ಆ್ಯಪ್ನಗರ

ವಿಚಾರಧಾರೆ ಸಮಾಜಕ್ಕೆ ಅಗತ್ಯ

ಶೋಷಣೆ ಮುಕ್ತ ಸಮಾಜ ನಿರ್ಮಾಣಕ್ಕೆ ಒತ್ತು ನೀಡಿದ ಬ್ರಹ್ಮಶ್ರೀ ನಾರಾಯಣಗುರು ಅವರು ತಳ ಸಮುದಾಯದ ಚೇತನ. ಶಿಕ್ಷಣದಿಂದ ಮಾತ್ರ ಸಮಾಜ ಸುಧಾರಣೆ ಸಾಧ್ಯ ಎಂಬುದನ್ನು ನಾರಾಯಣಗುರುಗಳು ಬಲವಾಗಿ ನಂಬಿದ್ದರು ಎಂದು ತಾ.ಪಂ.ಸದಸ್ಯ ಬೇಗುವಳ್ಳಿ ಕವಿರಾಜ್‌ ಅಭಿಪ್ರಾಯಪಟ್ಟರು.

Vijaya Karnataka 14 Sep 2019, 5:00 am
ತೀರ್ಥಹಳ್ಳಿ : ಶೋಷಣೆ ಮುಕ್ತ ಸಮಾಜ ನಿರ್ಮಾಣಕ್ಕೆ ಒತ್ತು ನೀಡಿದ ಬ್ರಹ್ಮಶ್ರೀ ನಾರಾಯಣಗುರು ಅವರು ತಳ ಸಮುದಾಯದ ಚೇತನ. ಶಿಕ್ಷಣದಿಂದ ಮಾತ್ರ ಸಮಾಜ ಸುಧಾರಣೆ ಸಾಧ್ಯ ಎಂಬುದನ್ನು ನಾರಾಯಣಗುರುಗಳು ಬಲವಾಗಿ ನಂಬಿದ್ದರು ಎಂದು ತಾ.ಪಂ.ಸದಸ್ಯ ಬೇಗುವಳ್ಳಿ ಕವಿರಾಜ್‌ ಅಭಿಪ್ರಾಯಪಟ್ಟರು.
Vijaya Karnataka Web 13TTH1_46


ಶುಕ್ರವಾರ ತಾಲೂಕು ಕಚೇರಿ ಸಭಾಂಗಣದಲ್ಲಿತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಮ್ಮಿಕೊಂಡಿದ್ದ ಬ್ರಹ್ಮ ಶ್ರೀ ನಾರಾಯಣಗುರುಗಳ ಜಯಂತಿ ಉದ್ದೇಶಿಸಿ ಅವರು ಮಾತನಾಡಿದರು.

ಆತ್ಮ ವಿಶ್ವಾಸ ಮೂಡಿಸಿ ತಳ ಸಮುದಾಯ ಮೇಲಕ್ಕೆತ್ತುವ ಪ್ರಯತ್ನದಲ್ಲಿನಾರಾಯಣಗುರುಗಳು ಸಾಕಷ್ಟು ಯಶಸ್ಸು ಪಡೆದಿದ್ದರು. ಮಹಾನ್‌ ದಾರ್ಶನಿಕ ನಾರಾಯಣಗುರು ಪ್ರತಿಪಾದಿಸಿದ ವಿಚಾರಧಾರೆ ಪ್ರಸ್ತುತ ಸಮಾಜಕ್ಕೆ ಅಗತ್ಯ ಎಂದರು. ಸಮಾರಂಭದಲ್ಲಿತಾ.ಪಂ. ಉಪಾಧ್ಯಕ್ಷೆ ಯಶೋಧಮಂಜುನಾಥ್‌, ತಹಸೀಲ್ದಾರ್‌ ಎಂ.

ಭಾಗ್ಯ, ತಾಲೂಕು ಆರ‍್ಯ ಈಡಿಗರ ಸಂಘದ ಅಧ್ಯಕ್ಷ ಮಟ್ಟಿಮನೆ ರಾಮಚಂದ್ರ ಮಾತನಾಡಿದರು. ಆರ‍್ಯ ಈಡಿಗರ ಸಂಘದ ನಿರ್ದೇಶಕರಾದ ಚಿಪ್ಪಿನಕೊಡಿಗೆ ವೆಂಕಟೇಶ, ತಲವಡಗ ಗಂಗಾಧರ್‌ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ