ಆ್ಯಪ್ನಗರ

ಹಾಡಹಗಲೆ ಹಣ, ಆಭರಣ ದೋಚಿದ ಕಳ್ಳರು

ಮನೆಯೊಳಗಿದ್ದ ಯುವತಿಯನ್ನು ಕಟ್ಟಿಹಾಕಿ ಹಣ ಹಾಗೂ ಒಡವೆಗಳನ್ನು ದೋಚಿರುವ ಘಟನೆ ನಗರದ ವಿನೋಬನಗರ ವ್ಯಾಪ್ತಿಯ ಅರವಿಂದನಗರದಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ.

Vijaya Karnataka 3 Jul 2019, 5:00 am
ಶಿವಮೊಗ್ಗ : ಮನೆಯೊಳಗಿದ್ದ ಯುವತಿಯನ್ನು ಕಟ್ಟಿಹಾಕಿ ಹಣ ಹಾಗೂ ಒಡವೆಗಳನ್ನು ದೋಚಿರುವ ಘಟನೆ ನಗರದ ವಿನೋಬನಗರ ವ್ಯಾಪ್ತಿಯ ಅರವಿಂದನಗರದಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ.
Vijaya Karnataka Web thieves who grab song and jewelry jewelry
ಹಾಡಹಗಲೆ ಹಣ, ಆಭರಣ ದೋಚಿದ ಕಳ್ಳರು


ಅರವಿಂದ ನಗರದ ನಿವೃತ್ತ ನೌಕರ ಶಂಕರರಾವ್‌ ಅವರ ಮನೆಯಲ್ಲಿ ಈ ಘಟನೆ ನಡೆದಿದೆ. ಶಂಕರರಾವ್‌ ಮಗಳು ಶುಭ ಅವರು ಮಂಗಳವಾರ ಬೆಳಗ್ಗೆ ಒಬ್ಬರೆ ಇದ್ದಾಗ ಯಾರೋ ಹಿಂಬಾಗಿಲ ಕದ ತಟ್ಟಿದ್ದರಿಂದ ಬಾಗಿಲು ತೆರೆದಿದ್ದಾರೆ. ಈ ಸಂದರ್ಭದಲ್ಲಿ ತಲೆಗೆ ಹೆಲ್ಮೆಟ್‌ ಹಾಕಿದ್ದ ಇಬ್ಬರು ಅಪರಿಚಿತರು ಏಕಾಏಕಿ ಒಳಗೆ ನುಗ್ಗಿ ಕೂಗದಂತೆ ಬೆದರಿಕೆ ಹಾಕಿ ಆಕೆ ಕೈ ಕಾಲು ಕಟ್ಟಲು ಪ್ರಯತ್ನಿಸಿದ್ದಾರೆ. ಈ ಹಂತದಲ್ಲಿ ಆಕೆ ಗಾಬರಿಯಿಂದಾಗಿ ಪ್ರಜ್ಞೆ ತಪ್ಪಿ ಬೀಳುತ್ತಿದ್ದಂತೆ ಕಳ್ಳರು ಮನೆಯೊಳಗಿದ್ದ 15 ಗ್ರಾಂ ತೂಕದ ಚಿನ್ನದ ಸರ, 15ಸಾವಿರ ರೂ. ನಗದು ಹಾಗೂ ಶುಭ ಅವರ ಕಿವಿಯಲ್ಲಿದ್ದ ಓಲೆಗಳನ್ನು ಕಳವು ಮಾಡಿ ಪರಾರಿಯಾಗಿದ್ದಾರೆ.

ಅರೆ ಪ್ರಜ್ಞಾವಸ್ಥೆಯಲ್ಲಿದ್ದ ಶುಭ ಬಳಿಕ ಎಚ್ಚೆತ್ತು ತನ್ನ ತಂದೆಗೆ ಕರೆ ಮಾಡಿದ್ದು, ಮನೆಗೆ ಬಂದ ಶಂಕರರಾವ್‌ ಮಗಳನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದರು. ವಿನೋಬನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ