ಆ್ಯಪ್ನಗರ

‘ಮೌಲ್ಯ’ ಹುಟ್ಟು ಹಾಕದ ಶಿಕ್ಷಣ

ಸ್ವಾತಂತ್ರ್ಯ ನಂತರವೂ ದೇಶದಲ್ಲಿ ಮೆಕಾಲೆ ಶಿಕ್ಷಣ ಪದ್ದತಿಯನ್ನು ಉಳಿಸಿಕೊಳ್ಳುವ ಪ್ರಯತ್ನ ನಡೆಯಿತು. ದೇಶದ ಸಂಸ್ಕೃತಿ ಉಳಿಸುವ ಶಿಕ್ಷಣವನ್ನು ಮಕ್ಕಳಿಗೆ ತಲುಪಿಸುವ ಮಹತ್ತರ ಕಾರ‍್ಯವನ್ನು ವಿದ್ಯಾಭಾರತಿ 67 ವರ್ಷದಿಂದ ನಿರ್ವಹಿಸುತ್ತಿದೆ ಎಂದು ಶಾಸಕ ಆರಗಜ್ಞಾನೇಂದ್ರ ಹೇಳಿದರು.

Vijaya Karnataka 30 Jun 2019, 5:00 am
ತೀರ್ಥಹಳ್ಳಿ : ಸ್ವಾತಂತ್ರ್ಯ ನಂತರವೂ ದೇಶದಲ್ಲಿ ಮೆಕಾಲೆ ಶಿಕ್ಷಣ ಪದ್ದತಿಯನ್ನು ಉಳಿಸಿಕೊಳ್ಳುವ ಪ್ರಯತ್ನ ನಡೆಯಿತು. ದೇಶದ ಸಂಸ್ಕೃತಿ ಉಳಿಸುವ ಶಿಕ್ಷಣವನ್ನು ಮಕ್ಕಳಿಗೆ ತಲುಪಿಸುವ ಮಹತ್ತರ ಕಾರ‍್ಯವನ್ನು ವಿದ್ಯಾಭಾರತಿ 67 ವರ್ಷದಿಂದ ನಿರ್ವಹಿಸುತ್ತಿದೆ ಎಂದು ಶಾಸಕ ಆರಗಜ್ಞಾನೇಂದ್ರ ಹೇಳಿದರು.
Vijaya Karnataka Web SMR-29TTH7


ಶನಿವಾರ ಪಟ್ಟಣದ ಗಾಯಿತ್ರಿ ಮಂದಿರದಲ್ಲಿ ಸೇವಾಭಾರತಿ ಶಿಕ್ಷಣ ವಿದ್ಯಾ ಕೇಂದ್ರದ ಸಹಯೋಗದಲ್ಲಿ ನಡೆದ ವಿದ್ಯಾಭಾರತಿ ಜಿಲ್ಲಾ ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ಸಹಮಿಲನ ಕಾರ‍್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪದವಿಗಳು ಶಿಕ್ಷಣದ ಮೌಲ್ಯವನ್ನು ಹುಟ್ಟು ಹಾಕದೆ ಕೆಲವು ಭ್ರಷ್ಟಾಚಾರಿ, ದೇಶದ್ರೋಹಿಗಳನ್ನು ಹುಟ್ಟು ಹಾಕುತ್ತಿರುವುದು ವಿಷಾಧಸಂಗತಿ. ಭಾರತದಲ್ಲಿ ಹುಟಿ ್ಟ ಭಾರತದ ವಿರುದ್ದ ಘೋಷಣೆ ಕೂಗುವ ಪ್ರಯತ್ನ ಮಾಡಲಾಗುತ್ತಿದೆ. ಕೆಲ ಶಿಕ್ಷಣ ಸಂಸ್ಥೆಗಳು ವ್ಯಕ್ತಿತ್ವ ರೂಪಿಸುವ ಕೆಲಸ ಮಾಡದೆ ಹಣ ಮಾಡುವ ದಂಧೆಯಲ್ಲಿ ತೊಡಗಿವೆ ಎಂದು ಆರಗಜ್ಞಾನೇಂದ್ರ ಹೇಳಿದರು.

ಶಿಕ್ಷಣ ಸಂಸ್ಥೆಗಳು ದಾರಿ ತಪ್ಪಿದರೆ ಉತ್ತಮ ಶಿಕ್ಷಣ ಮಕ್ಕಳಿಗೆ ಸಿಗಲು ಸಾಧ್ಯವಿಲ್ಲ. ಶಿಕ್ಷಣ ಪಡೆಯದವರಲ್ಲಿರುವ ಪ್ರಾಮಾಣಿಕತೆ ಶಿಕ್ಷಣ ಪಡೆದವರಲ್ಲಿ ಕಾಣುತ್ತಿಲ್ಲ. ಆದಿವಾಸಿ, ವನವಾಸಿಗಳು,ಗುಡ್ಡಗಾಡು ಪ್ರದೇಶದ ಸೇರಿದಂತೆ ಇತರೆ ಭಾಗದ ಸುಮಾರು 36 ಲಕ್ಷ ವಿದ್ಯಾರ್ಥಿಗಳನ್ನು, 1ಲಕ್ಷದ 50 ಸಾವಿರ ಶಿಕ್ಷಕರನ್ನು ಹೊಂದಿರುವ ವಿದ್ಯಾಭಾರತಿ ಇಂದು ದೇಶದ ಅತ್ಯುನ್ನತ ಶಿಕ್ಷಣ ಸಂಸ್ಥೆ ಆಗಿ ರೂಪುಗೊಂಡಿದೆ ಎಂದು ಆರಗಜ್ಞಾನೇಂದ್ರ ಹೇಳಿದರು.

ಕಾರ‍್ಯಕ್ರಮದ ವೇದಿಕೆಯಲ್ಲಿ ವಿದ್ಯಾಭಾರತಿಯ ಶಂಕರನಾಯ್ಕ್‌, ರಘುವೀರ್‌,ರಾಜರಾಮ್‌, ಕೆ.ಎಂ. ಜಯಶೀಲ, ರಾಘವೇಂದ್ರ, ಸ್ವಯಂ ಸೇವಕ ಸಂಘದ ಭಾರತೀಪುರ ದಿನೇಶ್‌ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ