಳಕೊಪ್ಪ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.
ಹಬ್ಬದ ಹೋರಿ ತಿವಿದು ಯುವಕ ಸಾವು
ಹೋರಿ ಬೆದರಿಸುವ ಸ್ಪರ್ಧೆಯಲ್ಲಿಹೋರಿ ತಿವಿದು ಯುವಕ ನೊಬ್ಬ ಮೃತಪಟ್ಟ ಘಟನೆ ಬುಧವಾರ ಶಿಕಾರಿಪುರ ತಾಲೂಕು ತಡಸನಹಳ್ಳಿ ಗ್ರಾಮದಲ್ಲಿನಡೆದಿದೆ.
Vijaya Karnataka 7 Nov 2019, 5:00 am