ಆ್ಯಪ್ನಗರ

ಮಹಾಪುರುಷರ ಆದರ್ಶ ಪಾಲಿಸಿ

ಮಕ್ಕಳು ಆದರ್ಶ ವ್ಯಕ್ತಿಗಳ ಆದರ್ಶ ಪಾಲಿಸಿದರೆ ಭವಿಷ್ಯದಲ್ಲಿ ಆದರ್ಶವ್ಯಕ್ತಿಗಳಾಗಿ ಬದುಕಬಹುದು ಎಂದು ಜಿಲ್ಲಾ ಸ್ಕೌಟ್‌ ಮತ್ತು ಗೈಡ್‌ನ ಆಯುಕ್ತ ಎಚ್‌.ಡಿ.ರಮೇಶ ಶಾಸ್ತ್ರಿ ಸಲಹೆ ನೀಡಿದರು.

Vijaya Karnataka 22 Aug 2019, 5:00 am
ಶಿವಮೊಗ್ಗ: ಮಕ್ಕಳು ಆದರ್ಶ ವ್ಯಕ್ತಿಗಳ ಆದರ್ಶ ಪಾಲಿಸಿದರೆ ಭವಿಷ್ಯದಲ್ಲಿ ಆದರ್ಶವ್ಯಕ್ತಿಗಳಾಗಿ ಬದುಕಬಹುದು ಎಂದು ಜಿಲ್ಲಾ ಸ್ಕೌಟ್‌ ಮತ್ತು ಗೈಡ್‌ನ ಆಯುಕ್ತ ಎಚ್‌.ಡಿ.ರಮೇಶ ಶಾಸ್ತ್ರಿ ಸಲಹೆ ನೀಡಿದರು.
Vijaya Karnataka Web 21ganesh8


ನಗರದ ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌ ಭವನದಲ್ಲಿ ಬುಧವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಸದ್ಭಾವನ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ದೇಶ ಕಂಡ ಮಹಾನ್‌ ವ್ಯಕ್ತಿಗಳಲ್ಲಿ ರಾಜೀವ್‌ಗಾಂಧಿ ಕೂಡ ಒಬ್ಬರು. ಅವರ ಹುಟ್ಟುಹಬ್ಬವನ್ನು ರಾಷ್ಟ್ರಿಯ ಸದ್ಬಾವನ ದಿನವಾಗಿ ಆಚರಿಸಲಾಗುತ್ತಿದೆ. ಅವರು ಅತಿ ಚಿಕ್ಕ ವಯಸ್ಸಿನಲ್ಲಿ ಸಾಕಷ್ಟು ಸಾಧನೆ ಮಾಡಿ ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ. ಮಹಾನ್‌ ವ್ಯಕ್ತಿಗಳನ್ನು ಆದರ್ಶವಾಗಿಟ್ಟುಕೊಂಡು ಉತ್ತಮ ಜೀವನ ರೂಪಿಸಿಕೊಂಡು ದೇಶದ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.

ವಿವಿಧತೆಯಲ್ಲಿ ಏಕತೆ ಹೊಂದಿರುವ ದೇಶ ನಮ್ಮದು. ಪ್ರತಿಯೊಬ್ಬರು ಶಿಕ್ಷ ಣ ಪಡೆದು ಪ್ರಜ್ಞಾವಂತರಾಗಬೇಕು. ದೇಶದ ಹಿತದೃಷ್ಟಿಯಿಂದ ಸಮಾಜಮುಖಿ ಕೆಲಸ ಮಾಡಿದರೆ ಸದ್ಯದಲ್ಲೇ ಭಾರತ ಅಭಿವೃದ್ಧಿ ಹೊಂದಿದ ದೇಶವಾಗಿ ಜಾಗತಿಕ ಮಟ್ಟದಲ್ಲಿ ಮುಂಚೂಣಿಯಲ್ಲಿರುತ್ತದೆ ಎಂದರು.

ಈ ಸಂದರ್ಭ ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌ನ ಎಎಸ್‌ಓಸಿ ಭಾರತಿ ಡಾಯಸ ಅವರ ನೇತೃತ್ವದಲ್ಲಿ ಸರ್ವಧರ್ಮ ಪ್ರಾರ್ಥನೆ ನೆರೆವೇರಿಸಿ ಸದ್ಭಾವನಾ ದಿನದ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಸ್ಕೌಟ್‌ ಮತ್ತು ಗೈಡ್‌ ಜಿಲ್ಲಾಯುಕ್ತ ಎಸ್‌.ಉಮೇಶ ಶಾಸ್ತ್ರಿ, ಜಿಲ್ಲಾ ಖಜಾಂಚಿ ಚುಡಾಮಣಿ, ಜಿಲ್ಲಾ ಕಾರ್ಯದರ್ಶಿ ಕೆ.ಪಿ.ಬಿಂದು ಕುಮಾರ, ಲಕ್ಷ್ಮೀ ಕೆ.ರವಿ, ವೈ.ಆರ್‌.ವೀರೇಶಪ್ಪ, ಜಿ. ವಿಜಯ್‌ ಕುಮಾರ್‌ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ