ಆ್ಯಪ್ನಗರ

ಭದ್ರಾವತಿಗೆ ರಾಜೀವ್‌ ಜ್ಯೋತಿ ಸದ್ಭಾವನಾ ಜಾಥಾ ಇಂದು

ತಮಿಳುನಾಡಿನ ಶ್ರೀ ಪೆರಂಬದೂರಿನಿಂದ ಹೊರಡುವ ರಾಜೀವ್‌ ಜ್ಯೋತಿ ಸದ್ಭಾವನಾ ಜಾಥಾ ಇದೇ ಪ್ರಥಮ ಬಾರಿಗೆ ಆ.10ರಂದು ಜಿಲ್ಲೆಗೆ ಆಗಮಿಸಲಿದೆ ಎಂದು ಕಾಂಗ್ರೆಸ್‌ ಕಾರ್ಮಿಕ ವಿಭಾಗದ ಜಿಲ್ಲಾಧ್ಯಕ್ಷ ಎಸ್‌.ಮುಜೀಬ್‌ ವುಲ್ಲಾ ಹೇಳಿದರು.

Vijaya Karnataka 10 Aug 2018, 5:00 am
ಶಿವಮೊಗ್ಗ: ತಮಿಳುನಾಡಿನ ಶ್ರೀ ಪೆರಂಬದೂರಿನಿಂದ ಹೊರಡುವ ರಾಜೀವ್‌ ಜ್ಯೋತಿ ಸದ್ಭಾವನಾ ಜಾಥಾ ಇದೇ ಪ್ರಥಮ ಬಾರಿಗೆ ಆ.10ರಂದು ಜಿಲ್ಲೆಗೆ ಆಗಮಿಸಲಿದೆ ಎಂದು ಕಾಂಗ್ರೆಸ್‌ ಕಾರ್ಮಿಕ ವಿಭಾಗದ ಜಿಲ್ಲಾಧ್ಯಕ್ಷ ಎಸ್‌.ಮುಜೀಬ್‌ ವುಲ್ಲಾ ಹೇಳಿದರು.
Vijaya Karnataka Web today rajeev sadbhavan jatha at bhadravathi
ಭದ್ರಾವತಿಗೆ ರಾಜೀವ್‌ ಜ್ಯೋತಿ ಸದ್ಭಾವನಾ ಜಾಥಾ ಇಂದು


ಸುದ್ದಿಗೋಷ್ಠಿಯಲ್ಲಿ ಗುರುವಾರ ಅವರು ಮಾತನಾಡಿ, 26ವರ್ಷಗಳಿಂದ ಕೆಪಿಸಿಸಿ ಕಾರ್ಮಿಕ ವಿಭಾಗವು ರಾಜೀವ್‌ ಜ್ಯೋತಿ ಸದ್ಭಾವನಾ ಜಾಥಾ ಆಯೋಜಿಸಿಕೊಂಡು ಬರುತ್ತಿದೆ. ಈ ಜಾಥಾ ಶ್ರೀ ಪೆರಂಬದೂರಿನಿಂದ ಹೊರಟು 9 ರಾಜ್ಯಗಳ ಮೂಲಕ ದೆಹಲಿಯಲ್ಲಿರುವ ರಾಜೀವ್‌ ಗಾಂಧಿಯವರ ವೀರಭೂಮಿ ತಲುಪಲಿದೆ. ಅಲ್ಲಿ ಕಾಂಗ್ರೆಸ್‌ ಮುಖಂಡರಾದ ಸೋನಿಯಾ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಜ್ಯೋತಿಯನ್ನು ಬರಮಾಡಿಕೊಳ್ಳುವರು ಎಂದರು.

ಜಾಥಾ ಇದೇ ಪ್ರಥಮ ಬಾರಿಗೆ ಜಿಲ್ಲೆಯ ಭದ್ರಾವತಿ ನಗರಕ್ಕೆ ಆ.10ರಂದು ಸಂಜೆ 8ಕ್ಕೆ ಆಗಮಿಸಲಿದ್ದು, ಶಾಸಕ ಬಿ.ಕೆ.ಸಂಗಮೇಶ್ವರ್‌ ನೇತೃತ್ವದಲ್ಲಿ ಜಾಥಾಕ್ಕೆ ಸ್ವಾಗತ ನೀಡಲಾಗುವುದು. ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ತೀ.ನಾ.ಶ್ರೀನಿವಾಸ್‌, ವಿಧಾನಪರಿಷತ್‌ ಸದಸ್ಯ ಆರ್‌. ಪ್ರಸನ್ನಕುಮಾರ್‌, ಪ್ರಮುಖರಾದ ಕೆ.ಬಿ. ಪ್ರಸನ್ನಕುಮಾರ್‌, ಮಂಜುನಾಥ್‌ ಭಂಡಾರಿ, ಸೂಡಾ ಮಾಜಿ ಅಧ್ಯಕ್ಷರಾದ ಎನ್‌.ರಮೇಶ್‌, ಇಸ್ಮಾಯಿಲ್‌ಖಾನ್‌, ಕಾಡ ಮಾಜಿ ಅಧ್ಯಕ್ಷ ಎಚ್‌.ಎಸ್‌.ಸುಂದರೇಶ್‌ ಸೇರಿದಂತೆ ಪಕ್ಷ ದ ಪ್ರಮುಖರು ಹಾಜರಿರುವರು ಎಂದರು. ಗೋಷ್ಠಿಯಲ್ಲಿ ಕಾಂಗ್ರೆಸ್‌ ಕಾರ್ಮಿಕ ವಿಭಾಗದ ಮಂಜುನಾಥ್‌, ಫೈರೋಜ್‌, ಸೈಮನ್‌, ಮೋಹನ್‌ರಾಜ್‌, ನೂರುಲ್ಲಾ, ಶಮೀಮ್‌ ಬಾನು ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ