ಆ್ಯಪ್ನಗರ

‘ರಂಗಭೂಮಿ ಜಗತ್ತು ಅರಿವಿಗೆ ಸಹಕಾರಿ’

ರಂಗಭೂಮಿ ಮೂಲಕ ವಾಸ್ತವ ಜಗತ್ತನ್ನು ಅರ್ಥ ಮಾಡಿಕೊಳ್ಳಲು ಸಾಧ್ಯ ಎಂದು ಎಲ್‌ಬಿ ಕಾಲೇಜಿನ ಇಂಗ್ಲೀಷ್‌ ಪ್ರಾಧ್ಯಾಪಕ ಸುಬ್ಬರಾವ್‌ ಹೇಳಿದರು.

Vijaya Karnataka 15 Jan 2019, 5:00 am
ಸಾಗರ: ರಂಗಭೂಮಿ ಮೂಲಕ ವಾಸ್ತವ ಜಗತ್ತನ್ನು ಅರ್ಥ ಮಾಡಿಕೊಳ್ಳಲು ಸಾಧ್ಯ ಎಂದು ಎಲ್‌ಬಿ ಕಾಲೇಜಿನ ಇಂಗ್ಲೀಷ್‌ ಪ್ರಾಧ್ಯಾಪಕ ಸುಬ್ಬರಾವ್‌ ಹೇಳಿದರು.
Vijaya Karnataka Web SMR-13SGR16


ಇಲ್ಲಿನ ಸೇವಾಸಾಗರ ಶಾಲೆಯ ಅಜಿತ್‌ ಸಭಾಭವನದಲ್ಲಿ ಶನಿವಾರ ಶಿವಮೊಗ್ಗ ಜಿಲ್ಲಾ ದೇವಾಡಿಗರ ಸಂಘ ಸಾಗರ ಶಾಖೆ ಹಾಗೂ ಕಲಾಸೌರಭ ಸಾಗರ ಇವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ಏರ್ಪಡಿಸಿದ್ದ ಜಾನಪದ ಸಂಗೀತ ನಾಟಕ 'ಬೆಳ್ಳಕ್ಕಿ ಹಿಂಡು ಬೆದರಾರ‍ಯವೊ' ನಾಟಕ ಪ್ರದರ್ಶನ ಕಾರ್ಯಕ್ರಮವನ್ನು ತಬಲಾ ನುಡಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ನಾಟಕಗಳು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದೆ ಎಂದರು. ಸಾಗರ ತಾಲೂಕು ಸರಕಾರಿ ನೌಕರರ ಸಹಕಾರ ಸಂಘದ ಅಧ್ಯಕ್ಷ ಎಚ್‌.ಆರ್‌. ನಾಗಭೂಷಣ್‌ ಮಾತನಾಡಿದರು. ಜಿಲ್ಲಾ ದೇವಾಡಿಗರ ಸಂಘದ ಅಧ್ಯಕ್ಷ ಬಿ.ದೇವರಾಜ್‌ ಅಧ್ಯಕ್ಷ ತೆ ವಹಿಸಿದ್ದರು. ಸಂಘದ ಪದಾಧಿಕಾರಿಗಳಾದ ರಾಜು ದೇವಾಡಿಗ, ಶ್ರೀನಿವಾಸ ದೇವಾಡಿಗ, ರಂಗ ನಿರ್ದೇಶಕ ದೇವೇಂದ್ರ ಬೆಳೆಯೂರು, ಶಿಕ್ಷ ಕರ ಸಂಘದ ಅಧ್ಯಕ್ಷ ತಿಮ್ಮಪ್ಪ , ಸರಕಾರಿ ನೌಕರರ ಸಂಘದ ಕಾರ್ಯದರ್ಶಿ ಕೆ.ಜಗನ್ನಾಥ, ವಿ.ಟಿ.ಸ್ವಾಮಿ ಇತರರು ಇದ್ದರು. ಬಿ.ಮೂರ್ತಿ ಮತ್ತು ಸಂಗಡಿಗರು ಪ್ರಾರ್ಥಿಸಿ, ಎಂ.ವೈ.ಮೂರ್ತಿ ಸ್ವಾಗತಿಸಿದರು. ಸತ್ಯನಾರಾಯಣ ಸಿರಿವಂತೆ ಸ್ವಾಗತಿಸಿ, ಡಿ.ಮನೋಹರಪ್ಪ ವಂದಿಸಿದರು. ರಮೇಶ್‌ ಜೆ. ನಿರೂಪಿಸಿದರು. ಮನೋಹರಪ್ಪ ಡಿ. ಮತ್ತು ಸಂಗಡಿಗರಿಂದ ಜಾನಪದ ಸಂಗೀತ ನಾಟಕವನ್ನು ಪ್ರದರ್ಶಿಸಲಾಯಿತು. ದೇವೇಂದ್ರ ಬೆಳೆಯೂರು ನಿರ್ದೇಶಿಸಿದ ನಾಟಕಕ್ಕೆ ರಮೇಶ್‌ ಜೆ. ಸಂಗೀತ ನಿರ್ದೇಶನ ಮಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ