ಆ್ಯಪ್ನಗರ

ರಾಜ್ಯದಲ್ಲಿರುವುದು ದ್ರೋಹಿ ಸರಕಾರ: ಈಶ್ವರಪ್ಪ

ರಾಜ್ಯದಲ್ಲಿರುವುದು ದೋಸ್ತಿಗಳ ಸರಕಾರ ಅಲ್ಲ, ದ್ರೋಹಿಗಳ ಸರಕಾರ. ಯಾವುದೇ ಕ್ಷಣದಲ್ಲಾದರೂ ಸರಕಾರ ಬೀಳುವ ಸಾಧ್ಯತೆ ಇದ್ದು, ಶೀಘ್ರದಲ್ಲೇ ಮಧ್ಯಂತರ ಚುನಾವಣೆ ನಡೆಯಲಿದೆ ಎಂದು ಶಾಸಕ ಕೆ.ಎಸ್‌.ಈಶ್ವರಪ್ಪ ಭವಿಷ್ಯ ನುಡಿದರು.

Vijaya Karnataka 22 Jun 2019, 5:00 am
ಶಿವಮೊಗ್ಗ : ರಾಜ್ಯದಲ್ಲಿರುವುದು ದೋಸ್ತಿಗಳ ಸರಕಾರ ಅಲ್ಲ, ದ್ರೋಹಿಗಳ ಸರಕಾರ. ಯಾವುದೇ ಕ್ಷಣದಲ್ಲಾದರೂ ಸರಕಾರ ಬೀಳುವ ಸಾಧ್ಯತೆ ಇದ್ದು, ಶೀಘ್ರದಲ್ಲೇ ಮಧ್ಯಂತರ ಚುನಾವಣೆ ನಡೆಯಲಿದೆ ಎಂದು ಶಾಸಕ ಕೆ.ಎಸ್‌.ಈಶ್ವರಪ್ಪ ಭವಿಷ್ಯ ನುಡಿದರು.
Vijaya Karnataka Web KS Eshwarappa-new.1


ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದ ಅವರು, ಕಾಂಗ್ರೆಸ್‌, ಜೆಡಿಎಸ್‌ ಸೇರಿಕೊಂಡು ಸರಕಾರ ರಚನೆ ಮಾಡಿದಾಗಿನಿಂದಲೂ ಪಕ್ಷದೊಳಗೆ ಒಳಜಗಳ ಶುರುವಾಗಿತ್ತು. ಅದು ಈಗ ಭುಗಿಲೆದ್ದಿದೆ. ಸರಕಾರದ ಕುರಿತು ಮಾಜಿ ಪ್ರಧಾನಿ ದೇವೇಗೌಡರು ನೀಡಿರುವ ಹೇಳಿಕೆ ಮೈತ್ರಿ ಸರಕಾರ ಬೀಳುವ ಮುನ್ಸೂಚನೆ ಇದೆ ಎಂದು ಸ್ಪಷ್ಟಪಡಿಸಿದೆ ಎಂದರು.

ಎಚ್‌.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆದಾಗಿನಿಂದಲೂ ಕಣ್ಣೀರು ಹಾಕುತ್ತಿದ್ದಾರೆ. ಕಾಂಗ್ರೆಸ್‌ ನಾಯಕರು ತಮ್ಮ ಶಾಸಕರಿಗೆ ಮಂತ್ರಿಗಿರಿ ಕೊಡಬೇಕು. ಮಂಡಳಿಗೆ ಅಧ್ಯಕ್ಷರನ್ನಾಗಿ ಮಾಡಬೇಕು ಎಂದು ನಿಬಂಧನೆಗಳ ಮೇಲೆ ನಿಬಂಧನೆ ಹೇರುತ್ತಿದ್ದಾರೆ. ಇವುಗಳಿಂದ ಸುಧಾರಿಸಿಕೊಳ್ಳುವುದರಲ್ಲೇ ಮುಖ್ಯಮಂತ್ರಿಗಳು ಕಾಲ ಕಳೆಯುತ್ತಿದ್ದಾರೆ. ಇನ್ನೊಂದೆಡೆ ಲೋಕಸಭೆ ಚುನಾವಣೆಯಲ್ಲಿ ಸೋಲಿನಿಂದ ಪರಸ್ಪರರೇ ಬೀದಿಯಲ್ಲಿ ನಿಂತು ಬೈದಾಡುಕೊಳ್ಳುತ್ತಿದ್ದಾರೆ. ಜೆಡಿಎಸ್‌ ಶಾಸಕ ಎಚ್‌.ವಿಶ್ವನಾಥ್‌ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಅಂಗೀಕರಿಸಬೇಕೆಂದು ಹೇಳುತ್ತಿದ್ದಾರೆ. ಎಷ್ಟು ದಿನ ಸರಕಾರ ಇರತ್ತೋ ಗೊತ್ತಿಲ್ಲ. ಎಷ್ಟಾಗತ್ತೋ ಅಷ್ಟು ಲೂಟಿ ಮಾಡೋಣ ಎಂದು ಇಡೀ ರಾಜ್ಯವನ್ನು ಕೊಳ್ಳೆಹೊಡೆಯುತ್ತಿದ್ದಾರೆ ಎಂದು ಖಾರವಾಗಿ ಹೇಳಿದದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ