ಆ್ಯಪ್ನಗರ

25ರಿಂದ ಪ್ರವಾಸ, ಸಮಸ್ಯೆ ಪರಿಹಾರಕ್ಕೆ ಆದ್ಯತೆ

ಅ.25ರಿಂದ ಸೊರಬ ವಿಧಾನಸಭಾ ಕ್ಷೇತ್ರದ ಎಲ್ಲಹೋಬಳಿಗಳಲ್ಲಿಪ್ರವಾಸ ಕೈಗೊಂಡು ಜನತೆ ಸಮಸ್ಯೆ ಅರಿತು, ಪರಿಹಾರಕ್ಕಾಗಿ ಸರಕಾರಕ್ಕೆ ಒತ್ತಾಯಿಸಲಾಗುವುದು ಎಂದು ಮಾಜಿ ಶಾಸಕ ಮಧುಬಂಗಾರಪ್ಪ ಹೇಳಿದರು.

Vijaya Karnataka 20 Oct 2019, 5:00 am
ಸೊರಬ: ಅ.25ರಿಂದ ಸೊರಬ ವಿಧಾನಸಭಾ ಕ್ಷೇತ್ರದ ಎಲ್ಲಹೋಬಳಿಗಳಲ್ಲಿಪ್ರವಾಸ ಕೈಗೊಂಡು ಜನತೆ ಸಮಸ್ಯೆ ಅರಿತು, ಪರಿಹಾರಕ್ಕಾಗಿ ಸರಕಾರಕ್ಕೆ ಒತ್ತಾಯಿಸಲಾಗುವುದು ಎಂದು ಮಾಜಿ ಶಾಸಕ ಮಧುಬಂಗಾರಪ್ಪ ಹೇಳಿದರು.
Vijaya Karnataka Web 18SRBP3_46


ಶುಕ್ರವಾರ ತಾಲೂಕಲ್ಲಿಅನಾರೋಗ್ಯಕ್ಕೆ ಒಳಗಾದ ವಿವಿಧ ಗ್ರಾಮದ ಮುಖಂಡರ ಮನೆ, ಕಬ್ಬೂರಲ್ಲಿಮುಖಂಡ ಪಕ್ಕೀರಪ್ಪ ಅವರ ಮನೆ ಮತ್ತು ಇತ್ತೀಚೆಗೆ ಜೋಳದ ಗುಡ್ಡೆ, ಉದ್ರಿ ಗ್ರಾಮದಲ್ಲಿಮಕ್ಕಳು ಈಜಾಡಲು ಹೋಗಿ ಮೃತಪಟ್ಟ ಕುಟುಂಬಗಳ ಮನೆಗೆ ಭೇಟಿ ನೀಡಿ ಸಾಂತ್ವಾನ ಹೇಳಿದರು. ಪಟ್ಟಣದ ಹೊಸಪೇಟೆ ಬಡಾವಣೆಯ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ಕೆ.ಮಂಜುನಾಥ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ ಅವರು ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದರು.

ಕಳೆದ ವರ್ಷದಿಂದ ತಾಲೂಕಲ್ಲಿಅಭಿವೃದ್ಧಿ ಕೆಲಸಗಳು ಕುಂಠಿತಗೊಂಡಿವೆ. ತಾವು ಶಾಸಕರಾಗಿದ್ದ ಅವಧಿಯಲ್ಲಿಬಗರ್‌ಹುಕುಂ ಜಮೀನು ಮಂಜೂರು, ಗಂಗಾ ಕಲ್ಯಾಣ, ಆಶ್ರಯ ಮನೆ ನಿರ್ಮಾಣ ಹಾಗೂ ನಿವೇಶನಗಳಿಗೆ ಹಕ್ಕು ಪತ್ರ ಸೇರಿದಂತೆ ಹಲವಾರು ಕಾಮಗಾರಿ ಮಾಡಲಾಗಿತ್ತು. ಬಿಜೆಪಿ ಸರಕಾರ ಬಂದ ಮೇಲೆ ರೈತರಿಗೆ ನೀಡಿದ ಜಮೀನು ಹಾಗೂ ನಿವೇಶನಕ್ಕೆ ನೀಡಿದ ಹಕ್ಕುಪತ್ರ ವಜಾಕ್ಕೆ ಆದೇಶ ನೀಡಿರುವುದು ರೈತರಿಗೆ ಮಾಡಿದ ದ್ರೋಹ ಎಂದು ಟೀಕಿಸಿದರು.

ಪಟ್ಟಣದ ಸರ್ವೆ ನಂ 113ರಲ್ಲಿಸಾವಿರಾರು ಕುಟುಂಬಗಳು ಮನೆ ಕಟ್ಟಿಕೊಂಡು ವಾಸವಾಗಿವೆ. ಪ.ಪಂ.ನಿಂದ ಮೂಲ ಸೌಕರ್ಯ ಕಲ್ಪಿಸಿ ನಮ್ಮ ಅವಧಿಯಲ್ಲಿ94ಸಿ ಅಡಿ ನಿವೇಶನ ಹಕ್ಕುಪತ್ರ ನೀಡಲಾಗಿದೆ ಎಂದ ಅವರು, ಜನರ ಸಮಸ್ಯೆ ಅರಿತು ಆಡಳಿತಕ್ಕೆ ಚುರುಕು ಮುಟ್ಟಿಸಲು ಸದಾ ಸಿದ್ಧ್ದರಿದ್ದು. ಮತದಾರರು, ಅಭಿಮಾನಿಗಳು, ಮುಖಂಡರು ಧೃತಿಗೆಡಬಾರದು ಎಂದರು.

ಜೆಡಿಎಸ್‌ ಸೊರಬ ಬ್ಲಾಕ್‌ ಅಧಕ್ಷ ಎಚ್‌.ಗಣಪತಿ, ವಕ್ತಾರ ಎಂ.ಡಿ.ಶೇಖರ್‌, ಎಪಿಎಂಸಿ ಅಧ್ಯಕ್ಷ ಕೆ.ಅಜ್ಜಪ್ಪ, ಸದಸ್ಯ ಪ್ರಕಾಶ್‌, ತಾ.ಪಂ. ಸದಸ್ಯ ನಾಗರಾಜ, ಕಾಂಗ್ರೆಸ್‌ನ ಜಿ.ಕೆರಿಯಪ್ಪ, ಕಲ್ಲಪ್ಪ, ಕೃಷ್ಣಪ್ಪ, ಬಸವರಾಜ, ವೀರಭದ್ರಪ್ಪ ಇತರರಿದ್ದರು.

-------
ಸರಕಾರದಿಂದ ಹಕ್ಕುಪತ್ರ ಪಡೆದ ಫಲಾನುಭವಿಗಳ ಹೆಸರಿಗೆ ಪ.ಪಂನಲ್ಲಿಖಾತೆ ಮಾಡಿಕೊಡಬೇಕು. ಅಲ್ಲದೇ ಈಗಾಗಲೇ ಬಗರ್‌ಹುಕುಂ ಸಾಗುವಳಿದಾರರಿಗೆ ಮಂಜೂರಾದ ಭೂಮಿಯ ಹಕ್ಕುಪತ್ರಗಳನ್ನು ಇಲ್ಲದ ನೆಪ ಒಡ್ಡಿ ಸರಕಾರ ವಜಾಗೊಳಿಸಲು ಮುಂದಾಗಬಾರದು.
-ಮಧುಬಂಗಾರಪ್ಪ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ