ಆ್ಯಪ್ನಗರ

ಮಳೆಯ ಕೋಪ, ಆತಂಕದಲ್ಲಿ ರೈತರು

ವಿಕ ಸುದ್ದಿಲೋಕ ತೀರ್ಥಹಳ್ಳಿ ಸತತವಾಗಿ ಕಾಡುತ್ತಿರುವ ಪ್ರಾಕೃತಿಕ ವೈಪರೀತ್ಯ ವ್ಯವಸಾಯ ಕಸುಬನ್ನು ಸಂಪೂರ್ಣ ನೆಲ ಕಚ್ಚುವಂತೆ ಮಾಡಿದೆ...

Vijaya Karnataka 31 Oct 2019, 5:00 am
ತೀರ್ಥಹಳ್ಳಿ : ಸತತವಾಗಿ ಕಾಡುತ್ತಿರುವ ಪ್ರಾಕೃತಿಕ ವೈಪರೀತ್ಯ ವ್ಯವಸಾಯ ಕಸುಬನ್ನು ಸಂಪೂರ್ಣ ನೆಲ ಕಚ್ಚುವಂತೆ ಮಾಡಿದೆ. ಅಕ್ಟೋಬರ್‌ ತಿಂಗಳಿನಲ್ಲೂಅಡಕೆಗೆ ಕೊಳೆ ರೋಗ ತಗುಲಿದ್ದು ರೈತರಿಗೆ ಔಷಧ ಸಿಂಪಡಣೆ ಅನಿವಾರ‍್ಯವಾಗಿದೆ.
Vijaya Karnataka Web the rage of the rain the peasants in anxiety
ಮಳೆಯ ಕೋಪ, ಆತಂಕದಲ್ಲಿ ರೈತರು

ಏತ್ಮನಧ್ಯೆ, ಪ್ರಕೃತಿ ವಿಕೋಪದಿಂದ ನಷ್ಟಕ್ಕೀಡಾಗಿರುವ ರೈತರನ್ನು ಸರಕಾರ ಕೈ ಹಿಡಿದಿಲ್ಲ. ಕಳೆದ 15ದಿನಗಳಿಂದ ಬಿಡದೆ ಸುರಿ ಯುತ್ತಿರುವ ಮಳೆಯಿಂದಾಗಿ ನಿರೀಕ್ಷೆ ಮಾಡಲಾಗದ ರೀತಿಯಲ್ಲಿ ಅಡಕೆ ಕೊಳೆರೋಗಕ್ಕೆ ತುತ್ತಾಗಿದೆ. ಕೊಯ್ಲಿಗೆ ಸಿದ್ಧವಾಗಿ ರುವ ಅಡಕೆ ಕೊಳೆರೋಗ ಬಾಧೆಯಿಂದ ಉದುರಿ ಹೋಗುತ್ತಿವೆ.
ಅಡಕೆ ಕೃಷಿಯ ಇತಿಹಾಸದಲ್ಲಿ ಅಕ್ಟೋಬರ್‌ ತಿಂಗಳಿನಲ್ಲಿಕೊಳೆರೋಗ ವನ್ನು ರೈತರು ಕಂಡಿಲ್ಲ. ನಾಲ್ಕು ತಿಂಗಳಿನಿಂದ ಸತತವಾಗಿ ಮಳೆ ಸುರಿಯು ತ್ತಿದ್ದು ಮುನ್ನೆಚ್ಚರಿಕೆ ಕ್ರಮವಾಗಿ ರೈತರು ಬೋರ್ಡೋ ಮಿಶ್ರಣದ ಔಷಧ ಸಿಂಪಡಣೆ ಮಾಡಿದ್ದರೂ ಅಡಕೆ ಕೊಳೆ ರೋಗಕ್ಕೆ ಸಿಕ್ಕಿ ಕೊಂಡಿದೆ. ನಿಯಂತ್ರಣಕ್ಕಾಗಿ ಐದಾರು ಬಾರಿ ಔಷಧ ಸಿಂಪಡಣೆ ಮಾಡಿದ್ದರೂ ಅಡಕೆ ಕೊಳೆ ರೋಗವನ್ನು ತಡೆಯಲು ರೈತರಿಗೆ ಸಾಧ್ಯವಾಗಿಲ್ಲ. ಮುನಿದ ಪ್ರಕೃತಿ ಅಡಕೆಯನ್ನು ಕೊಳೆರೋಗದ ಮೂಲಕ ನೆಲಕ್ಕುರುಳಿಸುತ್ತಿದೆ.

ಆದಾಯಕ್ಕಿಂತ ಹೆಚ್ಚಿದ ಖರ್ಚು: ತಡವಾಗಿ ಆರಂಭ ವಾದ ಮುಂಗಾರು ದೀರ್ಘಾವಧಿವರೆಗೆ ಸುರಿಯು ತ್ತಿರುವುದು ಸಹಜವಾಗಿ ರೈತರನ್ನು ಕಂಗಾ ಲಾಗಿಸಿದೆ. ಅಡಕೆ ಫಸಲಿನಲ್ಲಿ ಮುಂಬೆಳೆಸು, ಹಿಂಬೆಳಸು ಎಂದು ವರ್ಗೀಕರಿಸಿ ಕೊಯ್ಲಕಾರ‍್ಯ ಆರಂಭಿ ಸುವ ರೈತರಿಗೆ ಮಳೆ ಅಡ್ಡಿಯಾಗಿದೆ. ಅಕ್ಟೋಬರ್‌ ತಿಂಗಳಲ್ಲಿಕೊಳೆ ರೋಗಕ್ಕೆ ಔಷಧ ಸಿಂಪಡಣೆ ಮಾಡಿದ ಅನುಭವ ರೈತರಿಗೆ ಇಲ್ಲವಾಗಿದೆ. ಬೆಳೆದು ನಿಂತ ಫಸಲು ಕೈಗೆ ಸಿಗಲಾರದು ಎಂಬ ಆತಂಕ ದಲ್ಲಿ ರೈತರು ಅನಿವಾರ‍್ಯವಾಗಿ ಕೊಳೆ ರೋಗ ನಿಯಂತ್ರಣದ ಔಷಧ ಸಿಂಪಡಣೆ ಮಾಡುತ್ತಿ ದ್ದಾರೆ. 1 ಎಕರೆ ವಿಸ್ತೀರ್ಣದ ಅಡಕೆ ಫಸಲಿಗೆ 1ಬಾರಿ ಬೋರ್ಡೋ ಮಿಶ್ರಣ ಔಷಧ ಸಿಂಪಡಣೆಗೆ ಸುಮಾರು 15 ಸಾವಿರ ರೂ. ಖರ್ಚಾಗುತ್ತದೆ. ಕೊಳೆರೋಗ ನಿಯಂತ್ರಣಕ್ಕಾಗಿ ರೈತರು ಈ ವರ್ಷ ಸುಮಾರು 5 ಬಾರಿ ಔಷಧ ಸಿಂಪಡಣೆ ಮಾಡಿದ್ದು ಖರ್ಚು ಹೆಚ್ಚಾಗಿ ಆರ್ಥಿಕ ಸಂಕಷ್ಟ ಅನುಭವಿಸುವಂತಾಗಿದೆ. ಕುಸಿಯುತ್ತಿರುವ ಅಡಕೆ ಧಾರಣೆಯಿಂದಾಗಿ ಈ ವರ್ಷ ಆದಾಯಕ್ಕಿಂತ ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ.
ಅಡಕೆ ಹೊಡೆ ಮೇಲೆ ಹೊಡೆತ: ನಿರಂತರವಾಗಿರುವ ಶೀತವಾತಾವರಣದಿಂದಾಗಿ ತೋಟದ ಸಮತೋಲನ ಆರೋಗ್ಯ ಸಂಪೂರ್ಣ ಬದಲಾದಂತಿದೆ. ಪ್ರಕೃತಿ ವೈಪರೀತ್ಯ ಅಡಕೆ ಮರಗಳ ಬದುಕಿನ ಆಯಸು ಕ್ಷೀಣಿ ಸುವುದಕ್ಕೂ ಕಾರಣವಾದಂತಿದೆ. ತೋಟಕ್ಕೆ ಕಾಲಿಡ ಲಾಗುದಂತಹ ಸನ್ನಿವೇಶ ಸೃಷ್ಟಿಯಾಗಿದ್ದು, ಕೆಸರುಮಯ ವಾಗಿದೆ. ನಿರಂತರವಾಗಿರುವ ಮಳೆಯಿಂದಾಗಿ ಹಿಂಗಾರು (ಹೊಡೆ) ಮೇಲೆ ದುಷ್ಪರಿಣಾಮ ಬೀರಿದೆ. ಮುಂದಿನ ವರ್ಷ ಅಡಕೆ ಫಸಲು ಕಡಿಮೆ ಆಗುವ ಸಾಧ್ಯತೆಯನ್ನು ಅಲ್ಲಗೆಳೆಯುವಂತಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ