ಸೊರಬ: ಸಾಹಿತ್ಯ, ಕಲೆ, ವಿಮರ್ಶೆ, ಸಂಸ್ಕೃತಿ, ಹೋರಾಟ ರಾಜಕಾರಣದಲ್ಲಿ ಗುರುತಿಸಿಕೊಂಡ ಸೊರಬ ತಾಲೂಕಿನ ರಂಗಮಂದಿರದಲ್ಲಿ ಸುವ್ಯವಸ್ಥೆಗಳಿಲ್ಲದ ರಂಗವೇದಿಕೆ ನೋಡಿದರೆ ಹೊಟ್ಟೆ ಉರಿಯುತ್ತದೆ ಎಂದು ಶಿವಮೊಗ್ಗ ರಂಗಾಯಣದ ನಿರ್ದೇಶಕ ಡಾ.ಎಂ.ಗಣೇಶ್ ಹೇಳಿದರು.
ಪಟ್ಟಣದ ರಂಗಮಂದಿರದಲ್ಲಿ ಇಲ್ಲಿನ ಕಲಾಸುರಭಿ ಸಾಂಸ್ಕೃತಿಕ ವೇದಿಕೆ ಗುರುವಾರ ಸಂಜೆ ಏರ್ಪಡಿಸಿದ್ದ 2ನೇ ವರ್ಷದ ಸೊರಬ ರಂಗೋತ್ಸವದಡಿ ಶಿವಮೊಗ್ಗ ರಂಗಾಯಣದ ರಂಗತೇರು-ಮೂರು ನಾಟಕಗಳ ಪ್ರದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತಾಲೂಕಲ್ಲಿ ಸಾಂಸ್ಕೃತಿಕ ಚಟುವಟಿಕೆಗೆ ಪ್ರಾಧಾನ್ಯತೆ ಕೊಡುವ ಅಗತ್ಯವಿದೆ. ಸಾಂಸ್ಕೃತಿಕತೆ ಇಲ್ಲದ ಊರು ಊರಲ್ಲ. ಮಲೆನಾಡಿನ ಮಡಿಲಲ್ಲಿರುವ ಸೊರಬ ತಾಲೂಕು ಸಾಂಸ್ಕೃತಿಕತೆ ವಿಷಯದಲ್ಲಿ ಕೊರಗುತ್ತಿದೆ. ಸಾಹಿತ್ಯ, ಜಾನಪದ, ಕಲೆ, ನಾಟಕ, ವಿಚಾರಗೋಷ್ಠಿಗಳಿಗೆ ಪ್ರಾಧಾನ್ಯತೆ ನೀಡಬೇಕೆಂದರು.
ಶಿವಮೊಗ್ಗ ರಂಗಾಯಣ ಸ್ಥಳೀಯತೆ ಕಟ್ಟುವ ಕೆಲಸ ಮಾಡುತ್ತಿದೆ. ರಂಗಾಯಣದ ರಂಗತೇರು ಎಂಬ ವಿಶಿಷ್ಟ ಕಾರ್ಯಕ್ರಮ ಹಮ್ಮಿಕೊಂಡು ಅಖಂಡ ಕರ್ನಾಟಕ ಪರಿಭಾಷೆ ಹಾಗೂ ಸ್ಥಳೀಯತೆಯನ್ನು ಕಟ್ಟಿಕೊಡುವ ನಾಟಕಗಳನ್ನು ಪ್ರದರ್ಶನಮಾಡುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸೊರಬ ರಂಗೋತ್ಸವ ಅಧ್ಯಕ್ಷ ರಾಜಪ್ಪ ಮಾಸ್ತರ್ ಮಾತನಾಡಿ, ಜನರಲ್ಲಿ ಸಾಂಸ್ಕೃತಿಕ ಹಾಗೂ ವೈಚಾರಿಕ ಪ್ರಜ್ಞೆ ಮೂಡಿಸಲು ಸೊರಬ ರಂಗೋತ್ಸವ ಹಮ್ಮಿಕೊಳ್ಳಲಾಗುತ್ತಿದೆ ಎಂದರು. ರಾಜ್ಯ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಲಕ್ಷ ್ಮಣಪ್ಪ ಕರಡಿ ಹೆಚ್ಚೆ ಉದ್ಘಾಟಿಸಿ ಮಾತನಾಡಿದರು. ಸೊರಬ ರಂಗೋತ್ಸವದ ಕಾರ್ಯಾಧ್ಯಕ್ಷ ಎಸ್.ಎಂ.ನೀಲೇಶ್ ಪ್ರಾಸ್ತಾವಿಕ ಮಾತನಾಡಿದರು. ಗಾಯಕಿ ಪೂರ್ಣಿಮಾ ಬಾವೆ ಪ್ರಾರ್ಥಿಸಿ, ರಂಗೋತ್ಸವ ಖಜಾಂಚಿ ಎಚ್.ಗುರುಮೂರ್ತಿ ಸ್ವಾಗತಿಸಿ, ಸದಸ್ಯ ಎಂ.ಮಂಜುನಾಥ್ ವಂದಿಸಿ, ಸಹಕಾರ್ಯದರ್ಶಿ ಎನ್.ಲಲಿತಾ ನಿರೂಪಿಸಿದರು. ತಹಸೀಲ್ದಾರ್ ಶ್ರೀಧರಮೂರ್ತಿ, ರೋಟರಿ ಕ್ಲಬ್ ಅಧ್ಯಕ್ಷ ಡಿ.ಎಸ್.ಶಂಕರ್, ಸಮಾಜ ಸೇವಕ ಪಿ.ಜಿ.ಹರ್ಷ, ರಂಗೋತ್ಸವದ ಉಪಾಧ್ಯಕ್ಷ ರಾದ ಬಿ.ಲಕ್ಷ ್ಮಣಪ್ಪ, ಶಿವಾನಂದ ಪಾಣಿ, ರವಿ ಕಲ್ಲಂಬಿ, ಅಂಡಿಗೆ ಸಹಕಾರ ಸಂಘದ ನಿರ್ದೇಶಕ ಕೆ.ಪಿ.ಷಣ್ಮುಖಪ್ಪ ಇತರರಿದ್ದರು. ನಂತರ ಶಿವಮೊಗ್ಗ ರಂಗಾಯಣ ತಂಡದವರು ಪ್ರೊ.ಅರವಿಂದ ಮಾಲಗತ್ತಿಯವರ ಆತ್ಮಕಥೆ ಆಧಾರಿತ, ಡಾ.ಎಂ.ಗಣೇಶ್ ನಿರ್ದೇಶನದ, ಆರ್.ಜಗದೀಶ್ ಅವರ ಸಂಗೀತ ಮತ್ತು ವಸ್ತ್ರ ವಿನ್ಯಾಸದ ಗೌರ್ಮೆಂಟ್ ಬ್ರಾಹ್ಮಣ ನಾಟಕವನ್ನು ಪ್ರದರ್ಶನ ಮಾಡಿದರು.
---------
ಕಲಾವಿದರಿಗೆ ರಂಗವೇದಿಕೆ ಮನೆ ಎನಿಸಬೇಕು. ಆ ಮನೆಯಲ್ಲಿ ತಮಗೆ ಬೇಕಾದ ಪರಿಕರ ಕೈಗೆಟಕುವಂತಿರಬೇಕು. ಆದರೆ ತಾಲೂಕಲ್ಲಿ ದೊಡ್ಡ ರಂಗಮಂದಿರ ನಿರ್ಮಾಣವಾದರೂ ಸುವ್ಯವಸ್ಥಿತ ರಂಗವೇದಿಕೆ ಇಲ್ಲದಿರುವುದು ಬೇಸರದ ಸಂಗತಿ. ಯಾವುದೇ ರೀತಿಯ ಪರದೆ, ಧ್ವನಿವರ್ಧಕ, ಲೈಟಿಂಗ್ಸ್ ಇಲ್ಲದಿರುವ ಜತೆಗೆ ವೇದಿಕೆ ಮೇಲೆ ನಡೆದಾಡಿದರೆ ಹುದಗಲು ಗದ್ದೆಯಲ್ಲಿ ಓಡಾಡಿದಂತಾಗುತ್ತದೆ. ಈ ಅವ್ಯವಸ್ಥೆ ನೋಡಿದರೆ ಆಡಳಿತ ವ್ಯವಸ್ಥೆ ಮೇಲೆ ಬೇಸರವಾಗುತ್ತದೆ. ಕೂಡಲೇ ಸಂಬಂಧ ಪಟ್ಟವರು ಸುವ್ಯವಸ್ಥಿತ ರಂಗವೇದಿಕೆ ನಿರ್ಮಿಸಬೇಕು.
-ಡಾ.ಎಂ.ಗಣೇಶ್
ಪಟ್ಟಣದ ರಂಗಮಂದಿರದಲ್ಲಿ ಇಲ್ಲಿನ ಕಲಾಸುರಭಿ ಸಾಂಸ್ಕೃತಿಕ ವೇದಿಕೆ ಗುರುವಾರ ಸಂಜೆ ಏರ್ಪಡಿಸಿದ್ದ 2ನೇ ವರ್ಷದ ಸೊರಬ ರಂಗೋತ್ಸವದಡಿ ಶಿವಮೊಗ್ಗ ರಂಗಾಯಣದ ರಂಗತೇರು-ಮೂರು ನಾಟಕಗಳ ಪ್ರದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತಾಲೂಕಲ್ಲಿ ಸಾಂಸ್ಕೃತಿಕ ಚಟುವಟಿಕೆಗೆ ಪ್ರಾಧಾನ್ಯತೆ ಕೊಡುವ ಅಗತ್ಯವಿದೆ. ಸಾಂಸ್ಕೃತಿಕತೆ ಇಲ್ಲದ ಊರು ಊರಲ್ಲ. ಮಲೆನಾಡಿನ ಮಡಿಲಲ್ಲಿರುವ ಸೊರಬ ತಾಲೂಕು ಸಾಂಸ್ಕೃತಿಕತೆ ವಿಷಯದಲ್ಲಿ ಕೊರಗುತ್ತಿದೆ. ಸಾಹಿತ್ಯ, ಜಾನಪದ, ಕಲೆ, ನಾಟಕ, ವಿಚಾರಗೋಷ್ಠಿಗಳಿಗೆ ಪ್ರಾಧಾನ್ಯತೆ ನೀಡಬೇಕೆಂದರು.
ಶಿವಮೊಗ್ಗ ರಂಗಾಯಣ ಸ್ಥಳೀಯತೆ ಕಟ್ಟುವ ಕೆಲಸ ಮಾಡುತ್ತಿದೆ. ರಂಗಾಯಣದ ರಂಗತೇರು ಎಂಬ ವಿಶಿಷ್ಟ ಕಾರ್ಯಕ್ರಮ ಹಮ್ಮಿಕೊಂಡು ಅಖಂಡ ಕರ್ನಾಟಕ ಪರಿಭಾಷೆ ಹಾಗೂ ಸ್ಥಳೀಯತೆಯನ್ನು ಕಟ್ಟಿಕೊಡುವ ನಾಟಕಗಳನ್ನು ಪ್ರದರ್ಶನಮಾಡುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸೊರಬ ರಂಗೋತ್ಸವ ಅಧ್ಯಕ್ಷ ರಾಜಪ್ಪ ಮಾಸ್ತರ್ ಮಾತನಾಡಿ, ಜನರಲ್ಲಿ ಸಾಂಸ್ಕೃತಿಕ ಹಾಗೂ ವೈಚಾರಿಕ ಪ್ರಜ್ಞೆ ಮೂಡಿಸಲು ಸೊರಬ ರಂಗೋತ್ಸವ ಹಮ್ಮಿಕೊಳ್ಳಲಾಗುತ್ತಿದೆ ಎಂದರು. ರಾಜ್ಯ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಲಕ್ಷ ್ಮಣಪ್ಪ ಕರಡಿ ಹೆಚ್ಚೆ ಉದ್ಘಾಟಿಸಿ ಮಾತನಾಡಿದರು. ಸೊರಬ ರಂಗೋತ್ಸವದ ಕಾರ್ಯಾಧ್ಯಕ್ಷ ಎಸ್.ಎಂ.ನೀಲೇಶ್ ಪ್ರಾಸ್ತಾವಿಕ ಮಾತನಾಡಿದರು. ಗಾಯಕಿ ಪೂರ್ಣಿಮಾ ಬಾವೆ ಪ್ರಾರ್ಥಿಸಿ, ರಂಗೋತ್ಸವ ಖಜಾಂಚಿ ಎಚ್.ಗುರುಮೂರ್ತಿ ಸ್ವಾಗತಿಸಿ, ಸದಸ್ಯ ಎಂ.ಮಂಜುನಾಥ್ ವಂದಿಸಿ, ಸಹಕಾರ್ಯದರ್ಶಿ ಎನ್.ಲಲಿತಾ ನಿರೂಪಿಸಿದರು. ತಹಸೀಲ್ದಾರ್ ಶ್ರೀಧರಮೂರ್ತಿ, ರೋಟರಿ ಕ್ಲಬ್ ಅಧ್ಯಕ್ಷ ಡಿ.ಎಸ್.ಶಂಕರ್, ಸಮಾಜ ಸೇವಕ ಪಿ.ಜಿ.ಹರ್ಷ, ರಂಗೋತ್ಸವದ ಉಪಾಧ್ಯಕ್ಷ ರಾದ ಬಿ.ಲಕ್ಷ ್ಮಣಪ್ಪ, ಶಿವಾನಂದ ಪಾಣಿ, ರವಿ ಕಲ್ಲಂಬಿ, ಅಂಡಿಗೆ ಸಹಕಾರ ಸಂಘದ ನಿರ್ದೇಶಕ ಕೆ.ಪಿ.ಷಣ್ಮುಖಪ್ಪ ಇತರರಿದ್ದರು. ನಂತರ ಶಿವಮೊಗ್ಗ ರಂಗಾಯಣ ತಂಡದವರು ಪ್ರೊ.ಅರವಿಂದ ಮಾಲಗತ್ತಿಯವರ ಆತ್ಮಕಥೆ ಆಧಾರಿತ, ಡಾ.ಎಂ.ಗಣೇಶ್ ನಿರ್ದೇಶನದ, ಆರ್.ಜಗದೀಶ್ ಅವರ ಸಂಗೀತ ಮತ್ತು ವಸ್ತ್ರ ವಿನ್ಯಾಸದ ಗೌರ್ಮೆಂಟ್ ಬ್ರಾಹ್ಮಣ ನಾಟಕವನ್ನು ಪ್ರದರ್ಶನ ಮಾಡಿದರು.
---------
ಕಲಾವಿದರಿಗೆ ರಂಗವೇದಿಕೆ ಮನೆ ಎನಿಸಬೇಕು. ಆ ಮನೆಯಲ್ಲಿ ತಮಗೆ ಬೇಕಾದ ಪರಿಕರ ಕೈಗೆಟಕುವಂತಿರಬೇಕು. ಆದರೆ ತಾಲೂಕಲ್ಲಿ ದೊಡ್ಡ ರಂಗಮಂದಿರ ನಿರ್ಮಾಣವಾದರೂ ಸುವ್ಯವಸ್ಥಿತ ರಂಗವೇದಿಕೆ ಇಲ್ಲದಿರುವುದು ಬೇಸರದ ಸಂಗತಿ. ಯಾವುದೇ ರೀತಿಯ ಪರದೆ, ಧ್ವನಿವರ್ಧಕ, ಲೈಟಿಂಗ್ಸ್ ಇಲ್ಲದಿರುವ ಜತೆಗೆ ವೇದಿಕೆ ಮೇಲೆ ನಡೆದಾಡಿದರೆ ಹುದಗಲು ಗದ್ದೆಯಲ್ಲಿ ಓಡಾಡಿದಂತಾಗುತ್ತದೆ. ಈ ಅವ್ಯವಸ್ಥೆ ನೋಡಿದರೆ ಆಡಳಿತ ವ್ಯವಸ್ಥೆ ಮೇಲೆ ಬೇಸರವಾಗುತ್ತದೆ. ಕೂಡಲೇ ಸಂಬಂಧ ಪಟ್ಟವರು ಸುವ್ಯವಸ್ಥಿತ ರಂಗವೇದಿಕೆ ನಿರ್ಮಿಸಬೇಕು.
-ಡಾ.ಎಂ.ಗಣೇಶ್