ಆ್ಯಪ್ನಗರ

ಗುರು ಮಾತೃ ಹೃದಯಿಯಾಗಬೇಕು

ದೇಶಕ್ಕೆ ಬೇಕಾಗಿರುವ ಆರೋಗ್ಯವಂತ, ವಿದ್ಯಾವಂತ, ಪ್ರಜ್ಞಾವಂತ, ಸುಸಂಸ್ಕೃತ ಪ್ರಜೆ ನಿರ್ಮಾಣವಾಗುವುದು ಶಾಲಾ ಕಾಲೇಜಿನ ಶಿಕ್ಷಕರು ನೀಡುವ ಸೂಕ್ತ ಮಾರ್ಗದರ್ಶನದಿಂದ ಮಾತ್ರ ಎಂದು ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷ ಕ ಸುಭಾಷ್‌ಚಂದ್ರ ಸ್ಥಾನಿಕ್‌ ಹೇಳಿದರು.

Vijaya Karnataka 17 Jul 2019, 5:00 am
ಶಿಕಾರಿಪುರ: ದೇಶಕ್ಕೆ ಬೇಕಾಗಿರುವ ಆರೋಗ್ಯವಂತ, ವಿದ್ಯಾವಂತ, ಪ್ರಜ್ಞಾವಂತ, ಸುಸಂಸ್ಕೃತ ಪ್ರಜೆ ನಿರ್ಮಾಣವಾಗುವುದು ಶಾಲಾ ಕಾಲೇಜಿನ ಶಿಕ್ಷಕರು ನೀಡುವ ಸೂಕ್ತ ಮಾರ್ಗದರ್ಶನದಿಂದ ಮಾತ್ರ ಎಂದು ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷ ಕ ಸುಭಾಷ್‌ಚಂದ್ರ ಸ್ಥಾನಿಕ್‌ ಹೇಳಿದರು.
Vijaya Karnataka Web SMR-16skp2


ಪಟ್ಟಣದ ಕುಮದ್ವತಿ ವಸತಿಯುತ ಕೇಂದ್ರೀಯ ಶಾಲೆಯಲ್ಲಿ ಮಂಗಳವಾರ ನಡೆದ ಗುರು ಪೂರ್ಣಿಮೆ ಕಾರ‍್ಯಕ್ರಮದಲ್ಲಿ ಅವರು ಮಾತನಾಡಿ, ತಂದೆ-ತಾಯಿ ಜನ್ಮ ನೀಡುತ್ತಾರೆ. ಆದರೆ, ಆ ಮಗುವಿಗೆ ಶಿಕ್ಷ ಕರಾದವರು ಜೀವನದ ಗುರಿ ತೋರಿಸುತ್ತಾರೆ. ಗುರುವಿಗೆ ಮಾತೃ ಹೃದಯವಿರಬೇಕು, ಪ್ರತಿ ಮಗುವೂ ದೇಶದ ಉತ್ತಮ ಪ್ರಜೆಯಾಗುವ ನಿಟ್ಟಿನಲ್ಲಿ ಗುರಿ ತೋರಿಸುವ ಕೆಲಸಕ್ಕೆ ಆದ್ಯತೆ ನೀಡಬೇಕು ಎಂದರು.

ಪ್ರಾಂಶುಪಾಲ ಡಾ. ಕೆ.ಎಸ್‌.ದತ್ತಾತ್ರಿ ಮಾತನಾಡಿ, ವಿದ್ಯಾರ್ಥಿ ಓದಿ, ಬರೆದು, ಕೇಳಿ ಕಲಿಯುವುದಕ್ಕಿಂತ ನೋಡಿ ಕಲಿಯುವುದು ಹೆಚ್ಚು. ಅದಕ್ಕಾಗಿ ಶಿಕ್ಷ ಕರು ತಮ್ಮ ಆಚಾರ ವಿಚಾರ, ನಡೆ ನುಡಿಗಳಲ್ಲಿ ತುಂಬಾ ಪಾರದರ್ಶಕವಾಗಿರಬೇಕು. ಶಿಕ್ಷ ಕ ಮಕ್ಕಳ ಮನಸ್ಸು ಅರಿಯುವ ಮನೋವಿಜ್ಞಾನಿಗಳಿದ್ದಂತೆ, ಜೀವನ ಕೌಶಲ್ಯ ಕಲಿಸುವ ಶಿಕ್ಷ ಕ ವ್ಯಕ್ತಿಯಲ್ಲ ಶಕ್ತಿ. ಈ ಎಲ್ಲವನ್ನೂ ಅರಿತುಕೊಂಡು ಶಿಕ್ಷ ಕರು ಕಾರ‍್ಯನಿರ್ವಹಿಸಬೇಕು ಎಂದರು.

ಸಂಸ್ಥೆಯ ಶೈಕ್ಷ ಣಿಕ ಸಲಹೆಗಾರ ಎಸ್‌.ಎಸ್‌. ಗದಗ್‌ ಮತ್ತಿತರರು ಉಪಸ್ಥಿತರಿದ್ದರು. ವೇದವ್ಯಾಸರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ನಮ್ರತಾ ಸಂಗಡಿಗರು ಪ್ರಾರ್ಥಿಸಿ, ಭಾರ್ಗವ್‌ ಸ್ವಾಗತಿಸಿದರು. ಸಮೃದ್ಧಿ, ಸ್ನೇಹ ನಿರೂಪಿಸಿ, ಸ್ವರೂಪ್‌ ವಂದಿಸಿದರು. ವಿದ್ಯಾರ್ಥಿಗಳು ನೃತ್ಯ, ಪ್ರಹಸನ, ಕವನ ವಾಚನ, ಹಾಸ್ಯ ಕಾರ‍್ಯಕ್ರಮ ನಡೆಸಿಕೊಟ್ಟರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ