ಆ್ಯಪ್ನಗರ

ಹಿರಿಯರ ಆದರ್ಶಗಳು ಯುವ ಪೀಳಿಗೆಗೆ ಮಾದರಿ

ಒಳ್ಳೆಯ ಸಂಸ್ಕಾರ, ಗುರುಹಿರಿಯರ ಮೇಲಿನ ಭಕ್ತಿ, ಗೌರವ ಆಚಾರ, ವಿಚಾರಗಳಿಂದ ಉತ್ತಮ ವ್ಯಕ್ತಿತ್ವ ನಿರ್ಮಾಣ ಸಾಧ್ಯ ಎಂದು ಬಸವಕೇಂದ್ರದ ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ ಹೇಳಿದರು.

Vijaya Karnataka 6 Feb 2019, 5:00 am
ಶಿವಮೊಗ್ಗ : ಒಳ್ಳೆಯ ಸಂಸ್ಕಾರ, ಗುರುಹಿರಿಯರ ಮೇಲಿನ ಭಕ್ತಿ, ಗೌರವ ಆಚಾರ, ವಿಚಾರಗಳಿಂದ ಉತ್ತಮ ವ್ಯಕ್ತಿತ್ವ ನಿರ್ಮಾಣ ಸಾಧ್ಯ ಎಂದು ಬಸವಕೇಂದ್ರದ ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ ಹೇಳಿದರು.
Vijaya Karnataka Web SMR-5ganesh5


ನಗರದ ಬಸವ ಕೇಂದ್ರದಲ್ಲಿ ಭಾನುವಾರ ಏರ್ಪಡಿಸಿದ್ದ ಶಿವಮೊಗ್ಗ ಜಿಲ್ಲಾ ಗಾಣಿಗ ಕ್ಷೇಮಾಭಿವೃದ್ಧಿ ಸಂಘದ ವಾರ್ಷಿಕ ಸರ್ವಸದಸ್ಯರ ಮಹಾಸಭೆ, ಸಮಾಜದ ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ ಹಾಗೂ ಹಿರಿಯ ನಾಗರಿಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಹಿರಿಯರ ಆದರ್ಶಗಳು ಇಂದಿನ ಪೀಳಿಗೆಗೆ ಮಾದರಿಯಾಗಬೇಕು. ಹಾಗೆಯೇ ಇಂದಿನ ಪೀಳಿಗೆ, ಮುಂದಿನ ಜನಾಂಗಕ್ಕೆ ಮಾದರಿಯಾಗುವಂತೆ ಬಾಳಬೇಕು. ಈ ನಿಟ್ಟಿನಲ್ಲಿ ಸಂಸ್ಕಾರ ಅಗತ್ಯ. ಎಳವೆಯಿಂದಲೇ ಈ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವ ಪ್ರಯತ್ನವನ್ನು ಹಿರಿಯರು ಮಾಡಬೇಕು ಎಂದರು.

ನಮ್ಮ ನಿತ್ಯದ ಜೀವನದಲ್ಲಿ ಕಾಯಕವು ಅತ್ಯಂತ ಮಹತ್ವ. ಹಾಗಾಗಿ ಬಸವಣ್ಣನವರ ಮಾರ್ಗದರ್ಶನ ಅವರ ನಡೆನುಡಿ, ವಚನಗಳು, ಆಚಾರ ವಿಚಾರಗಳು ಎಂದೆಂದಿಗೂ ಪ್ರಸ್ತುತ. ಇಂದು ನಮ್ಮ ಧರ್ಮ, ನಂಬಿಕೆಗಳು ಹಾಗೂ ಸಿದ್ಧಾಂತಗಳ ಬಗ್ಗೆ ಬೇರೆಯವರಲ್ಲಿ ಮಾತನಾಡಲು ಸಂಕೋಚಪಡುತ್ತಿದ್ದೇವೆ. ಇದು ಆಗಬಾರದು. ನಮ್ಮ ಧರ್ಮ ಶ್ರದ್ಧೆಗಳ ಬಗ್ಗೆ ನಮಗೇ ಅಭಿಮಾನವಿಲ್ಲದಿದ್ದರೆ ಮುಂದಿನ ಪೀಳಿಗೆ ಇವುಗಳನ್ನು ಹೇಗೆ ಸಾಧ್ಯವಾಗುತ್ತದೆ ಎಂದರು.

ಗಾಣಿಗರು ಕಾಯಕ ನಿಷ್ಠೆಗೆ ಹೆಸರಾದವರು, ಸಾಧನೆಗೆ ಸಿದ್ಧಿ ಎಂದು ದುಡಿದವರು. ಹಾಗೆಯೇ ದಾನ ಧರ್ಮಕ್ಕೆ ಹೆಸರಾದವರು. ದುಃಖ ದುಮ್ಮಾನಗಳಿಗೆ ಅಂಜದವರು. ತಮ್ಮತನವನ್ನು ಧಾರೆಯೆರೆದು, ಸುಜನರೆಂದು ಖ್ಯಾತಿಗೊಂಡವರು. ವಾಸ್ತವದಲ್ಲಿ ಗಾಣಿಗ ಸಮಾಜವು ಶಿವಮೊಗ್ಗ ಜಿಲ್ಲೆಯಲ್ಲಿ ಅಲ್ಪಸಂಖ್ಯಾತರಾಗಿದ್ದು, ಯಾವುದೇ ಕೀಳರಿಮೆ ಇಲ್ಲದೇ ಇಡೀ ಸಮಾಜದ ಸಂಘಟನೆಗೆ ಮುಂದಾಗಿ ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಅಖಿಲ ಭಾರತ ಗಾಣಿಗ ಸಂಘ ಹುಬ್ಬಳ್ಳಿಯ ಹಿರಿಯ ಉಪಾಧ್ಯಕ್ಷ ರಾದ ಡಿ.ಎಸ್‌.ರುದ್ರಮುನಿ, ಸರಕಾರ ಗಾಣಿಗ ಸಮಾಜವನ್ನು 2-ಎಗೆ ಸೇರಿಸಿದ್ದು, ಇದರ ಜಾತಿ ಪ್ರಮಾಣ ಪತ್ರ ಕೊಡಲು ಕಚೇರಿಯಲ್ಲಾಗುತ್ತಿರುವ ಕಷ್ಟಗಳ ಬಗ್ಗೆ ಪರಿಹಾರ ಮಾರ್ಗ ಮತ್ತು ಗಾಣಿಗ ಸಮಾಜ ನಡೆದು ಬಂದ ದಾರಿಯ ಬಗ್ಗೆ ವಿವರಿಸಿ ಸಂವಾದ ನಡೆಸಿದರು.

ಇದೇ ಸಂದರ್ಭದಲ್ಲಿ 75 ವರ್ಷಕ್ಕಿಂತ ಮೇಲ್ಪಟ್ಟ ಸಮಾಜದ ಹಿರಿಯ ನಾಗರಿಕರಿಗೆ ಹಾಗೂ ಸಮಾಜದಲ್ಲಿ ತಮ್ಮ ವೃತ್ತಿಯ ಜೊತೆಗೆ ವಿಶೇಷ ಸಾಧನೆ ಮಾಡಿದ ಸಾಧಕರಿಗೆ ಮತ್ತು ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ನಗದು ಬಹುಮಾನ, ಪ್ರಶಸ್ತಿಪತ್ರ ನೀಡಿ ಗೌರವಿಸಲಾಯಿತು.

ಜಿಲ್ಲಾ ಗಾಣಿಗ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಜಿ.ವಿಜಯಕುಮಾರ್‌ ಅಧ್ಯಕ್ಷ ತೆ ವಹಿಸಿದ್ದರು. ಭದ್ರಾವತಿಯ ಉಪಾಧ್ಯಕ್ಷ ಎನ್‌.ಬಿ.ರಾಜಶೇಖರ್‌, ಎಸ್‌.ಎಸ್‌.ಸತೀಶ್‌, ಜಗನ್ನಾಥ್‌, ಲೋಕೇಶಪ್ಪ, ಪ್ರಧಾನ ಕಾರ್ಯದರ್ಶಿ ಎ.ಅಶೋಕ್‌, ರವೀಶ್‌, ರೇವಪ್ಪ, ರವಿ, ರೇಖಾದೇವಿ, ಸುಮನ ನರೇಂದ್ರ, ಸುಜಾನ ನೀಲಬಂದ್‌, ಇಂದೂಧರ್‌, ಎಸ್‌.ಎನ್‌.ಶಿವಸ್ವಾಮಿ, ಕಿರಣ್‌, ಲೋಕೇಶ್ವರ್‌ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ