ಆ್ಯಪ್ನಗರ

ಶ್ರೀ ಗಣಪತಿ ದೇವಸ್ಥಾನದ ಸ್ಥಿರ ಮೂರ್ತಿಯ ಪ್ರತಿಷ್ಠಾಪನೆ ಇಂದು

ನಗರದ ದೈವಜ್ಞ ಕಲ್ಯಾಣ ಮಂದಿರದ ಆವರಣದಲ್ಲಿ ಶ್ರೀ ಗಣಪತಿ ದೇವಸ್ಥಾನದ ಸ್ಥಿರ ಮೂರ್ತಿಯ ಪ್ರತಿಷ್ಠಾಪನೆಯ 27ನೇ ವರ್ಷದ ವಧರ್‍ಂತಿ ಮಹೋತ್ಸವ ಫೆ.17ರಂದು ವಿಜೃಭಣೆಯಿಂದ ಜರುಗಲಿದೆ ಎಂದು ದೈವಜ್ಞ ಬ್ರಾಹ್ಮಣ ಸಮಾಜದ ಅಧ್ಯಕ್ಷ ಎಚ್‌.ಡಿ.ಚಂದ್ರಹಾಸ್‌ ಹೇಳಿದರು.

Vijaya Karnataka 17 Feb 2019, 5:00 am
ಶಿವಮೊಗ್ಗ: ನಗರದ ದೈವಜ್ಞ ಕಲ್ಯಾಣ ಮಂದಿರದ ಆವರಣದಲ್ಲಿ ಶ್ರೀ ಗಣಪತಿ ದೇವಸ್ಥಾನದ ಸ್ಥಿರ ಮೂರ್ತಿಯ ಪ್ರತಿಷ್ಠಾಪನೆಯ 27ನೇ ವರ್ಷದ ವಧರ್‍ಂತಿ ಮಹೋತ್ಸವ ಫೆ.17ರಂದು ವಿಜೃಭಣೆಯಿಂದ ಜರುಗಲಿದೆ ಎಂದು ದೈವಜ್ಞ ಬ್ರಾಹ್ಮಣ ಸಮಾಜದ ಅಧ್ಯಕ್ಷ ಎಚ್‌.ಡಿ.ಚಂದ್ರಹಾಸ್‌ ಹೇಳಿದರು.
Vijaya Karnataka Web today lord ganesh idol installment
ಶ್ರೀ ಗಣಪತಿ ದೇವಸ್ಥಾನದ ಸ್ಥಿರ ಮೂರ್ತಿಯ ಪ್ರತಿಷ್ಠಾಪನೆ ಇಂದು


ಸುದ್ದಿಗೋಷ್ಠಿಯಲ್ಲಿ ಶನಿವಾರ ಅವರು ಮಾತನಾಡಿ, ಕಳೆದ 26 ವರ್ಷಗಳಿಂದ ಶ್ರೀ ಗಣಪತಿ ದೇವಸ್ಥಾನದ ಸ್ಥಿರ ಮೂರ್ತಿಯನ್ನು ಪ್ರತಿಷ್ಠಾಪಿಸಿ ಅಂದಿನಿಂದ ನಿರಂತರವಾಗಿ ದೇವತಾ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದೆ. ವರ್ಧಂತಿ ಮಹೋತ್ಸವದ ವಿಶೇಷವಾಗಿ ಇದೇ ಮೊದಲಬಾರಿಗೆ ಪಲ್ಲಕ್ಕಿ ಉತ್ಸವ ಹಮ್ಮಿಕೊಳ್ಳಲಾಗಿದೆ. ಇದಕ್ಕಾಗಿ ದಾನಿಗಳ ಸಹಕಾರದಿಂದ ಪಲ್ಲಕ್ಕಿ ಹಾಗೂ 12 ಕೆಜಿ ತೂಕದ ಬೆಳ್ಳಿಯ ಶ್ರೀ ಗಣಪತಿಯ ಉತ್ಸವ ಮೂರ್ತಿ ಮಾಡಿಸಲಾಗಿದೆ ಎಂದರು.

ಅಂದು ಫೆ.17ಸಂಜೆ 6.30ಕ್ಕೆ ಉತ್ಸವ ಮೂರ್ತಿಯ ಪಲ್ಲಕ್ಕಿ ಮೆರವಣಿಗೆ ನಡೆಯಲಿದೆ. ಬೆಳಗ್ಗೆ 8.20ರಿಂದ ವಿವಿಧ ಪೂಜೆ ಆರಂಭವಾಗುತ್ತದೆ. ಮಹೋತ್ಸವ ಅಂಗವಾಗಿ ಬೆಳಗ್ಗೆ ಪೂಜೆ, ಪ್ರತಿಷ್ಠಾ ಹೋಮ, ಉತ್ಸವ ಮೂರ್ತಿ ಪ್ರತಿಷ್ಠಾಪನೆ, ಕಲಾನ್ಯಾಸ, ದ್ವಾದಸ ನಾರಿಕೇಳ ಗಣಹವನ, ನವಗ್ರಹ ಹವನ, ಕಲಾವೃದ್ಧಿ ಹವನ, ಶಾಂತಿ, ಪ್ರಾಯಶ್ಚಿತ ಬಲಿ ಪೂರ್ಣಾಹುತಿ, ಕುಂಭಾಭಿಷೇಕ, ಮಹಾ ಮಂಗಳಾರತಿ ಜರುಗಲಿವೆ. ಮಧ್ಯಾಹ್ನ 1ಕ್ಕೆ ಸಭಾ ಕಾರ್ಯಕ್ರಮ ಹಾಗೂ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ. ಸಂಜೆ 6.30ಕ್ಕೆ ಪಲ್ಲಕ್ಕಿ ಉತ್ಸವ ನಂತರ ವಿಷ್ಣು ಸಹಸ್ರನಾಮ, ಲಲಿತಾ ಸಹಸ್ರನಾಮ, ಭಜನೆ, ಅಷ್ಠಾವಧಾನ ಸೇವೆ, ಮಹಾಮಂಗಳಾರತಿ ಹಾಗೂ ಲಘು ಉಪಹಾರ ವ್ಯವಸ್ಥೆ ಏರ್ಪಡಿಸಲಾಗಿದೆ ಎಂದರು. ಗೋಷ್ಠಿಯಲ್ಲಿ ಎಸ್‌.ಡಿ.ಕಮಲಾಕ್ಷಿ, ಸಿ.ಪ್ರಕಾಶ್‌, ಕೆ.ರಾಘವೇಂದ್ರ, ಯು.ಗಣೇಶ್‌ ಶೇಟ್‌, ಆರ್‌.ಗಿರೀಶ್‌, ನಿರ್ಮಾಲ ಪ್ರಕಾಶ್‌, ಪ್ರತಿಮಾ ಡಿ.ಶೇಟ್‌ ಮತ್ತಿತರರು ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ