ಆ್ಯಪ್ನಗರ

ಎರಡು ಮನೆಯಲ್ಲಿ ನಗದು, ಆಭರಣ ಕಳವು

ತಾಲೂಕಿನ ಸೂರನಗದ್ದೆಯಲ್ಲಿ ಗುರುವಾರ ರಾತ್ರಿ ಎರಡು ಮನೆಗಳಲ್ಲಿ ನಗದು ಸೇರಿದಂತೆ ಚಿನ್ನ, ಬೆಳ್ಳಿ ಆಭರಣ ಕಳವು ಮಾಡಿದ ಘಟನೆ ನಡೆದಿದೆ.

Vijaya Karnataka 2 Jun 2019, 5:00 am
ಸಾಗರ : ತಾಲೂಕಿನ ಸೂರನಗದ್ದೆಯಲ್ಲಿ ಗುರುವಾರ ರಾತ್ರಿ ಎರಡು ಮನೆಗಳಲ್ಲಿ ನಗದು ಸೇರಿದಂತೆ ಚಿನ್ನ, ಬೆಳ್ಳಿ ಆಭರಣ ಕಳವು ಮಾಡಿದ ಘಟನೆ ನಡೆದಿದೆ.
Vijaya Karnataka Web two home cash jewelery stolen
ಎರಡು ಮನೆಯಲ್ಲಿ ನಗದು, ಆಭರಣ ಕಳವು


ಸೂರನಗದ್ದೆಯ ಜೆ.ಪಿ.ನಗರದ ವಾಸಿ ಖಾಸಗಿ ಬಸ್‌ ನಿರ್ವಾಹಕ ಕೆ.ಎನ್‌.ನಾಗರಾಜ್‌ ಕುಟುಂಬ ಸಮೇತ ಧರ್ಮಸ್ಥಳಕ್ಕೆ ಹೋಗಿದ್ದರು. ಗುರುವಾರ ರಾತ್ರಿ ಮನೆಗೆ ಬಂದು ನೋಡಿದಾಗ ಮುಂಬಾಗಿಲು ಬೀಗ ಒಡೆದು, ಗಾಡ್ರೇಜ್‌ ಬೀರುವಿನಲ್ಲಿದ್ದ ನಗದು 50ಸಾವಿರ ರೂ. ಹಾಗೂ ಚಿನ್ನಾಭರಣ ಸೇರಿದಂತೆ ಒಟ್ಟು ಸುಮಾರು 1.60 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಿರುವುದು ಗೊತ್ತಾಗಿದೆ.

ಇದೇ ಗ್ರಾಮದ ದಿವಾಕರ್‌ ಅವರು ಮಕ್ಕಳಿಗೆ ಶಾಲೆ ರಜೆ ಇರುವುದರಿಂದ ಕುಟುಂಬ ಸಮೇತರಾಗಿ ಊರಿಗೆ ಹೋಗಿದ್ದರು. ಗುರುವಾರ ಮಧ್ಯಾಹ್ನ ಮನೆಗೆ ಬಂದು ನೋಡಿದಾಗ ಮನೆ ಮುಂಬಾಗಿಲಿನ ಬೀಗ ಒಡೆದು ಕಬ್ಬಿಣದ ಬೀರುವನ್ನು ಒಡೆದು 20ಸಾವಿರ ರೂ. ಮೌಲ್ಯದ 2 ಚಿನ್ನದ ಉಂಗುರ ಮತ್ತು 3ಸಾವಿರ ರೂ. ನಗದು ಕಳ್ಳತನವಾಗಿರುವುದು ಪತ್ತೆಯಾಗಿದೆ. ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರತ್ಯೇಕ ದೂರು ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ