ಆ್ಯಪ್ನಗರ

ಹೊಸನಗರ ವಿಧಾನಸಭಾ ಕ್ಷೇತ್ರಕ್ಕಾಗಿ ಹೋರಾಟ

ಪುನರ್‌ವಿಂಗಡಣೆ ನಂತರ ಅಸ್ತಿತ್ವ ಕಳೆದುಕೊಂಡಿರುವ ಹೊಸನಗರ ವಿಧಾನಸಭಾ ಕ್ಷೇತ್ರವನ್ನು ಮತ್ತೆ ಪಡೆಯಲು ಸಾಮಾಜಿಕ ಕಾರ್ಯಕರ್ತ ಟಿ.ಆರ್‌.ಕೃಷ್ಣಪ್ಪ ನಡೆಸುತ್ತಿರುವ ಹೋರಾಟಕ್ಕೆ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.

Vijaya Karnataka 14 May 2019, 5:00 am
ಹೊಸನಗರ: ಪುನರ್‌ವಿಂಗಡಣೆ ನಂತರ ಅಸ್ತಿತ್ವ ಕಳೆದುಕೊಂಡಿರುವ ಹೊಸನಗರ ವಿಧಾನಸಭಾ ಕ್ಷೇತ್ರವನ್ನು ಮತ್ತೆ ಪಡೆಯಲು ಸಾಮಾಜಿಕ ಕಾರ್ಯಕರ್ತ ಟಿ.ಆರ್‌.ಕೃಷ್ಣಪ್ಪ ನಡೆಸುತ್ತಿರುವ ಹೋರಾಟಕ್ಕೆ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.
Vijaya Karnataka Web SMR-13HOSP1


ಭಾನುವಾರ ನಗರ ಹೋಬಳಿ ಕೇಂದ್ರ ಬಿದನೂರು ನಗರಕ್ಕೆ ಆಗಮಿಸಿದ ಟಿ.ಆರ್‌.ಕೃಷ್ಣಪ್ಪ ಸಂತೆ ಮಾರುಕಟ್ಟೆಯಲ್ಲಿ ವಿಧಾನಸಭಾ ಕ್ಷೇತ್ರದ ಅಗತ್ಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದರು. ಕ್ಷೇತ್ರ ಕಳೆದುಕೊಂಡಾಗಿನಿಂದ ಹೊಸನಗರ ಕೇವಲ ತಾಲೂಕಾಗಿ ಉಳಿದುಕೊಂಡಿದೆ. ಇಲ್ಲಿನ ಜನತೆ ಅಗತ್ಯ ಸೌಲಭ್ಯ ಪಡೆಯುವಲ್ಲಿ ವಂಚಿತರಾಗುತ್ತಿದ್ದಾರೆ. ವಿಧಾನಸಭಾ ಕ್ಷೇತ್ರ ಮರುಪಡೆದಲ್ಲಿ ಅಭಿವೃದ್ಧಿ ಸಾಧ್ಯ. ತಾಲೂಕಿನ ಜನರು ಪಕ್ಷಾತೀತವಾಗಿ ಹೋರಾಟಕ್ಕೆ ಬೆಂಬಲಿಸುವಂತೆ ಮನವಿ ಮಾಡಿದರು.

ನಗರ ಹೋಬಳಿಗೆ ಆಗಮಿಸಿದ ಹೋರಾಟಗಾರ ಟಿ.ಆರ್‌.ಕೃಷ್ಣಪ್ಪರಿಗೆ ಗ್ರಾ.ಪಂ.ಸದಸ್ಯ ಬಿ.ವೈ.ರವೀಂದ್ರ ಹಾರ ಹಾಕಿ ಸ್ವಾಗತಿಸಿದರು. ಗ್ರಾಪಂ ಉಪಾಧ್ಯಕ್ಷ ಕರುಣಾಕರಶೆಟ್ಟಿ ಈ ವೇಳೆ ಮಾತನಾಡಿ, ಜಲವಿದ್ಯುತ್‌ ಯೋಜನೆಗಾಗಿ ತ್ಯಾಗಮಾಡಿದ ಹೊಸನಗರಕ್ಕೆ ಕ್ಷೇತ್ರ ಸೌಲಭ್ಯ ನೀಡುವ ಮೂಲಕ ನ್ಯಾಯ ಒದಗಿಸಬೇಕಿದೆ ಎಂದರು. ಇದೇ ಸಂದರ್ಭ ಟಿ.ಆರ್‌.ಕೃಷ್ಣಪ್ಪ ಹೋರಾಟಕ್ಕೆ ನೂರಾರು ಜನರು ಬೆಂಬಲ ಘೋಷಿಸಿದರು. ಬಳಿಕ ನಿಟ್ಟೂರು, ಸಂಪೇಕಟ್ಟೆ ಮತ್ತು ಮತ್ತಿಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಕೃಷ್ಣಪ್ಪ ಸಭೆ ನಡೆಸಿದರು. ಪ್ರಮುಖರಾದ ಚಕ್ಕಾರು ಧರ್ಮೇಗೌಡ, ನಾರಾಯಣಕಾಮತ್‌, ವಿಜೇಂದ್ರಶೇಟ್‌, ಅಶೋಕದಾಸ್‌, ಮಂಜುಶೆಟ್ಟಿ, ಅನಂತ ಕಂಚುಗಾರ್‌, ಪ್ರಸಾದಕಿಣಿ ಮತ್ತು ಸ್ಥಳೀಯರು ಪಾಲ್ಗೊಂಡಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ