ಆ್ಯಪ್ನಗರ

ರಾಜಿಯಾಗದ ಕಾರ್ನಾಡ್‌ ಬದುಕು

ಘನತೆಯಿಂದ ಬದುಕಿದ ಡಾ.ಗಿರೀಶ್‌ ಕಾರ್ನಾಡರು, ತಮ್ಮ ಸಾವು, ಶವಸಂಸ್ಕಾರದಲ್ಲಿ ಸಹ ಘನತೆ ಕಾಪಾಡಿಕೊಂಡಿದ್ದಾರೆ ಎಂದು ನಿವೃತ್ತ ಪ್ರಾಚಾರ‍್ಯ ಡಾ.ಜಿ.ಎಸ್‌.ಭಟ್‌ ಹೇಳಿದರು.

Vijaya Karnataka 13 Jun 2019, 5:00 am
ಸಾಗರ: ಘನತೆಯಿಂದ ಬದುಕಿದ ಡಾ.ಗಿರೀಶ್‌ ಕಾರ್ನಾಡರು, ತಮ್ಮ ಸಾವು, ಶವಸಂಸ್ಕಾರದಲ್ಲಿ ಸಹ ಘನತೆ ಕಾಪಾಡಿಕೊಂಡಿದ್ದಾರೆ ಎಂದು ನಿವೃತ್ತ ಪ್ರಾಚಾರ‍್ಯ ಡಾ.ಜಿ.ಎಸ್‌.ಭಟ್‌ ಹೇಳಿದರು.
Vijaya Karnataka Web uncompromising karnad life
ರಾಜಿಯಾಗದ ಕಾರ್ನಾಡ್‌ ಬದುಕು


ಇಲ್ಲಿನ ಸರಕಾರಿ ನೌಕರರ ಸಭಾಭವನದಲ್ಲಿ ಕಲಾಸಕ್ತರೆಲ್ಲ ಸೇರಿ ಮಂಗಳವಾರ ಏರ್ಪಡಿಸಿದ್ದ ಕನ್ನಡದ ಅಲೆಮಾರಿ ನಾಟಕಕಾರ ಗಿರೀಶ್‌ ಕಾರ್ನಾಡರಿಗೆ ರಂಗ ನಮನ ದಲ್ಲಿ ಅವರು ಮಾತನಾಡಿದರು.

ಹಳೆ ಕಥೆಗಳನ್ನು ಕಾರ್ನಾಡರು ಹೊಸ ಅರ್ಥದಲ್ಲಿ ಬಳಸಿಕೊಂಡು ನಾಟಕ ರಚಿಸಿದ್ದಾರೆ. ಕಾರ್ನಾಡರ ನಾಟಕ, ಆತ್ಮಕಥೆಯ ಅಧ್ಯಯನ ನಮ್ಮ ಜವಾಬ್ದಾರಿ ಎಂದರು.

ಲೇಖಕ ಡಾ.ಜಯಪ್ರಕಾಶ ಮಾವಿನಕುಳಿ ಮಾತನಾಡಿ, ಕಾರ್ನಾಡರು ಅತ್ಯುತ್ತಮ ನಾಟಕಕಾರರಾದರು. ಆಗುಹೋಗುಗಳಿಗೆ ಕಾರ್ನಾಡರು ಪ್ರತಿಕ್ರಿಯಿಸುತ್ತಿದ್ದ ಕ್ರಮ ನಮಗೆ ಆದರ್ಶವಾಗಬೇಕೆಂದರು.

ಬಿ.ಆರ್‌.ಜಯಂತ್‌ ಮಾತನಾಡಿ, ಗಿರೀಶ್‌ ಕಾರ್ನಾಡರು ತಮ್ಮ ಸಾವಿನಲ್ಲಿ ಆದರ್ಶ ಮೆರೆದಿದ್ದಾರೆ. ಸಾವಿನ ನಂತರ ತಮ್ಮನ್ನು ನಡೆಸಿಕೊಳ್ಳಬೇಕಾದ ರೀತಿಯನ್ನು ಅವರು ಸೂಚಿಸಿದ ರೀತಿ ಮಾದರಿಯಾಗಿದೆ. ರಾಜಿಯಾಗದ ಬದುಕು, ಹೋರಾಟ ಮತ್ತು ಧೈರ‍್ಯ ಕಾರ್ನಾಡರ ವಿಶೇಷತೆ ಎಂದರು. ಸಿರಿವಂತೆ ಚಂದ್ರಶೇಖರ, ವಿಜಯವಾಮನ, ಪರಮೇಶ್ವರ ದೂಗೂರು, ಜಿ.ಪರಮೇಶ್ವರಪ್ಪ ಇತರರು ಮಾತನಾಡಿದರು. ರಂಗನಟಿ ಅಂಬಿಕಾ ರಂಗಗೀತೆ ಹಾಡಿದರು. ಕುಗ್ವೆ ಶಿವಾನಂದ, ಡಾ.ಹಾ.ಉಮೇಶ, ಅ.ರಾ.ಶ್ರೀನಿವಾಸ್‌, ಮಂಜುನಾಥ ಜೇಡಿಕುಣಿ, ದೇವರಾಜ , ಸುಭಾಷ್‌ ಕೌತಳ್ಳಿ, ಹಸಲರ ರಾಮಣ್ಣ, ವಸಂತ ಕುಗ್ವೆ, ದಿನೇಶ್‌, ಲಕ್ಷ್ಮೀನಾರಾಯಣ, ವಿ.ಟಿ.ಸ್ವಾಮಿ ಇತರರು ಇದ್ದರು. ಎಚ್‌.ಬಿ.ರಾಘವೇಂದ್ರ ನಿರ್ವಹಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ