ಆ್ಯಪ್ನಗರ

ಸಹಕಾರ ಸಂಘದಲ್ಲಿಪಾರದರ್ಶಕತೆ ಅಗತ್ಯ

ಸಹಕಾರಿ ಸಂಘ ಸಂಸ್ಥೆಗಳಿಗೆ ಸೇವಾ ಮನೋಭಾವದ ಜತೆಗೆ ಪಾರದರ್ಶಕತೆ ತುಂಬಾ ಅಗತ್ಯ. ಸಹಕಾರಿ ಸಂಸ್ಥೆ ವ್ಯಕ್ತಿ ಆಧಾರಿತವಾಗುವುದು ಉತ್ತಮ ಬೆಳವಣಿಗೆಯಲ್ಲಎಂದು ಕರ್ನಾಟಕ ಸಂಯುಕ್ತ ಸೌಹಾರ್ದ ಸಹಕಾರಿ ನಿರ್ದೇಶಕ ಎ.ಆರ್‌. ಪ್ರಸನ್ನಕುಮಾರ್‌ ಹೇಳಿದರು.

Vijaya Karnataka 26 Sep 2019, 5:00 am
ತೀರ್ಥಹಳ್ಳಿ: ಸಹಕಾರಿ ಸಂಘ ಸಂಸ್ಥೆಗಳಿಗೆ ಸೇವಾ ಮನೋಭಾವದ ಜತೆಗೆ ಪಾರದರ್ಶಕತೆ ತುಂಬಾ ಅಗತ್ಯ. ಸಹಕಾರಿ ಸಂಸ್ಥೆ ವ್ಯಕ್ತಿ ಆಧಾರಿತವಾಗುವುದು ಉತ್ತಮ ಬೆಳವಣಿಗೆಯಲ್ಲಎಂದು ಕರ್ನಾಟಕ ಸಂಯುಕ್ತ ಸೌಹಾರ್ದ ಸಹಕಾರಿ ನಿರ್ದೇಶಕ ಎ.ಆರ್‌. ಪ್ರಸನ್ನಕುಮಾರ್‌ ಹೇಳಿದರು.
Vijaya Karnataka Web 24TTH1_46


ಪಟ್ಟಣದ ಶ್ರೀರಾಮಮಂದಿರದಲ್ಲಿ ಭಾನುವಾರ ನಡೆದ ವರ್ತಕರ ಸೌಹಾರ್ದ ಸಹಕಾರ ಸಂಘದ ಸರ್ವ ಸದಸ್ಯರ ಸಭೆ ಉದ್ದೇಶಿಸಿ ಅವರು ಮಾತನಾಡಿದರು.

ಆರ್ಥಿಕ ನೆರವು ನೀಡುವ ಮೂಲಕ ಸಹಕಾರ ತತ್ವಗಳನ್ನು ವಿಸ್ತರಿಸುವ ಉದ್ದೇಶಕ್ಕೆ ಬೆಂಬಲ ಸಿಗಬೇಕು. ವರ್ತಕರ ಸೌಹಾರ್ದ ಸಹಕಾರ ಸಂಘ ಕೇವಲ 6 ತಿಂಗಳಲ್ಲಿ1.83 ಕೋಟಿ ರೂ. ದುಡಿಯುವ ಬಂಡವಾಳ ಹೊಂದಿರುವುದು ಉತ್ತಮ ಸಾಧನೆ ಎಂದು ಹೇಳಿದರು.

ಸಹ್ಯಾದ್ರಿ ವಿವಿಧೋದ್ದೇಶ ಅಡಕೆ ಬೆಳೆಗಾರರ ಸಹಕಾರ ಸಂಘದ ಅಧ್ಯಕ್ಷ ಎಚ್‌.ಎನ್‌. ವಿಜಯದೇವ್‌ ಮಾತನಾಡಿ, ಸಹಕಾರ ಸಂಸ್ಥೆಗಳನ್ನು ನಿರ್ವಹಣೆ ಮಾಡುವುದು ಸುಲಭವಾಗಿಲ್ಲ. ಸಹಕಾರ ನಿಯಮಗಳಡಿ ಕಾರ‍್ಯನಿರ್ವಹಿಸಿ ಸದಸ್ಯರ ಮೆಚ್ಚುಗೆ ಪಡೆಯುವುದು ಕಷ್ಟದ ಕೆಲಸ. ಸಹಕಾರಿ ಸದಸ್ಯರ ಸಂಪೂರ್ಣ ಬೆಂಬಲದಿಂದ ಸಂಸ್ಥೆ ಏಳಿಗೆ ಸಾಧ್ಯ ಎಂದರು.

ವರ್ತಕರ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಡಾನ್‌ ರಾಮಣ್ಣ ಅಧ್ಯಕ್ಷತೆ ವಹಿಸಿದ್ದರು. ಸಂಘದ ಉಪಾಧ್ಯಕ್ಷೆ ಸಹನಾಭಟ್‌, ನಿರ್ದೇಶಕರಾದ ಸೊಪ್ಪುಗುಡ್ಡೆ ರಾಘವೇಂದ್ರ, ಚೈತನ್ಯಜವಳಿ, ಯುವರಾಜ್‌, ಕೋಣಂದೂರು ಅಶೋಕ್‌,ರಾಘವೇಂದ್ರಮಲ್ಯ, ನಾಗರಾಜಗೌಡ, ಬಳಗಟ್ಟೆ ಗಿರೀಶ್‌, ರಾಘವೇಂದ್ರ ಶೆಣೈ, ಮಹಮ್ಮದ್‌ ಶಫಿ, ಮೋಹಿನಿ ಆಚಾರ‍್ಯ, ಸಿಇಒ ರೂಪರಾವ್‌ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ