ಸಾಗರ : ಇಲ್ಲಿನ ಮಹಾಗಣಪತಿ ದೇವಸ್ಥಾನ ಸಮೀಪವಿರುವ ಶ್ರೀಸಿದ್ಧಿವಿನಾಯಕ, ವೆಂಕಟೇಶ್ವರ, ಹರದೂರು ದುರ್ಗಾಂಬಾ ದೇವಸ್ಥಾನದ ಬೀಗ ಒಡೆದು ಕಾಣಿಕೆ ಹುಂಡಿಯನ್ನು ದೋಚಿರುವ ಘಟನೆಗೆ ಸಂಬಂಧಪಟ್ಟಂತೆ ಭಾನುವಾರ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ದೇವಸ್ಥಾನ ಮುಂಭಾಗದ ಕಬ್ಬಿಣದ ಗ್ರಿಲ್ಗೆ ಹಾಕಿದ್ದ ಬೀಗವನ್ನು ಒಡೆದಿರುವ ಕಳ್ಳರು, ದೇವಸ್ಥಾನದ ಒಳಗಿರುವ ಕಬ್ಬಿಣದ ಮೂರು ಕಾಣಿಕೆ ಹುಂಡಿಯ ಬೀಗವನ್ನು ಒಡೆದು ಸುಮಾರು 15ಸಾವಿರ ರೂ. ನಗದು ದೋಚಿದ್ದಾರೆ. ಅರ್ಚಕರಾದ ಪರಮೇಶ್ವರ ಎಸ್. ಭಟ್ ನಗರ ಠಾಣೆಗೆ ದೂರು ನೀಡಿದ್ದಾರೆ.
ದೇವಸ್ಥಾನ ಮುಂಭಾಗದ ಕಬ್ಬಿಣದ ಗ್ರಿಲ್ಗೆ ಹಾಕಿದ್ದ ಬೀಗವನ್ನು ಒಡೆದಿರುವ ಕಳ್ಳರು, ದೇವಸ್ಥಾನದ ಒಳಗಿರುವ ಕಬ್ಬಿಣದ ಮೂರು ಕಾಣಿಕೆ ಹುಂಡಿಯ ಬೀಗವನ್ನು ಒಡೆದು ಸುಮಾರು 15ಸಾವಿರ ರೂ. ನಗದು ದೋಚಿದ್ದಾರೆ. ಅರ್ಚಕರಾದ ಪರಮೇಶ್ವರ ಎಸ್. ಭಟ್ ನಗರ ಠಾಣೆಗೆ ದೂರು ನೀಡಿದ್ದಾರೆ.