ಆ್ಯಪ್ನಗರ

ಶರಾವತಿ ಭೂಗರ್ಭ ವಿದ್ಯುತ್‌ ಯೋಜನೆ ಸೂಕ್ತವಲ್ಲ

ಶರಾವತಿ ಭೂಗರ್ಭ ವಿದ್ಯುತ್‌ ಯೋಜನೆ ಸೂಕ್ತವಲ್ಲ. ಅಪಾರ ಪ್ರಮಾಣದ ಅರಣ್ಯನಾಶವಾಗುತ್ತದೆ ಎನ್ನುವ ವಿಷಯವನ್ನು ಜೀವವೈವಿಧ್ಯ ದಿನಾಚರಣೆ ಸಂದರ್ಭದಲ್ಲಿಮುಖ್ಯಮಂತ್ರಿಗಳ ಗಮನಕ್ಕೆ ತಂದು,ಯೋಜನೆ ಪುನರ್‌ ಪರಿಶೀಲನೆ ನಡೆಸುವಂತೆ ಮನವಿ ಮಾಡಲಾಗಿದೆ ಎಂದು ರಾಜ್ಯ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಹೇಳಿದರು.

Vijaya Karnataka 10 Jul 2020, 5:00 am
ಸಾಗರ : ಶರಾವತಿ ಭೂಗರ್ಭ ವಿದ್ಯುತ್‌ ಯೋಜನೆ ಸೂಕ್ತವಲ್ಲ. ಅಪಾರ ಪ್ರಮಾಣದ ಅರಣ್ಯನಾಶವಾಗುತ್ತದೆ ಎನ್ನುವ ವಿಷಯವನ್ನು ಜೀವವೈವಿಧ್ಯ ದಿನಾಚರಣೆ ಸಂದರ್ಭದಲ್ಲಿಮುಖ್ಯಮಂತ್ರಿಗಳ ಗಮನಕ್ಕೆ ತಂದು,ಯೋಜನೆ ಪುನರ್‌ ಪರಿಶೀಲನೆ ನಡೆಸುವಂತೆ ಮನವಿ ಮಾಡಲಾಗಿದೆ ಎಂದು ರಾಜ್ಯ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಹೇಳಿದರು.
Vijaya Karnataka Web the sharavati underground power project is not suitable
ಶರಾವತಿ ಭೂಗರ್ಭ ವಿದ್ಯುತ್‌ ಯೋಜನೆ ಸೂಕ್ತವಲ್ಲ


ಬಾಳೆಗೆರೆಯಲ್ಲಿಗುರುವಾರ ಅರಣ್ಯ ಇಲಾಖೆ ಹಾಗೂ ಬಾಳೆಗೆರೆ ಗ್ರಾಮ ಅರಣ್ಯ ಸಮಿತಿ ವತಿಯಿಂದ ಆಯೋಜಿಸಿದ್ದ ವೃಕ್ಷರೋಪಣ ಕಾರ್ಯಕ್ರಮವನ್ನು ಸಸಿ ನೆಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

ಬಾಳೆಗೆರೆ ಔಷಧವನವನ್ನು 2008ರಿಂದ ಈ ಭಾಗದ ಗ್ರಾಮಸ್ಥರು ಸಂರಕ್ಷಣೆ ಮಾಡಿದ್ದಾರೆ. ಭೂಗಳ್ಳರ ಒತ್ತುವರಿಗೆ ಒಳಗಾಗಿದ್ದ ಈ ಪ್ರದೇಶವನ್ನು ಹೋರಾಟದ ಮೂಲಕ ಜನರು ರಕ್ಷಣೆ ಮಾಡಿದ್ದಾರೆ.ಇದನ್ನು ಒಂದು ಪ್ರವಾಸಿತಾಣವಾಗಿ ಮಾಡುವ ಸಾಧ್ಯತೆ ಇದೆ. ಸುಮಾರು 100 ಎಕರೆ ಪ್ರದೇಶದಲ್ಲಿರುವ ಔಷಧ ವನವನ್ನು ಮುಂದಿನ ಎರಡು ವರ್ಷಗಳಲ್ಲಿಅಭಿವೃದ್ಧಿಪಡಿಸುವ ನೀಲನಕ್ಷೆ ತಯಾರಿಸಲಾಗುವುದು ಎಂದರು. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಿವಮೂರ್ತಿ, ವಲಯ ಅರಣ್ಯಾಧಿಕಾರಿ ಡಿ.ಆರ್‌.ಪ್ರಮೋದ್‌, ವೃಕ್ಷಲಕ್ಷ ಆಂದೋಲನದ ಬಿ.ಎಚ್‌.ರಾಘವೇಂದ್ರ, ವೆಂಕಟೇಶ್‌ ಕವಲಕೋಡು, ಹು.ಭಾ.ಅಶೋಕ್‌, ಆನೆಗುಳಿ ಸುಬ್ರಾವ್‌, ಗ್ರಾಮ ಅರಣ್ಯ ಸಮಿತಿಯ ಕೆ.ವಿ.ಮಂಜುನಾಥ್‌, ರಜನೀಶ್‌, ರಾಘವೇಂದ್ರ, ಎ.ಟಿ.ಅಣ್ಣಪ್ಪ, ಲಕ್ಷತ್ರ್ಮಣ್‌ ಇನ್ನಿತರರು ಹಾಜರಿದ್ದರು.

-----------------

ಪಶ್ಚಿಮಘಟ್ಟ ಮತ್ತು ಮಲೆನಾಡು ಪ್ರದೇಶದಲ್ಲಿಅರಣ್ಯನಾಶ ಮಾಡುವ ಯಾವುದೇ ಯೋಜನೆಗಳಿಗೆ ಅವಕಾಶ ನೀಡುವುದಿಲ್ಲ.ಭೂ ಸುಧಾರಣಾ ಕಾಯಿದೆ ತಿದ್ದುಪಡಿ ಬಗ್ಗೆ ಸಹ ಪುನರ್‌ ವಿಮರ್ಶೆ ಮಾಡುವಂತೆ ಪರಿಸರ ಸಂಘಟನೆಗಳು ಮುಖ್ಯಮಂತ್ರಿಗಳಿಗೆ ಮನವಿ ಮಾಡಿವೆ. ಮುಖ್ಯಮಂತ್ರಿಗಳು ಭೂಸುಧಾರಣಾ ಕಾಯಿದೆ ತಿದ್ದುಪಡಿ ಅನ್ವಯ ಕೃಷಿಯೇತರ ಉದ್ದೇಶಕ್ಕೆ ಭೂಮಿ ಕೊಡುವುದಿಲ್ಲಎಂದು ಸಹ ಭರವಸೆ ನೀಡಿದ್ದಾರೆ.

-ಅನಂತ ಹೆಗಡೆ ಆಶೀಸರ,ರಾಜ್ಯ ಜೀವವೈವಿಧ್ಯ ಮಂಡಳಿ ಅಧ್ಯಕ್ಷ
===============


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ