ಆ್ಯಪ್ನಗರ

ಆಫ್ಸ್‌ಕೋಸ್‌ ಶಾಖೆ ಉದ್ಘಾಟನೆ

ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನೀಡಬೇಕು. ಮಾರುಕಟ್ಟೆ ಪ್ರದೇಶ ಹತ್ತಿರವಿದ್ದಾಗ ರೈತರಿಗೆ ಸಹಕಾರಿಯಾಗುತ್ತದೆ ಎಂದು ಆನಂದಪುರ ಮುರುಘಾಮಠದ ಶ್ರೀಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.

Vijaya Karnataka 5 Mar 2019, 5:00 am
ರಿಪ್ಪನ್‌ಪೇಟೆ: ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನೀಡಬೇಕು. ಮಾರುಕಟ್ಟೆ ಪ್ರದೇಶ ಹತ್ತಿರವಿದ್ದಾಗ ರೈತರಿಗೆ ಸಹಕಾರಿಯಾಗುತ್ತದೆ ಎಂದು ಆನಂದಪುರ ಮುರುಘಾಮಠದ ಶ್ರೀಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.
Vijaya Karnataka Web SMR-4rpt5


ಪಟ್ಟಣದ ಶಿವಮೊಗ್ಗ ರಸ್ತೆ ಜಯಲಕ್ಷ್ಮೀ ರೈಸ್‌ ಇಂಡಸ್ಟ್ರೀಸ್‌ ಪಕ್ಕದಲ್ಲಿ ನೂತನವಾಗಿ ತೆರೆದಿರುವ ಸಾಗರ ಅಡಕೆ ಪರಿಷ್ಕರಣೆ ಮತ್ತು ಮಾರಾಟ ಸಹಕಾರ ಸಂಘ (ಅಪ್ಸಕೋಸ್‌)ದ ಶಾಖೆಯನ್ನು ಭಾನುವಾರ ಉದ್ಘಾಟಿಸಿ ಆಶೀರ್ವಚನ ನೀಡಿದರು.

ಕಡಿಮೆ ಖರ್ಚಿನಲ್ಲಿ ಬೆಳೆ ಬೆಳೆದು ಹೆಚ್ಚಿನ ಆದಾಯ ಗಳಿಸಿದರೆ ಆರ್ಥಿಕ ಸಮತೋಲನ ಕಾಯ್ದುಕೊಳ್ಳಬಹುದು . ಈ ಭಾಗದಲ್ಲಿ ಅಡಕೆ ಮುಖ್ಯ ಬೆಳೆಯಾಗಿದ್ದು, ಆಫ್ಸ್‌ಕೋಸ್‌ ತನ್ನ ಕಾರ್ಯವ್ಯಾಪ್ತಿ ವಿಸ್ತರಿಸಿ ಇಲ್ಲಿ ಶಾಖೆ ತೆರೆದಿದೆ. ಇದರ ಕಾರ್ಯಕ್ಷ ಮತೆ ಪಾರದರ್ಶಕವಾಗಿರಲಿ ಹಾಗೂ ರೈತರ ಒಡನಾಡಿಯಾಗಿ ಕಾರ್ಯನಿರ್ವಹಿಸಲಿ ಎಂದು ಶುಭಹಾರೈಸಿದರು. ಆಫ್ಸ್‌ಕೋಸ್‌ ಅಧ್ಯಕ್ಷ ಇಂದೂಧರಗೌಡ ಅಧ್ಯಕ್ಷ ತೆವಹಿಸಿದ್ದರು. ಎಪಿಎಂಸಿ ಅಧ್ಯಕ್ಷ ಈಶ್ವರಪ್ಪಗೌಡ, ಜಿ.ಪಂ. ಸದಸ್ಯರಾದ ಕಲಗೋಡು ರತ್ನಾಕರ, ಶ್ವೇತಾ ಬಂಡಿ, ಸದಸ್ಯ ಬಂಡಿ ರಾಮಚಂದ್ರ, ತಳಲೆ ಸೊಸೈಟಿ ಅಧ್ಯಕ್ಷ ದಿನೇಶ, ಅಮೃತ ಸೊಸೈಟಿ ಅಧ್ಯಕ್ಷ ಎಚ್‌.ಎಂ. ವರ್ತೇಶ್‌, ತಾ.ಪಂ.ಸದಸ್ಯ ಎನ್‌. ಚಂದ್ರೇಶ್‌, ತೋಟಗಾರ್ಸ್‌ ಅಧ್ಯಕ್ಷ ಲೋಕಪ್ಪಗೌಡ, ಕಲ್ಯಾಣಪ್ಪಗೌಡ ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ