ಆ್ಯಪ್ನಗರ

ಪೌರ ಕಾರ್ಮಿಕರ ಆರೋಗ್ಯ ಅಮೂಲ್ಯ

ಪೌರ ಕಾರ್ಮಿಕರ ಶ್ರಮಕ್ಕೆ ಬೆಲೆ ಕಟ್ಟಲಾಗದು ಎಂದು ಶಾಸಕ ಬಿ.ಕೆ.ಸಂಗಮೇಶ್ವರ್‌ ಹೇಳಿದರು.

Vijaya Karnataka 15 Sep 2019, 5:00 am
ಭದ್ರಾವತಿ: ಪೌರ ಕಾರ್ಮಿಕರ ಶ್ರಮಕ್ಕೆ ಬೆಲೆ ಕಟ್ಟಲಾಗದು ಎಂದು ಶಾಸಕ ಬಿ.ಕೆ.ಸಂಗಮೇಶ್ವರ್‌ ಹೇಳಿದರು.
Vijaya Karnataka Web 14BDVT1_46


ಅವರು ಶನಿವಾರ ಹಳೇನಗರ ಕನಕ ಮಂಟಪ ಮೈದಾನದಲ್ಲಿಪೌರ ಕಾರ್ಮಿಕರ ದಿನಾಚರಣೆ ಅಂಗವಾಗಿ ನಗರಸಭೆ ಹಮ್ಮಿಕೊಂಡಿದ್ದ ಪೌರ ಕಾರ್ಮಿಕರ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.

ಸ್ಪರ್ಧಾತ್ಮಕ ಯುಗದಲ್ಲಿಪೌರ ಕಾರ್ಮಿಕರಲ್ಲಿರುವ ಪ್ರತಿಭೆ ಗುರುತಿಸಲು ಕ್ರೀಡೆಗಳು ಸಹಕಾರಿ. ಪಂದ್ಯಗಳಲ್ಲಿಸೋಲು, ಗೆಲುವು ಮುಖ್ಯವಲ್ಲ. ಭಾಗವಹಿಸುವಿಕೆ ಮುಖ್ಯ. ಪೌರ ಕಾರ್ಮಿಕರು ಆರೋಗ್ಯದತ್ತ ಹೆಚ್ಚು ಗಮನ ಹರಿಸಬೇಕು. ನಿತ್ಯ ನಗರಸಭೆವತಿಯಿಂದ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ನಾರಾಯಣ ಹೃದಯಾಲಯದಲ್ಲಿಎಲ್ಲಅಂಗಾಂಗ ಪರೀಕ್ಷೆಗೆ ಅವಕಾಶ ಕಲ್ಪಿಸಲಾಗಿದೆ. ಈ ನಿಟ್ಟಿನಲ್ಲಿಪೌರಾಯಕ್ತರ ಕಾಳಜಿ ಗಮನಾರ್ಹ ಎಂದರು.

ಪೌರಾಯುಕ್ತ ಮನೋಹರ್‌ ಮಾತನಾಡಿ, ನಗರಸಭೆಯಿಂದ ಕಾರ್ಮಿಕರಿಗೆ ವರ್ಷಕ್ಕೊಮ್ಮೆ ಗಮ್‌ಶೂ ನೀಡಲಾಗುತ್ತಿತ್ತು. ಗ್ಲೌಸ್‌ ಸೇರಿದಂತೆ ಪರಿಕರಗಳನ್ನು ತಿಂಗಳಿಗೊಮ್ಮೆ ವಿತರಿಸಿ ಆರೋಗ್ಯಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಸೆ23ರಂದು ನಗರದ ಬಿ.ಎಚ್‌.ರಸ್ತೆಯ ಶ್ರೀಮಂಜುನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿಪೌರಕಾರ್ಮಿಕರ ದಿನಾಚರಣೆ ಹಮ್ಮಿಕೊಳ್ಳಲಾಗಿದೆ ಎಂದರು. ಇದೇ ಸಂದರ್ಭ ಪುರುಷರಿಗೆ ಶಾಟ್‌ಫುಟ್‌, ಗೋಣಿಚೀಲದಲ್ಲಿಓಟ ಹಾಗೂ ಹಗ್ಗ ಜಗ್ಗಾಟ, ಮಹಿಳೆಯರಿಗೆ ಬಕೆಟ್‌ ಇನ್‌ ದ ಬಾಲ್‌, ಮ್ಯೂಸಿಕಲ್‌ ಛೇರ್‌ ಹಾಗೂ ಹಗ್ಗಜಗ್ಗಾಟ ಕ್ರೀಡೆ ಏರ್ಪಡಿಸಲಾಗಿತ್ತು. ಪೌರ ಸೇವಾ ನೌಕರರ ಸೇವಾ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ, ಕಂದಾಯಾಧಿಕಾರಿ ರಾಜಕುಮಾರ್‌, ಲೆಕ್ಕಾಧಿಕಾರಿ ಮಹಮದ್‌ ಆಲಿ, ವ್ಯವಸ್ಥಾಪಕಿ ಸುನಿತಾ ಕುಮಾರಿ, ಆರೋಗ್ಯ ನಿರೀಕ್ಷಕ ರಾಘವೇಂದ್ರ, ಮುಖಂಡರಾದ ಸುರೇಶ್‌, ಬಸವಂತರಾವ್‌ ದಾಳೆ, ನಗರಸಭಾ ಸಿಬ್ಬಂದಿ, ಪೌರ ಕಾರ್ಮಿಕರು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ