ಆ್ಯಪ್ನಗರ

ಭವಿಷ್ಯ‘ನಿಧಿ’ಗೆ ಡಿಜಿಟಲ್‌ ಕೀ ಅವಶ್ಯ

ನೌಕರರಿಗೆ ಭವಿಷ್ಯನಿಧಿ ಹಣವು ಸುಲಭವಾಗಿ ದೊರಕಲು ಭವಿಷ್ಯನಿಧಿ ಇಲಾಖೆಯು ಇತ್ತೀಚೆಗೆ ಹಲವು ಹೊಸ ಯೋಜನೆಗಳನ್ನು ರೂಪಿಸಿದ್ದು, ಈ ಯೋಜನೆಯನ್ನು ಎಲ್ಲ ನೌಕರರು ಸರಿಯಾದ ಕ್ರಮದಲ್ಲಿ ಬಳಸಿದರೆ, ಮುಂದಿನ ದಿನಗಳಲ್ಲಿ ಅವರು ತಮ್ಮ ಹಣವನ್ನು ಸುಲಭವಾಗಿ ಪಡೆದುಕೊಳ್ಳಬಹುದು ಎಂದು ಕರ್ನಾಟಕ ಮತ್ತು ಗೋವಾ ರಾಜ್ಯಗಳ ಹೆಚ್ಚುವರಿ ಕೇಂದ್ರೀಯ ಭವಿಷ್ಯ ನಿಧಿ ಆಯುಕ್ತ ಕಮ್ಮಾ ನಾರಾಯಣ್‌ ಹೇಳಿದರು.

Vijaya Karnataka 15 Feb 2019, 5:00 am
ಶಿವಮೊಗ್ಗ: ನೌಕರರಿಗೆ ಭವಿಷ್ಯನಿಧಿ ಹಣವು ಸುಲಭವಾಗಿ ದೊರಕಲು ಭವಿಷ್ಯನಿಧಿ ಇಲಾಖೆಯು ಇತ್ತೀಚೆಗೆ ಹಲವು ಹೊಸ ಯೋಜನೆಗಳನ್ನು ರೂಪಿಸಿದ್ದು, ಈ ಯೋಜನೆಯನ್ನು ಎಲ್ಲ ನೌಕರರು ಸರಿಯಾದ ಕ್ರಮದಲ್ಲಿ ಬಳಸಿದರೆ, ಮುಂದಿನ ದಿನಗಳಲ್ಲಿ ಅವರು ತಮ್ಮ ಹಣವನ್ನು ಸುಲಭವಾಗಿ ಪಡೆದುಕೊಳ್ಳಬಹುದು ಎಂದು ಕರ್ನಾಟಕ ಮತ್ತು ಗೋವಾ ರಾಜ್ಯಗಳ ಹೆಚ್ಚುವರಿ ಕೇಂದ್ರೀಯ ಭವಿಷ್ಯ ನಿಧಿ ಆಯುಕ್ತ ಕಮ್ಮಾ ನಾರಾಯಣ್‌ ಹೇಳಿದರು.
Vijaya Karnataka Web SMG-1402-2-15-14SMG8


ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಹಾಗೂ ಭವಿಷ್ಯನಿಧಿ ಇಲಾಖೆ ಆಶ್ರಯದಲ್ಲಿ 'ಭವಿಷ್ಯನಿಧಿಯ ಬಗ್ಗೆ ಸಮಸ್ಯೆಗಳು ಹಾಗೂ ಪರಿಹಾರ ಮತ್ತು ಭವಿಷ್ಯನಿಧಿ ಹಣವನ್ನು ಪಡೆದುಕೊಳ್ಳಲು ಸುಲಭವಾದ ಮಾರ್ಗ' ಕುರಿತು ಗುರುವಾರ ಹಮ್ಮಿಕೊಂಡಿದ್ದ ಸಂವಾದ ಹಾಗೂ ಮಾಹಿತಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಭವಿಷ್ಯನಿಧಿ ಹಣವನ್ನು ಪಡೆದುಕೊಳ್ಳಲು ಯುಎಎನ್‌, ಕೆವೈಸಿ, ಸೀಡಿಂಗ್‌ ಡಿಜಿಟಲ್‌ ಕೀ ಅವಶ್ಯವಾಗಿರುತ್ತದೆ. ಇದರಿಂದ ನೌಕರರಿಗೆ ಬಹಳಷ್ಟು ಅನುಕೂಲಗಳಿವೆ. ಒಂದು ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿ ಬೇರೆ ಕಾರಣದಿಂದ ಆ ಸಂಸ್ಥೆಯನ್ನು ಬಿಟ್ಟು ಮತ್ತೊಂದು ಸಂಸ್ಥೆ ಅಥವಾ ಕಂಪನಿಗೆ ಸೇರಿದ ಅವರ ಭವಿಷ್ಯನಿಧಿ ಖಾತೆ ಅಲ್ಲಿಯೂ ಮುಂದುವರಿಯುತ್ತದೆ. ಮುಖ್ಯವಾಗಿ ಒಂದು ಸಂಸ್ಥೆಗೆ ಸೇರಿದ ತರುವಾಯ ಸಂಬಳ, ವೇತನ ಪಡೆದ ನಂತರ ಕಡ್ಡಯವಾಗಿ ಸಕಾಲದಲ್ಲಿ ಭವಿಷ್ಯ ನಿಧಿಯನ್ನು ಕಡಿತಗೊಳಿಸಿ ಪಿಎಫ್‌ ಖಾತೆಗೆ ಜಮಾ ಮಾಡಬೇಕು ಎಂದು ಹೇಳಿದರು.

ವಿಚಾರ ಸಂಕೀರ್ಣದ ಅಧ್ಯಕ್ಷ ತೆ ವಹಿಸಿ ಮಾತನಾಡಿದ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಜೆ.ಆರ್‌.ವಾಸುದೇವ್‌, ನೌಕರರು ಹಾಗೂ ಮಾಲೀಕರು ಅಲಕ್ಷ ್ಯತನದಿಂದ ಸರಿಯಾದ ವೇಳೆಯಲ್ಲಿ, ಸರಿಯಾದ ಕ್ರಮದಲ್ಲಿ ಭವಿಷ್ಯನಿಧಿ ಹಣವನ್ನು ಇಲಾಖೆಗೆ ಪಾವತಿಸದೇ ಕಡೆಯ ಕ್ಷ ಣದಲ್ಲಿ ಪರಿತಪಿಸುತ್ತಾರೆ. ಆದ್ದರಿಂದ, ಮುಂಬರುವ ದಿನಗಳಲ್ಲಿ ಭವಿಷ್ಯ ನಿಧಿ ಇಲಾಖೆಯವರು ನಮ್ಮ ಕಚೇರಿಯಲ್ಲೇ ತಮ್ಮ ಸಿಬ್ಬಂದಿಯೊಂದಿಗೆ ಶಿಬಿರ ಆಯೋಜಿಸಿ, ಎಲ್ಲರನ್ನೂ ಭವಿಷ್ಯನಿಧಿ ಖಾತೆಯೊಳಗೆ ಸರಿಯಾದ ರೀತಿಯಲ್ಲಿ ಸೇರ್ಪಡಿಸಬೇಕೆಂದು ಮನವಿ ಮಾಡಿದರು.

ಶಿವಮೊಗ್ಗ ಭವಿಷ್ಯನಿಧಿಯ ವಿಭಾಗೀಯ ಆಯುಕ್ತ ವಿ.ಹುಸೇನಪ್ಪ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ರುದ್ರೇಶ್‌, ಕಾರ್ಯದರ್ಶಿ ಗೋಪಿನಾಥ್‌, ಸಾರ್ವಜನಿಕ ಸಂರ್ಪಕ ಅಧಿಕಾರಿ ಜಿ.ವಿಜಯಕುಮಾರ್‌, ಮಾಚೇನಹಳ್ಳಿ ಕೈಗಾರಿಕಾ ಅಧ್ಯಕ್ಷ ರಮೇಶ್‌ ಹೆಗ್ಡೆ, ಶ್ರೀನಾಥ್‌, ಶಾಹಿ ಗಾರ್ಮೆಂಟ್ಸ್‌ನ ಎಂ.ಎಸ್‌.ರಾಮಚಂದ್ರ ಪ್ರಸಾದ್‌ ಇತರರಿದ್ದರು. ದಾವಣಗೆರೆ, ಹೊನ್ನಾಳಿ, ಹರಿಹರ, ಚಿತ್ರದುರ್ಗ ವಿಭಾಗದಿಂದ ಮಾಲೀಕರು, ಕಾರ್ಮಿಕರು, ಕಚೇರಿ ಸಿಬ್ಬಂದಿ ಪಾಲ್ಗೊಂಡಿದ್ದರು.

---------
ನೌಕರರಿಗೆ ಭವಿಷ್ಯ ನಿಧಿ ಹಣವು ಸುಲಭವಾಗಿ ದೊರಕಲು ಬ್ಯಾಂಕ್‌ ಖಾತೆ, ಆಧಾರ್‌ ಕಾರ್ಡ್‌ ಹಾಗೂ ಪಾನ್‌ ಕಾರ್ಡ್‌ ಅತ್ಯಗತ್ಯವಾಗಿದ್ದು, ಈ ಬಗ್ಗೆ ಜಾಗರೂಕತೆ ವಹಿಸಬೇಕು. ನೌಕರರು ಇದನ್ನು ಸರಿಯಾದ ಕ್ರಮದಲ್ಲಿ ಬಳಸಿದರೆ ಹಣವನ್ನು ಯಾವುದೇ ಸಮಸ್ಯೆಗಳಿಲ್ಲದೇ ಪಡೆಯಬಹುದು.
- ಕಮ್ಮಾ ನಾರಾಯಣ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ