ಶಿವಮೊಗ್ಗ: ಹೊಸನಗರ ತಾಲೂಕಿನ ನಗರ ಪ್ರಾಂತ್ಯದ ನಾಗರಾಜ್ರಾವ್ ಎಂಬುವವರ ತೋಟದ ಬಾವಿಯಲ್ಲಿ ಸಿಕ್ಕಿದ್ದ ಸುಮಾರು ಒಂದು ಸಾವಿರಕ್ಕೂ ಅಧಿಕ ಕಬ್ಬಿಣದ ರಾಕೆಟ್ಗಳು ಶಿವಪ್ಪ ನಾಯಕ ಅರಮನೆ ಸೇರಿವೆ.
ರಾಕೆಟ್ಗಳನ್ನು ಗುರುವಾರ ರಾತ್ರಿಯೇ ಅರಮನೆಗೆ ತರಲಾಗಿದೆ. ರಾಕೆಟ್ ತಂತ್ರಜ್ಞಾನ ಮತ್ತು ಇದರ ಬಳಕೆ ವಿಧಾನ ಸೇರಿದಂತೆ ನಾನಾ ಅಂಶಗಳ ಕುರಿತು ಹೆಚ್ಚುವರಿ ಸಂಶೋಧನೆಗಾಗಿ ತಜ್ಞರ ಸಮಿತಿ ರಚನೆಯ ಚಿಂತನೆ ನಡೆದಿದೆ.
ಟಿಪ್ಪು ಕಾಲದ್ದೆಂದು ಹೇಳಲಾಗುತ್ತಿರುವ ಈ ರಾಕೆಟ್ಗಳು ಸಾಕಷ್ಟು ಪುರಾತನವಾಗಿದ್ದು, ಇದಕ್ಕೆ ಬಳಸಲಾಗಿದ್ದ ಮದ್ದು ಕಸುವು ಕಳೆದುಕೊಂಡಿದೆ. ಹೀಗಾಗಿ, ಈಗಿದನ್ನು ಸ್ಫೋಟಕವಾಗಿ ಬಳಸಲಾಗದು. ಈಗಿನ ಸಂದರ್ಭಕ್ಕೆ ರಾಕೆಟ್ ತಂತ್ರಜ್ಞಾನ ಹೊಸತೇನಲ್ಲ. ಆದರೆ, ಸುಮಾರು 18ನೇ ಶತಮಾನದಲ್ಲಿಯೇ ಇಂತಹ ಸಂಶೋಧನೆ ಅಪರೂಪ ಎನಿಸಿಕೊಳ್ಳುತ್ತದೆ. ಕಬ್ಬಿಣದ ರಾಕೆಟ್ಗೂ ಮುಂಚೆ ಕಾಗದ ಅಥವಾ ಮರದಿಂದ ಮಾಡಿದ ರಾಕೆಟ್ಗಳನ್ನು ಬಳಸಲಾಗುತಿತ್ತು.
2002ರಲ್ಲಿ ಸುಮಾರು ಎರಡ್ಮೂರು ರಾಕೆಟ್ಗಳು ಇಲ್ಲಿ ಪತ್ತೆಯಾಗಿದ್ದವು. ಇನ್ನಷ್ಟು ಸಂಖ್ಯೆಯಲ್ಲಿ ರಾಕೆಟ್ಗಳಿರಬಹುದು ಎಂಬ ಕಾರಣಕ್ಕೆ ರಾಜ್ಯ ಪುರಾತತ್ವ ಇಲಾಖೆ ಆಯುಕ್ತ ಜಿ.ವೆಂಕಟೇಶ್ ಅವರು ವಿಶೇಷ ಆಸಕ್ತಿಯ ಫಲವಾಗಿ ಸಂಶೋಧನೆ ಮುಂದುವರಿಸಿದರ ಪರಿಣಾಮ ಬೃಹತ್ ಪ್ರಮಾಣದ ರಾಕೆಟ್ಗಳು ಸಿಕ್ಕಿವೆ. ಆರಂಭದಲ್ಲಿ ''ಸುಮಾರು 500ರಷ್ಟು ಸಿಗಬಹುದು ಅಂದುಕೊಂಡಿದ್ದೇವು. ಆದರೆ, ಮಣ್ಣು ಅಗಿಯಲು ಆರಂಭಿಸಿದಾಗ ಸಾವಿರಾರು ಕಬ್ಬಿಣದ ರಾಕೆಟ್ ದೊರೆತಿವೆ'' ಎಂದು ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ಸಹಾಯಕ ನಿರ್ದೇಶಕ ಆರ್.ಶೇಜೇಶ್ವರ್ ತಿಳಿಸಿದ್ದಾರೆ.
ಬಿದನೂರು ರಾಕೆಟ್ ಗ್ಯಾಲರಿ :
ನಗರದ ಶಿವಪ್ಪನಾಯಕ ಅರಮನೆ ಆವರಣದಲ್ಲಿ ಬಿದನೂರು ರಾಕೆಟ್ ಗ್ಯಾಲರಿ ಸ್ಥಾಪಿಸಲು ಪುರಾತತ್ವ ಇಲಾಖೆ ಚಿಂತನೆ ನಡೆಸಿದೆ. ಅಂದುಕೊಂಡಂತೆ ಆದಲ್ಲಿ ಇಲ್ಲಿಗೆ ಭೇಟಿ ನೀಡುವ ಸಾರ್ವಜನಿಕರಿಗೆ ಅರಮನೆಯ ವೈಭವದೊಂದಿಗೆ ಟಿಪ್ಪುವಿನ ಕಾಲದ ರಾಕೆಟ್ಗಳೂ ನೋಡಲು ಸಿಗಲಿವೆ.
ಈಗ ಸಿಕ್ಕಿರುವ ಕಬ್ಬಿಣದ ರಾಕೆಟ್ಗಳು ಒಂದೇ ಕಬ್ಬಿಣವನ್ನು ಅಖಂಡವಾಗಿ ಮೌಲ್ಡ್ ಮಾಡಿ ತಯಾರಿಸಲಾಗಿದೆ. ಎರಡೂ ಬದಿಯಲ್ಲಿ ಮುಚ್ಚಿದ್ದು, ಒಂದು ಕಡೆ ಬತ್ತಿ ಇದೆ. ಸುಮಾರು ಒಂದೂವರೆ ಕಿ.ಮೀ.ವರೆಗೆ ಇದು ಚಿಮ್ಮುವ ಸಾಮರ್ಥ್ಯ ಹೊಂದಿತ್ತು. ಆದರೆ, ಇದರ ಸ್ಫೋಟಕದಿಂದ ಗಬಹುದಾದ ಹಾನಿಯ ಬಗ್ಗೆ ಅಧ್ಯಯನದ ಬಳಿಕವೇ ಗೊತ್ತಾಗಲಿದೆ. ಜತೆಗೆ, ಮದ್ದು ತುಂಬಲು ಬಳಸಲಾಗುತ್ತಿದ್ದ ಬೈರಿಗೆಯೂ ಸಿಕ್ಕಿದೆ ಎಂದು ಶೇಜೇಶ್ವರ್ ತಿಳಿಸಿದ್ದಾರೆ.
1799ರಲ್ಲಿ ಟಿಪ್ಪುವಿನ ಮರಣಾನಂತರ ಬ್ರಿಟಿಷರು 1801ರಲ್ಲಿ ಇಲ್ಲಿನ ರಾಕೆಟ್ಗಳ ಮಾದರಿಗಳನ್ನು ಒಯ್ದು ಇಂಗ್ಲೆಂಡಿನ ವುಲ್ವಿಚ್ ರಾಯಲ್ ಪ್ರಯೋಗಾಲಯದಲ್ಲಿ ಇರಿಸಿದ್ದರು. ಅಲ್ಲಿ ನಿಯಂತ್ರಕರಾಗಿದ್ದ ವಿಲಿಯಂ ಕಾಂಗ್ರಿವ್ ಎಂಬುವವರು ರಾಕೆಟ್ಗಳನ್ನು ಸುದೀರ್ಘ ಪ್ರಯೋಗಕ್ಕೆ ಒಳಪಡಿಸಿದ್ದರು. ಇಂತಹ ರಾಕೆಟ್ಗಳು ಪ್ರಪಂಚದ ಎರಡು ಕಡೆಗಳಲ್ಲಿ ಮಾತ್ರ ಇವೆ ಎನ್ನಲಾಗುತ್ತದೆ.
ರಾಕೆಟ್ ವಿನ್ಯಾಸ:
19*50 ಸೆ.ಮೀ. ಉದ್ದ, 3.50 ಸೆ.ಮೀ. ಅಗಲ ಹಾಗೂ 21*50 ಸೆ.ಮೀ. ಉದ್ದ, 3.50 ಸೆ.ಮೀ. ಅಗಲದ ರಾಕೆಟ್ ಪತ್ತೆ.
ಬಾವಿ ತುಂಬ ಮದ್ದಿನ ವಾಸನೆ
ಬೃಹತ್ ಪ್ರಮಾಣದ ಮದ್ದು ತುಂಬಿದ್ದ ಜೀವಂತ ರಾಕೆಟ್ಗಳನ್ನು ಬಾವಿಗೆ ಎಸೆದಿರುವುದರಿಂದಾಗಿ ಬಾವಿಯ ನೀರು ಮದ್ದು ವಾಸನೆಯಿಂದ ಕೂಡಿವೆ. ಹೀಗಾಗಿ, ಅವುಗಳನ್ನು ಬಳಸಲಾಗುವುದಿಲ್ಲ. ಇದರ ವ್ಯಾಪ್ತಿಯಲ್ಲೇ ಮತ್ತಷ್ಟು ಬಾವಿಗಳಿದ್ದು, ಅವುಗಳನ್ನೂ ಪರಿಶೀಲಿಸಲಾಗಿದೆ. ಆದರೆ, ಎಲ್ಲಿಯೂ ಈ ರೀತಿಯ ವಾಸನೆ ಪತ್ತೆಯಾಗಿಲ್ಲ. ಹೀಗಾಗಿ, ಬೇರೆಡೆ ರಾಕೆಟ್ಗಳನ್ನು ಹಾಕಿಲ್ಲ ಎಂದು ಅಂದಾಜಿಸಬಹುದು ಎಂದು ಇಲಾಖೆ ಅಧಿಕಾರಿ ಹೇಳುತ್ತಾರೆ.
ಹೊಸನಗರ ತಾಲೂಕಿನಲ್ಲಿ ಸಿಕ್ಕಿರುವ ರಾಕೆಟ್ಗಳನ್ನು ಶಿವಪ್ಪನಾಯಕ ಅರಮನೆಯಲ್ಲಿ ಇರಿಸಲಾಗಿದೆ. ಈ ಬಗ್ಗೆ ಹೆಚ್ಚಿನ ಅಧ್ಯಯನ ಮತ್ತು ಇಲ್ಲಿಗೆ ಭೇಟಿ ನೀಡುವವರ ಪ್ರದರ್ಶನಕ್ಕೆ ಇಡುವ ಚಿಂತನೆಯೂ ನಡೆದಿದೆ.
- ಆರ್.ಶೇಜೇಶ್ವರ್, ಸಹಾಯಕ ನಿರ್ದೇಶಕರು, ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ, ಮೈಸೂರು
ರಾಕೆಟ್ಗಳನ್ನು ಗುರುವಾರ ರಾತ್ರಿಯೇ ಅರಮನೆಗೆ ತರಲಾಗಿದೆ. ರಾಕೆಟ್ ತಂತ್ರಜ್ಞಾನ ಮತ್ತು ಇದರ ಬಳಕೆ ವಿಧಾನ ಸೇರಿದಂತೆ ನಾನಾ ಅಂಶಗಳ ಕುರಿತು ಹೆಚ್ಚುವರಿ ಸಂಶೋಧನೆಗಾಗಿ ತಜ್ಞರ ಸಮಿತಿ ರಚನೆಯ ಚಿಂತನೆ ನಡೆದಿದೆ.
ಟಿಪ್ಪು ಕಾಲದ್ದೆಂದು ಹೇಳಲಾಗುತ್ತಿರುವ ಈ ರಾಕೆಟ್ಗಳು ಸಾಕಷ್ಟು ಪುರಾತನವಾಗಿದ್ದು, ಇದಕ್ಕೆ ಬಳಸಲಾಗಿದ್ದ ಮದ್ದು ಕಸುವು ಕಳೆದುಕೊಂಡಿದೆ. ಹೀಗಾಗಿ, ಈಗಿದನ್ನು ಸ್ಫೋಟಕವಾಗಿ ಬಳಸಲಾಗದು. ಈಗಿನ ಸಂದರ್ಭಕ್ಕೆ ರಾಕೆಟ್ ತಂತ್ರಜ್ಞಾನ ಹೊಸತೇನಲ್ಲ. ಆದರೆ, ಸುಮಾರು 18ನೇ ಶತಮಾನದಲ್ಲಿಯೇ ಇಂತಹ ಸಂಶೋಧನೆ ಅಪರೂಪ ಎನಿಸಿಕೊಳ್ಳುತ್ತದೆ. ಕಬ್ಬಿಣದ ರಾಕೆಟ್ಗೂ ಮುಂಚೆ ಕಾಗದ ಅಥವಾ ಮರದಿಂದ ಮಾಡಿದ ರಾಕೆಟ್ಗಳನ್ನು ಬಳಸಲಾಗುತಿತ್ತು.
2002ರಲ್ಲಿ ಸುಮಾರು ಎರಡ್ಮೂರು ರಾಕೆಟ್ಗಳು ಇಲ್ಲಿ ಪತ್ತೆಯಾಗಿದ್ದವು. ಇನ್ನಷ್ಟು ಸಂಖ್ಯೆಯಲ್ಲಿ ರಾಕೆಟ್ಗಳಿರಬಹುದು ಎಂಬ ಕಾರಣಕ್ಕೆ ರಾಜ್ಯ ಪುರಾತತ್ವ ಇಲಾಖೆ ಆಯುಕ್ತ ಜಿ.ವೆಂಕಟೇಶ್ ಅವರು ವಿಶೇಷ ಆಸಕ್ತಿಯ ಫಲವಾಗಿ ಸಂಶೋಧನೆ ಮುಂದುವರಿಸಿದರ ಪರಿಣಾಮ ಬೃಹತ್ ಪ್ರಮಾಣದ ರಾಕೆಟ್ಗಳು ಸಿಕ್ಕಿವೆ. ಆರಂಭದಲ್ಲಿ ''ಸುಮಾರು 500ರಷ್ಟು ಸಿಗಬಹುದು ಅಂದುಕೊಂಡಿದ್ದೇವು. ಆದರೆ, ಮಣ್ಣು ಅಗಿಯಲು ಆರಂಭಿಸಿದಾಗ ಸಾವಿರಾರು ಕಬ್ಬಿಣದ ರಾಕೆಟ್ ದೊರೆತಿವೆ'' ಎಂದು ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ಸಹಾಯಕ ನಿರ್ದೇಶಕ ಆರ್.ಶೇಜೇಶ್ವರ್ ತಿಳಿಸಿದ್ದಾರೆ.
ಬಿದನೂರು ರಾಕೆಟ್ ಗ್ಯಾಲರಿ :
ನಗರದ ಶಿವಪ್ಪನಾಯಕ ಅರಮನೆ ಆವರಣದಲ್ಲಿ ಬಿದನೂರು ರಾಕೆಟ್ ಗ್ಯಾಲರಿ ಸ್ಥಾಪಿಸಲು ಪುರಾತತ್ವ ಇಲಾಖೆ ಚಿಂತನೆ ನಡೆಸಿದೆ. ಅಂದುಕೊಂಡಂತೆ ಆದಲ್ಲಿ ಇಲ್ಲಿಗೆ ಭೇಟಿ ನೀಡುವ ಸಾರ್ವಜನಿಕರಿಗೆ ಅರಮನೆಯ ವೈಭವದೊಂದಿಗೆ ಟಿಪ್ಪುವಿನ ಕಾಲದ ರಾಕೆಟ್ಗಳೂ ನೋಡಲು ಸಿಗಲಿವೆ.
ಈಗ ಸಿಕ್ಕಿರುವ ಕಬ್ಬಿಣದ ರಾಕೆಟ್ಗಳು ಒಂದೇ ಕಬ್ಬಿಣವನ್ನು ಅಖಂಡವಾಗಿ ಮೌಲ್ಡ್ ಮಾಡಿ ತಯಾರಿಸಲಾಗಿದೆ. ಎರಡೂ ಬದಿಯಲ್ಲಿ ಮುಚ್ಚಿದ್ದು, ಒಂದು ಕಡೆ ಬತ್ತಿ ಇದೆ. ಸುಮಾರು ಒಂದೂವರೆ ಕಿ.ಮೀ.ವರೆಗೆ ಇದು ಚಿಮ್ಮುವ ಸಾಮರ್ಥ್ಯ ಹೊಂದಿತ್ತು. ಆದರೆ, ಇದರ ಸ್ಫೋಟಕದಿಂದ ಗಬಹುದಾದ ಹಾನಿಯ ಬಗ್ಗೆ ಅಧ್ಯಯನದ ಬಳಿಕವೇ ಗೊತ್ತಾಗಲಿದೆ. ಜತೆಗೆ, ಮದ್ದು ತುಂಬಲು ಬಳಸಲಾಗುತ್ತಿದ್ದ ಬೈರಿಗೆಯೂ ಸಿಕ್ಕಿದೆ ಎಂದು ಶೇಜೇಶ್ವರ್ ತಿಳಿಸಿದ್ದಾರೆ.
1799ರಲ್ಲಿ ಟಿಪ್ಪುವಿನ ಮರಣಾನಂತರ ಬ್ರಿಟಿಷರು 1801ರಲ್ಲಿ ಇಲ್ಲಿನ ರಾಕೆಟ್ಗಳ ಮಾದರಿಗಳನ್ನು ಒಯ್ದು ಇಂಗ್ಲೆಂಡಿನ ವುಲ್ವಿಚ್ ರಾಯಲ್ ಪ್ರಯೋಗಾಲಯದಲ್ಲಿ ಇರಿಸಿದ್ದರು. ಅಲ್ಲಿ ನಿಯಂತ್ರಕರಾಗಿದ್ದ ವಿಲಿಯಂ ಕಾಂಗ್ರಿವ್ ಎಂಬುವವರು ರಾಕೆಟ್ಗಳನ್ನು ಸುದೀರ್ಘ ಪ್ರಯೋಗಕ್ಕೆ ಒಳಪಡಿಸಿದ್ದರು. ಇಂತಹ ರಾಕೆಟ್ಗಳು ಪ್ರಪಂಚದ ಎರಡು ಕಡೆಗಳಲ್ಲಿ ಮಾತ್ರ ಇವೆ ಎನ್ನಲಾಗುತ್ತದೆ.
ರಾಕೆಟ್ ವಿನ್ಯಾಸ:
19*50 ಸೆ.ಮೀ. ಉದ್ದ, 3.50 ಸೆ.ಮೀ. ಅಗಲ ಹಾಗೂ 21*50 ಸೆ.ಮೀ. ಉದ್ದ, 3.50 ಸೆ.ಮೀ. ಅಗಲದ ರಾಕೆಟ್ ಪತ್ತೆ.
ಬಾವಿ ತುಂಬ ಮದ್ದಿನ ವಾಸನೆ
ಬೃಹತ್ ಪ್ರಮಾಣದ ಮದ್ದು ತುಂಬಿದ್ದ ಜೀವಂತ ರಾಕೆಟ್ಗಳನ್ನು ಬಾವಿಗೆ ಎಸೆದಿರುವುದರಿಂದಾಗಿ ಬಾವಿಯ ನೀರು ಮದ್ದು ವಾಸನೆಯಿಂದ ಕೂಡಿವೆ. ಹೀಗಾಗಿ, ಅವುಗಳನ್ನು ಬಳಸಲಾಗುವುದಿಲ್ಲ. ಇದರ ವ್ಯಾಪ್ತಿಯಲ್ಲೇ ಮತ್ತಷ್ಟು ಬಾವಿಗಳಿದ್ದು, ಅವುಗಳನ್ನೂ ಪರಿಶೀಲಿಸಲಾಗಿದೆ. ಆದರೆ, ಎಲ್ಲಿಯೂ ಈ ರೀತಿಯ ವಾಸನೆ ಪತ್ತೆಯಾಗಿಲ್ಲ. ಹೀಗಾಗಿ, ಬೇರೆಡೆ ರಾಕೆಟ್ಗಳನ್ನು ಹಾಕಿಲ್ಲ ಎಂದು ಅಂದಾಜಿಸಬಹುದು ಎಂದು ಇಲಾಖೆ ಅಧಿಕಾರಿ ಹೇಳುತ್ತಾರೆ.
ಹೊಸನಗರ ತಾಲೂಕಿನಲ್ಲಿ ಸಿಕ್ಕಿರುವ ರಾಕೆಟ್ಗಳನ್ನು ಶಿವಪ್ಪನಾಯಕ ಅರಮನೆಯಲ್ಲಿ ಇರಿಸಲಾಗಿದೆ. ಈ ಬಗ್ಗೆ ಹೆಚ್ಚಿನ ಅಧ್ಯಯನ ಮತ್ತು ಇಲ್ಲಿಗೆ ಭೇಟಿ ನೀಡುವವರ ಪ್ರದರ್ಶನಕ್ಕೆ ಇಡುವ ಚಿಂತನೆಯೂ ನಡೆದಿದೆ.
- ಆರ್.ಶೇಜೇಶ್ವರ್, ಸಹಾಯಕ ನಿರ್ದೇಶಕರು, ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ, ಮೈಸೂರು