ಆ್ಯಪ್ನಗರ

ಶಿಸ್ತಿನ ಜೀವನದಿಂದ ಬದುಕಿನ ಗುರಿ ಸಾಧ್ಯ

ನಿತ್ಯ ಬದುಕಿನಲ್ಲಿಶಿಸ್ತು ಮತ್ತು ಸಂಯಮವನ್ನು ಯಾರು ಪಾಲಿಸುತ್ತಾರೋ ಅವರು ಜೀವನದಲ್ಲಿನಿರ್ದಿಷ್ಟ ಗುರಿ ಮುಟ್ಟಲು ಸಾಧ್ಯ ಎಂದು ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಕೆ.ಟಿ. ಪುರುಷೋತ್ತಮ್‌ ಹೇಳಿದರು.

Vijaya Karnataka 26 Sep 2019, 5:00 am
ಶಿವಮೊಗ್: ನಿತ್ಯ ಬದುಕಿನಲ್ಲಿಶಿಸ್ತು ಮತ್ತು ಸಂಯಮವನ್ನು ಯಾರು ಪಾಲಿಸುತ್ತಾರೋ ಅವರು ಜೀವನದಲ್ಲಿನಿರ್ದಿಷ್ಟ ಗುರಿ ಮುಟ್ಟಲು ಸಾಧ್ಯ ಎಂದು ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಕೆ.ಟಿ. ಪುರುಷೋತ್ತಮ್‌ ಹೇಳಿದರು.
Vijaya Karnataka Web the goal of life is possible through disciplined living
ಶಿಸ್ತಿನ ಜೀವನದಿಂದ ಬದುಕಿನ ಗುರಿ ಸಾಧ್ಯ


ನಗರದ ಸೇಕ್ರೆಡ್‌ ಹಾರ್ಟ್‌ ಪ್ರೌಢಶಾಲಾ ಆವರಣದಲ್ಲಿಬುಧವಾರ ಏರ್ಪಡಿಸಿದ್ದ 14ರಿಂದ 17 ವರ್ಷದೊಳಗಿನ ಬಾಲಕ, ಬಾಲಕಿಯರ ಬೆಂಗಳೂರು ವಿಭಾಗ ಮಟ್ಟದ ಫುಟ್‌ಬಾಲ್‌ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿ, ಕ್ರೀಡಾಪಟುಗಳಿಗೆ ಶಿಸ್ತು ಮತ್ತು ಸಂಯಮ ಅತ್ಯಂತ ಅಗತ್ಯ. ಬದುಕಿನಲ್ಲಿಶಿಸ್ತಿನ ಹಾದಿ ಕಂಡುಕೊಂಡರೆ ಅದು ಗುರಿ ಮುಟ್ಟುವ ದಾರಿಯತ್ತ ನಮ್ಮನ್ನು ಕೊಂಡ್ಯೊಯುತ್ತದೆ ಎಂದರು.

ವಿದ್ಯಾಸಂಸ್ಥೆಗಳು ಶಿಕ್ಷಣ ಕ್ಷೇತ್ರಕ್ಕೆ ನೀಡುತ್ತಿರುವ ಆಸಕ್ತಿಯನ್ನು ಕ್ರೀಡಾಕ್ಷೇತ್ರಕ್ಕೆ ತೋರಿಸುತ್ತಿಲ್ಲ. ಶಿವಮೊಗ್ಗ ನಗರದಲ್ಲಿನೆಹರೂ ಕ್ರೀಡಾಂಗಣ ಹೊರತುಪಡಿಸಿದರೆ ಕ್ರೀಡಾಪಟುಗಳಿಗೆ ಅಭ್ಯಾಸ ಮಾಡಲು ಬೇರೆ ಕ್ರೀಡಾಂಗಣವೇ ಇಲ್ಲದಂತಾಗಿದೆ. ಆದರೂ ಸಹ ಶಿವಮೊಗ್ಗ ನಗರದ ಬಹುತೇಕ ಪ್ರತಿಭಾವನ್ವಿತ ಕ್ರೀಡಾಪಟುಗಳು ಉತ್ತಮ ರೀತಿಯಲ್ಲಿಸಾಧನೆ ಮಾಡುತ್ತಿರುವುದು ಗಣನೀಯ ಬೆಳವಣಿಗೆ ಎಂದರು. ಸಮಾರಂಭದಲ್ಲಿಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಚ್‌. ಮಂಜುನಾಥ್‌ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ