ಆ್ಯಪ್ನಗರ

ಸರಕಾರದ ನಿರ್ಧಾರ ಅವೈಜ್ಞಾನಿಕ

ಶರಾವತಿ ನದಿ ನೀರನ್ನು ಬೆಂಗಳೂರಿಗೆ ಹರಿಸುವ ಸರಕಾರದ ನಿರ್ಧಾರ ಅವೈಜ್ಞಾನಿಕ ಎಂದು ಜಿ.ಪಂ. ಸದಸ್ಯ ಶ್ವೇತಾ ಆರ್‌.ಬಂಡಿ ಆರೋಪಿಸಿದರು.

Vijaya Karnataka 7 Jul 2019, 5:00 am
ರಿಪ್ಪನ್‌ಪೇಟೆ: ಶರಾವತಿ ನದಿ ನೀರನ್ನು ಬೆಂಗಳೂರಿಗೆ ಹರಿಸುವ ಸರಕಾರದ ನಿರ್ಧಾರ ಅವೈಜ್ಞಾನಿಕ ಎಂದು ಜಿ.ಪಂ. ಸದಸ್ಯ ಶ್ವೇತಾ ಆರ್‌.ಬಂಡಿ ಆರೋಪಿಸಿದರು.
Vijaya Karnataka Web SMR-6,RPT2


ಪಟ್ಟಣದ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ಶುಕ್ರವಾರ ಸಂಜೆ ಆಯೋಜಿಸಿದ್ದ ಪ್ರತಿಭಟನಾ ಸಭೆಯ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿ, ತಕ್ಷ ಣ ಈ ಅವೈಜ್ಞಾನಿಕ ಯೋಜನೆ ಕೈಬಿಡಬೇಕು, ಇಲ್ಲವಾದಲ್ಲಿ ಗೋಕಾಕ್‌ ಮಾದರಿಯಲ್ಲಿ ಹೋರಾಟಕ್ಕೆ ರೂಪುರೇಷೆ ಸಿದ್ಧಪಡಿಸುವುದು ಅನಿವಾರ‍್ಯವಾಗಲಿದೆ ಎಂದರು.

ಎನ್‌.ಸತೀಶ್‌ ಪ್ರಾಸ್ತಾವಿಕ ಮಾತನಾಡಿ, ಮಠಾಧೀಶರು ಸೇರಿದಂತೆ ವಿವಿಧ ಧರ್ಮ ಗುರುಗಳ ನೇತೃತ್ವದಲ್ಲಿ ವಿದ್ಯಾರ್ಥಿಗಳೊಂದಿಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು ಎಂದರು. ತಾಲೂಕು ಪಂಚಾಯಿತಿ ಅಧ್ಯಕ್ಷ ವಾಸಪ್ಪಗೌಡ, ಎಪಿಎಂಸಿ ನಿರ್ದೇಶಕ ರಾಮಚಂದ್ರ ಬಂಡಿ, ಎಂ.ಬಿ.ಲಕ್ಷ ್ಮಣಗೌಡ, ಟಿ.ಆರ್‌.ಕೃಷ್ಣಪ್ಪ,

ಎಂ.ಎಸ್‌.ಉಮೇಶ್‌, ಜೆ.ಎಸ್‌.ಚಂದ್ರಪ್ಪ, ಎಚ್‌.ಸಿ.ಪರಶುರಾಮ್‌, ಆರ್‌.ಟಿ.ಗೋಪಾಲ್‌, ಡಾ.ಅಬೂಬಕರ್‌, ಎಂ.ಡಿ.ಇಂದ್ರಮ್ಮ, ಕಗ್ಗಲಿ ಲಿಂಗಪ್ಪ, ಡಿ.ಈ.ಮಧುಸೂದನ್‌, ಸಿ.ಚಂದ್ರುಬಾಬು, ಆರ್‌.ಡಿ.ಶೀಲಾ, ಶೈಲಾ ಪ್ರಭು, ಆರ್‌.ರಾಘವೇಂದ್ರ, ಕುಕ್ಕಳಲೇ ಈಶ್ವರಪ್ಪಗೌಡ, ಜಗದೀಶ್‌, ಅರುಣ್‌ ಕಾಳಮುಖಿ, ಯಶೋಧ ಈಶ್ವರಪ್ಪಗೌಡ ಗವಟೂರು, ಅಮ್ಮೀರ್‌ ಹಂಜಾ ಇದ್ದರು. ಎನ್‌.ವರ್ತೇಶ್‌ ಸ್ವಾಗತಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ