ಆ್ಯಪ್ನಗರ

ಸಂಸ್ಕೃತ ಬೃಹತ್‌ ಸಮಾವೇಶ ನಾಳೆ

ನಗರದ ಶುಭಮಂಗಳ ಸಮುದಾಯ ಭವನದ ಆವರಣದಲ್ಲಿಜ.17ರಂದು ಬೆಳಗ್ಗೆ 10ಕ್ಕೆ ಕರ್ನಾಟಕ ದಕ್ಷಿಣ ಪ್ರಾಂತದ 5000 ಮಕ್ಕಳನ್ನೊಳಗೊಂಡ ಸಂಸ್ಕೃತ ಬಾಲ ಸಂಭ್ರಮ ಸಂಸ್ಕೃತ ಬೃಹತ್‌ ಸಮಾವೇಶ ನಡೆಯಲಿದೆ.

Vijaya Karnataka 16 Jan 2020, 5:00 am
ಶಿವಮೊಗ್ಗ: ನಗರದ ಶುಭಮಂಗಳ ಸಮುದಾಯ ಭವನದ ಆವರಣದಲ್ಲಿಜ.17ರಂದು ಬೆಳಗ್ಗೆ 10ಕ್ಕೆ ಕರ್ನಾಟಕ ದಕ್ಷಿಣ ಪ್ರಾಂತದ 5000 ಮಕ್ಕಳನ್ನೊಳಗೊಂಡ ಸಂಸ್ಕೃತ ಬಾಲ ಸಂಭ್ರಮ ಸಂಸ್ಕೃತ ಬೃಹತ್‌ ಸಮಾವೇಶ ನಡೆಯಲಿದೆ.
Vijaya Karnataka Web tomorrow sanskrit convention
ಸಂಸ್ಕೃತ ಬೃಹತ್‌ ಸಮಾವೇಶ ನಾಳೆ


ಶ್ರೀಗಂಧ, ವಾಸವಿ ಸಂಸ್ಕೃತ ಅಧ್ಯಯನ ಕೇಂದ್ರ, ಸಂಸ್ಕೃತ ಭಾರತಿ, ತರುಣೋದಯ ಸಂಸ್ಕೃತ ಸೇವಾ ಸಂಸ್ಥೆಗಳ ಸಹಯೋಗದಲ್ಲಿಈ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀಗಂಧ ಸಂಸ್ಥೆ ಸಂಚಾಲಕ ಬಾ.ರ.ಮಧುಸೂದನ್‌ ಹೇಳಿದರು.

ಶ್ರೀಗಂಧ ಸಂಸ್ಥೆಯು 25 ವರ್ಷ ಪೂರೈಸಿರುವ ಸಂಭ್ರಮದಲ್ಲಿದೆ. ಬೆಳ್ಳಿ ಹಬ್ಬದ ಸಂಭ್ರಮದ ಪ್ರಯುಕ್ತವಾಗಿ ಈ ಬೃಹತ್‌ ಸಮ್ಮೇಳನ ಹಮ್ಮಿಕೊಂಡಿದ್ದು, ಈಗಾಗಲೇ ಈ ಕಾರ್ಯಕ್ರಮಕ್ಕೆ ತಯಾರಿ ನಡೆಯುತ್ತಿದೆ ಎಂದರು.

ಹರಿಹರದ ಪಂಚಮಸಾಲಿ ಜಗದ್ಗುರು ಪೀಠಾಧೀಶರಾದ ಶ್ವಾಸಗುರು ಶ್ರೀ ವಚನಾನಂದ ಮಹಾಸ್ವಾಮೀಜಿ ಅವರು ಆಗಮಿಸುತ್ತಿದ್ದು, ನವದೆಹಲಿಯ ಸಂಸ್ಕೃತ ಭಾರತಿ ವಿಭಾಗದ ರಾಷ್ಟ್ರೀಯ ಸಂಘಟನಾ ಮಂತ್ರಿ ಶ್ರೀ ದಿನೇಶ್‌ ಕಾಮತ್‌ದಿಕ್ಸೂಚಿ ಭಾಷಣ ಮಾಡುವರು. ಶ್ರೀಗಂಧ ಸಂಸ್ಥೆಯ ಅಧ್ಯಕ್ಷರಾದ ಕೆ.ಎಸ್‌. ಈಶ್ವರಪ್ಪ ಅಧ್ಯಕ್ಷತೆ ವಹಿಸುವರು ಎಂದರು.

ಗೋಷ್ಠಿಯಲ್ಲಿಕೇಂದ್ರದ ಸಂಚಾಲಕ ಎಸ್‌. ಕೆ. ಶೇಷಾಚಲ, ಅ.ನಾ.ವಿಜೇಂದ್ರರಾವ್‌, ಚೇತನ್‌, ಪ್ರಕಾಶ್‌, ಸಹನಾ ಚೇತನ್‌ ಮತ್ತಿತರರು ಇದ್ದರು.


ಸಂವಾದವು ಶುಭಮಂಗಳ ಸಮುದಾಯ ಭವನದ ಒಳಾಂಗಣದಲ್ಲಿನೆರವೇರಲಿದೆ. ಸಂಸ್ಕೃತ ಭಾಷಾ ಅಭಿಮಾನಿಗಳು, ಸಂಸ್ಕೃತಾಸಕ್ತರು ಹಾಗೂ ಸಾರ್ವಜನಿಕರೆಲ್ಲರಿಗೂ ಉಚಿತ ಪ್ರವೇಶವಿದೆ.

-ಬಾ.ರ.ಮಧುಸೂದನ್‌, ಶ್ರೀಗಂಧ ಸಂಸ್ಥೆ ಸಂಚಾಲಕ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ