ಆ್ಯಪ್ನಗರ

ಅರಣ್ಯ ಇಲಾಖೆ ಆದಾಯದ ಲೆಕ್ಕ ತೋರಿಸಲ್ಲ

ತುಂಗಾ ಮೇಲ್ದಂಡೆ ಯೋಜನೆ ಇಲಾಖೆಯಿಂದ ತಾಲೂಕು ವ್ಯಾಪ್ತಿ ರಸ್ತೆ, ಸಮುದಾಯ ಭವನ, ಸೇತುವೆ ಕಾಮಗಾರಿಗೆ ಸುಮಾರು 51 ಕೋಟಿ ರೂ. ಹೆಚ್ಚಿನ ಅನುದಾನ ಮಂಜೂರಾಗಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದ್ದಾರೆ.

Vijaya Karnataka 10 Jun 2020, 5:00 am
ತೀರ್ಥಹಳ್ಳಿ : ತುಂಗಾ ಮೇಲ್ದಂಡೆ ಯೋಜನೆ ಇಲಾಖೆಯಿಂದ ತಾಲೂಕು ವ್ಯಾಪ್ತಿ ರಸ್ತೆ, ಸಮುದಾಯ ಭವನ, ಸೇತುವೆ ಕಾಮಗಾರಿಗೆ ಸುಮಾರು 51 ಕೋಟಿ ರೂ. ಹೆಚ್ಚಿನ ಅನುದಾನ ಮಂಜೂರಾಗಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದ್ದಾರೆ.
Vijaya Karnataka Web the forest department does not show revenue
ಅರಣ್ಯ ಇಲಾಖೆ ಆದಾಯದ ಲೆಕ್ಕ ತೋರಿಸಲ್ಲ


ಮಂಗಳವಾರ ಪಟ್ಟಣದ ಟಿಎಪಿಸಿಎಂಎಸ್‌ ಸಭಾಂಗಣದಲ್ಲಿನಡೆದ ತಾಪಂ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಲಾಖೆಯಿಂದ ಅಭಿವೃದ್ಧಿ ಕಾಮಗಾರಿಗೆ ಇಷ್ಟು ದೊಡ್ಡ ಮೊತ್ತ ಬಿಡುಗಡೆ ಆಗಿರುವುದು ಇದೇ ಮೊದಲು ಎಂದರು.

ಅರಣ್ಯ ಇಲಾಖೆಯ ಕಾಮಗಾರಿ, ಕಾರ್ಯಕ್ರಮ ಕುರಿತು ಚುನಾಯಿತ ಜನಪ್ರತಿನಿಧಿಗಳಿಗೆ ಮಾಹಿತಿ ನೀಡಬೇಕು ಎಂದು ಅಧಿಕಾರಿಗಳಿಗೆ ಶಾಸಕರು ತಾಕೀತು ಮಾಡಿದಾಗ, ಅಕೇಶಿಯಾ ನೆಡುತೋಪಿನಿಂದ ಸರಕಾರಕ್ಕೆ ಸಿಕ್ಕ ಆದಾಯದ ಬಗ್ಗೆ ಇಲಾಖೆ ಮಾಹಿತಿ ನೀಡಬೇಕು ಎಂದು ಸದಸ್ಯರಾದ ಬೇಗುವಳ್ಳಿ ಕವಿರಾಜ್‌ ಒತ್ತಾಯಿಸಿದರು. ಕಂದಾಯ ಭೂ ಪ್ರದೇಶ ಒತ್ತುವರಿ ಮಾಡಿರುವ ಅರಣ್ಯಇಲಾಖೆ ಅಧಿಕಾರಿಗಳ ಮೇಲೆ ಕಂದಾಯ ಇಲಾಖೆ ಭೂ ಒತ್ತುವರಿ ಪ್ರಕರಣ ದಾಖಲಿಸಬೇಕು ಎಂದು ಚಂದವಳ್ಳಿ ಸೋಮಶೇಖರ್‌ ಆಗ್ರಹಿಸಿದರು. ಚರ್ಚೆ ತೀವ್ರ ಸ್ವರೂಪ ಪಡೆದಾಗ ಮಧ್ಯಪ್ರವೇಶಿಸಿದ ತಹಸೀಲ್ದಾರ್‌ ಡಾ.ಎಸ್‌.ಬಿ. ಶ್ರೀಪಾದ್‌, ಕಂದಾಯ ಭೂ ಪ್ರದೇಶವನ್ನು ಗುರುತಿಸಿ ಕಂದಾಯ ಇಲಾಖೆ ಬೇಲಿ ನಿರ್ಮಾಣ ಮಾಡಲಿದೆ. ಕಂದಾಯ ಪ್ರದೇಶದ ಒತ್ತುವರಿ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವದು ಎಂದು ಶ್ರೀಪಾದ್‌ ಸಭೆಗೆ ತಿಳಿಸಿದರು. ಜನರಿಗೆ ಮನೆ ಕಟ್ಟಲು ನಾಟಾ, ಮರದ ದಿಮ್ಮಿ ಪೂರೈಕೆ ಮಾಡುವ ಯೋಜನೆ ಅರಣ್ಯ ಇಲಾಖೆಯಲ್ಲಿಇದ್ದು, ಈ ಕುರಿತು ಜನರಿಗೆ ಮಾಹಿತಿ ನೀಡಬೇಕು ಎಂದು ಸದಸ್ಯ ಕೆಳಕೆರೆ ದಿವಾಕರ್‌ ಒತ್ತಾಯಿಸಿದರು.

ಪ್ರಾಥಮಿಕ ಆರೋಗ್ಯ ಕೇಂದ್ರ, ಘಟಕಗಳಲ್ಲಿಸಕ್ಕರೆ ಕಾಯಿಲೆ ಪರೀಕ್ಷೆಯ ವೈದ್ಯಕೀಯ ಸಲಕರಣೆಗಳಿಲ್ಲಎಂದು ಜಿ.ಪಂ. ಸದಸ್ಯೆ ಭಾರತಿ ಪ್ರಭಾಕರ್‌ ಹೇಳಿದಾಗ, ತಕ್ಷಣ ಈ ಕುರಿತು ಮಾಹಿತಿ ಪಡೆದು ಸೂಕ್ತ ಕ್ರಮ ವಹಿಸಲಾಗುವದು ಎಂದು ತಾಲೂಕು ವೈದ್ಯಾಧಿಕಾರಿ ಡಾ.ಅಶೋಕ್‌ ಉತ್ತರಿಸಿದರು. ಕೊರೊನಾ ಸೋಂಕು ಪರೀಕ್ಷೆ ಕುರಿತಾಗಿ ಜನರಿಗೆ ಸೂಕ್ತ ಮಾಹಿತಿ ನೀಡಬೇಕು ಎಂದು ಸದಸ್ಯೆ ವೀಣಾ ಗಿರೀಶ್‌ ಆಗ್ರಹಿಸಿದರು.

ಜಿ.ಪಂ. ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಕಾಸರವಳ್ಳಿ ಶ್ರೀನಿವಾಸ್‌, ಜಿ.ಪಂ. ಸದಸ್ಯೆ ಅಪೂರ್ವ ಶರಧಿ, ತಾ.ಪಂ. ಉಪಾಧ್ಯಕ್ಷೆ ಯಶೋಧ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಟಿ.ಮಂಜುನಾಥ್‌, ಎಪಿಎಂಸಿ ಅಧ್ಯಕ್ಷ ಹಸಿರುಮನೆ ಮಹಾಬಲೇಶ್‌, ಟಿಎಪಿಸಿಎಂಎಸ್‌ ಅಧ್ಯಕ್ಷ ನಾಗರಾಜಶೆಟ್ಟಿ, ತಾ.ಪಂ. ಇಒ ಆಶಾಲತಾ ಮತ್ತಿತರರು ಉಪಸ್ಥಿತರಿದ್ದರು.

-----

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ