ಆ್ಯಪ್ನಗರ

ಕೆಜಿಎಫ್ ಪ್ರಸಾರ ವೇಳೆ ಕರೆಂಟ್ ತೆಗೆದ್ರೆ ಬಾಂಬ್ ಹಾಕ್ತೀನಿ: ಮೆಸ್ಕಾಂಗೆ ಬೆದರಿಕೆ ಪತ್ರ

ಖಾಸಗಿ ವಾಹಿನಿಯೊಂದರಲ್ಲಿ ಕೆಜಿಎಫ್ ಚಿತ್ರ ಪ್ರಸಾರವಾಗಲಿದೆ. ಈ ಸಂದರ್ಭದಲ್ಲಿ ವಿದ್ಯುತ್ ಕಡಿತ ಮಾಡಬಾರದು. ವಿದ್ಯುತ್ ಕಡಿತಗೊಳಿಸಿದರೆ ಕಚೇರಿ ಮೇಲೆ ಬಾಂಬ್ ಎಸೆಯುತ್ತೇವೆ ಎಂದು ಬೆದರಿಕೆ ಹಾಕಲಾಗಿದೆ.

Vijaya Karnataka Web 29 Mar 2019, 3:37 pm
ಶಿವಮೊಗ್ಗ: ಯಶ್ ಅಭಿನಯದ ಕೆಜಿಎಫ್ ಸಿನಿಮಾ ಪ್ರಸಾರದ ವೇಳೆ ವಿದ್ಯುತ್ ಕಡಿತಗೊಳಿಸಿದರೆ ಬಾಂಬ್ ಹಾಕುತ್ತೇವೆ ಎಂಬ ಅನಾಮಧೇಯ ಬೆದರಿಕೆ ಪತ್ರವೊಂದು ಭದ್ರವತಿಯ ಮೆಸ್ಕಾಂ ಕಚೇರಿಗೆ ಬಂದಿದೆ.
Vijaya Karnataka Web KGF


ನಾಳೆ (30.3.2019) ಖಾಸಗಿ ವಾಹಿನಿಯೊಂದರಲ್ಲಿ ಕೆಜಿಎಫ್ ಚಿತ್ರ ಪ್ರಸಾರವಾಗಲಿದೆ. ಈ ಸಂದರ್ಭದಲ್ಲಿ ವಿದ್ಯುತ್ ಕಡಿತ ಮಾಡಬಾರದು. ವಿದ್ಯುತ್ ಕಡಿತಗೊಳಿಸಿದರೆ ಕಚೇರಿ ಮೇಲೆ ಬಾಂಬ್ ಎಸೆಯುತ್ತೇವೆ ಎಂದು ಬೆದರಿಕೆ ಹಾಕಲಾಗಿದೆ.



ರಾಜಕೀಯ ಕುಮ್ಮಕ್ಕಿನಿಂದ ಸಿನಿಮಾ ಪ್ರಸಾರದ ವೇಳೆ ವಿದ್ಯುತ್ ಕಡಿತಗೊಳಿಸುವಂತಿಲ್ಲ ಎಂದು ಅನಾಮಧೇಯ ವ್ಯಕ್ತಿ ಪತ್ರದಲ್ಲಿ ತಿಳಿಸಿದ್ದಾನೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ