ಆ್ಯಪ್ನಗರ

ಭದ್ರಾವತಿಯಲ್ಲಿ ಅಮೀತ್‌ ಶಾ ರೋಡ್‌ ಶೋ ನಾಳೆ

ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಮೋದಿ ಕೈ ಬಲಪಡಿಸುವ ಸಲುವಾಗಿ, ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಗೆಲುವಿಗಾಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರಿಂದ ಏ. 20ರಂದು ನಗರದಲ್ಲಿ ಭಾರಿ ರೋಡ್‌ ಶೋ ಏರ್ಪಡಿಸಲಾಗಿದೆ.

Vijaya Karnataka 19 Apr 2019, 5:00 am
ಭದ್ರಾವತಿ : ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಮೋದಿ ಕೈ ಬಲಪಡಿಸುವ ಸಲುವಾಗಿ, ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಗೆಲುವಿಗಾಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರಿಂದ ಏ. 20ರಂದು ನಗರದಲ್ಲಿ ಭಾರಿ ರೋಡ್‌ ಶೋ ಏರ್ಪಡಿಸಲಾಗಿದೆ.
Vijaya Karnataka Web tomorrow amithshaw road show at bhadravathi
ಭದ್ರಾವತಿಯಲ್ಲಿ ಅಮೀತ್‌ ಶಾ ರೋಡ್‌ ಶೋ ನಾಳೆ


ಈ ಕುರಿತು ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಪಕ್ಷ ದ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಶಿವಮೊಗ್ಗ ಮಹಾನಗರ ಪಾಲಿಕೆ ಉಪ ಮೇಯರ್‌ ಚನ್ನಬಸಪ್ಪ, ದೇಶಕ್ಕಾಗಿ ಮೋದಿ, ಮೋದಿಗಾಗಿ ನಾವು ಘೋಷಣೆಯಡಿ ಪಕ್ಷ ದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ದೇಶಾದ್ಯಂತ ಪಕ್ಷ ವನ್ನು ಬಲಪಡಿಸಿದ್ದಾರೆ. ಶಿವಮೊಗ್ಗ ಲೋಕಸಭೆ ಬಿಜೆಪಿ ಅಭ್ಯರ್ಥಿ ಗೆಲುವಿಗಾಗಿ ಹಿಂದುತ್ವ ಮತ್ತು ಸಂಸ್ಕೃತಿ ಪ್ರಜ್ವಲಿಸುವಂತೆ ಮಾಡಲು ನಗರಕ್ಕೆ ಆಗಮಿಸಿ ರೋಡ್‌ ಶೋ, ವಿಜಯ ಸಂಕಲ್ಪ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.

ಏ.20ರಂದು ಬೆಳಗ್ಗೆ 10ಕ್ಕೆ ಹಳೇನಗರದ ರಂಗಪ್ಪ ವೃತ್ತದಿಂದ ಮುಖ್ಯ ಬಸ್‌ ನಿಲ್ದಾಣ ಬಳಿಯ ಅಂಬೇಡ್ಕರ್‌ ವೃತ್ತದ ವರೆಗೆ ರೋಡ್‌ ಶೋ ನಡೆಯಲಿದೆ. ಕ್ಷೇತ್ರದ 242 ಭೂತ್‌ ಮಟ್ಟದಿಂದ ಸುಮಾರು 25 ಸಾವಿರಕ್ಕೂ ಅಧಿಕ ಕಾರ್ಯಕರ್ತರು, ಅಭಿಮಾನಿಗಳ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ಅಭ್ಯರ್ಥಿ ಬಿ.ವೈ.ರಾಘವೇಂದ್ರ ಮುಂತಾದವರು ಪಾಲ್ಗೊಳ್ಳಲಿದ್ದಾರೆ. ಈ ಚುನಾವಣೆಯಲ್ಲಿ ಭದ್ರಾವತಿ ಕ್ಷೇತ್ರದಿಂದ ಸುಮಾರು 80 ಸಾವಿರಕ್ಕೂ ಅಧಿಕ ಮತ ಪಡೆಯುವ ವಿಶ್ವಾಸವಿದೆ ಎಂದರು. ಬಿಜೆಪಿ ನಗರಾಧ್ಯಕ್ಷ ಜಿ.ಆನಂದಕುಮಾರ್‌, ಮುಖಂಡರಾದ ವಿ.ಕದಿರೇಶ್‌, ಮಂಜಪ್ಪ, ಪ್ರಭಾಕರ, ಕಾ.ರಾ.ನಾಗರಾಜ್‌, ಧರ್ಮಪ್ರಸಾದ್‌, ಚನ್ನೇಶ್‌ ಮುಂತಾದವರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ