ಆ್ಯಪ್ನಗರ

ಮೀನು ಹಿಡಿಯಲು ಹೋದ ಯುವಕ ಸಾವು

ಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದ ಯುವಕ ಮೃತಪಟ್ಟ ಘಟನೆ ತಾಲೂಕಿನ ಚಂದ್ರಗುತ್ತಿ ಗ್ರಾಮದಲ್ಲಿ ನಡೆದಿದೆ.

Vijaya Karnataka 5 Aug 2019, 5:00 am
ಸೊರಬ (ಶಿವಮೊಗ್ಗ) : ಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದ ಯುವಕ ಮೃತಪಟ್ಟ ಘಟನೆ ತಾಲೂಕಿನ ಚಂದ್ರಗುತ್ತಿ ಗ್ರಾಮದಲ್ಲಿ ನಡೆದಿದೆ.
Vijaya Karnataka Web the death of a young man who went fishing
ಮೀನು ಹಿಡಿಯಲು ಹೋದ ಯುವಕ ಸಾವು


ಗ್ರಾಮದ ಗಣೇಶ(26) ಮೃತಪಟ್ಟವ. ಶನಿವಾರ ಬೆಳಗ್ಗೆ ಮೀನು ಹಿಡಿಯಲು ಗ್ರಾಮದ ತಾವರೆಗೆರೆಗೆ ತೆರಳಿದ್ದು ಈಜುಬಾರದೆ ಮೃತಪಟ್ಟಿದ್ದಾನೆ.

ಮನೆಯವರಿಗೆ ತಿಳಿಸದೆ ಬೆಳಗ್ಗೆ ಮನೆಯಿಂದ ಬೈಕಲ್ಲಿ ತೆರೆಳಿದ್ದ ಗಣೇಶ, ಮನೆಗೆ ಬಾರದಿರುವುದರಿಂದ ಕುಟುಂಬದವರು ಗಾಬರಿಗೊಂಡು ಹುಡುಕಾಟ ಆರಂಭಿಸಿದ್ದರು. ಕೆರೆಯ ಕಡೆ ಹೋಗುವ ವೇಳೆ ದಾರಿ ಮಧ್ಯೆ ಕುರಿಗಾಹಿಗಳ ಜತೆ ಮಾತನಾಡಿದ್ದ ಗಣೇಶ, ಮೀನು ಹಿಡಿಯಲು ಹೊರಟಿರುವುದಾಗಿ ತಿಳಿಸಿದ್ದ. ಈ ಮಾಹಿತಿ ಗಮನಿಸಿ ಹುಡುಕಿದಾಗ ತಾರೆಗೆರೆಯಲ್ಲಿ ಶವ ಪತ್ತೆಯಾಗಿದೆ.

ಗಣೇಶನ ತಂದೆ ಈ ಮೊದಲೇ ತೀರಿಕೊಂಡಿದ್ದು, ತಾಯಿ ತನ್ನ ಅಣ್ಣನ ಮನೆಯಲ್ಲಿ ವಾಸವಿದ್ದರು. ಕುಟುಂಬಕ್ಕೆ ಆಧಾರವಾಗಿದ್ದ ಗಣೇಶನ ಸಾವು ಮನೆಯವರಿಗೆ ಭರಸಿಡಿಲು ಬಡಿದಂತಾಗಿದೆ. ಸೊರಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ