ಆ್ಯಪ್ನಗರ

ಪ್ರಕೃತಿ ನಾಶಕ್ಕೆ ಬೆಲೆ ತೆರಬೇಕಾದ ಮನುಷ್ಯ

ಪ್ರಕೃತಿ ವಿನಾಶಕ್ಕೆ ಮನುಷ್ಯ ಬೆಲೆ ತೆರಬೇಕಾಗುತ್ತದೆ ಎನ್ನುವುದಕ್ಕೆ ಮಡಿಕೇರಿ, ಕೇರಳದಲ್ಲಿ ನಡೆದ ಪ್ರಕೃತಿ ವಿಕೋಪ ನಿದರ್ಶನ ಎಂದು ಮುಖ್ಯಶಿಕ್ಷಕ ವಸಂತಕುಮಾರ್‌ ಹೇಳಿದರು.

Vijaya Karnataka 2 Jan 2019, 5:00 am
ಶಿಕಾರಿಪುರ: ಪ್ರಕೃತಿ ವಿನಾಶಕ್ಕೆ ಮನುಷ್ಯ ಬೆಲೆ ತೆರಬೇಕಾಗುತ್ತದೆ ಎನ್ನುವುದಕ್ಕೆ ಮಡಿಕೇರಿ, ಕೇರಳದಲ್ಲಿ ನಡೆದ ಪ್ರಕೃತಿ ವಿಕೋಪ ನಿದರ್ಶನ ಎಂದು ಮುಖ್ಯಶಿಕ್ಷಕ ವಸಂತಕುಮಾರ್‌ ಹೇಳಿದರು.
Vijaya Karnataka Web SMR-1skp3


ಪಟ್ಟಣದ ಸೊಪ್ಪಿನಕೇರಿ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಸಂಸ್ಕೃತಿ ಇಲಾಖೆ, ಶಂಕರ ಕಲಾರಂಗ ನೇತೃತ್ವದಲ್ಲಿ ಕಿಟ್ಟದಹಳ್ಳಿ ಸರಕಾರಿ ಶಾಲಾ ಮಕ್ಕಳು ಅಭಿನಯಿಸಿದ 'ಕೊಡಗು ಮಡಿಕೇರಿ ಕೇರಳ' ನಾಟಕಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪ್ರಕೃತಿ ಅಂದ ಚಂದಕ್ಕೆ ವಿರುದ್ಧವಾಗಿ ಕೃತಕ ಕಾಂಕ್ರಿಟ್‌ ಕಟ್ಟಡ ಕಟ್ಟಲು ಹೋದರೆ ಅದು ನಿಲ್ಲುವುದಿಲ್ಲ, ನಿರಂತರ ಕಾಡು ನಾಶ, ಬೆಟ್ಟ ಗುಡ್ಡ ಕರಗಿಸಿ ಕಟ್ಟಡ ನಿರ್ಮಾಣ ಒಂದೆಡೆಯಾದರೆ ದೊಡ್ಡ ಕೈಗಾರಿಕೆ, ವಿಷಾನೀಲ ಮನುಷ್ಯನ ಬದುಕಿಗೆ ಆತಂಕ ಒಡ್ಡಿದೆ ಎಂದರು.

ಪತ್ರಕರ್ತ ಅರುಣ್‌ ಮಾತನಾಡಿ, ಮಕ್ಕಳಿಗೆ ಅಭಿನಯ ಕಲಿಸಬೇಕು. ಅದು ಬದುಕಿನ ಒತ್ತಡ ಕಡಿಮೆ ಮಾಡುವ ಜತೆಗೆ ಬದುಕಿನ ಮತ್ತೊಂದು ಮಗ್ಗುಲು ಅಥೈರ್‍ಸುತ್ತದೆ. ಪ್ರತಿ ಶಾಲೆ ಮಕ್ಕಳಿಗೂ ರಂಗತರಬೇತಿ ನೀಡುವುದು ಅಗತ್ಯವಿದೆ ಎಂದು ಹೇಳಿದರು. ಉಪನ್ಯಾಸಕ ಸುರೇಶ್‌, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಸಾವಿತ್ರಮ್ಮ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ