ಆ್ಯಪ್ನಗರ

ಮುಳುಬಾಗಿಲು ಒಕ್ಕೂಟ ಅಧ್ಯಕ್ಷೆ ರಾಜೀನಾಮೆಗೆ ಆಗ್ರಹ

ಕಡ್ಡಾಯ ನಿಯಮ ಉಲ್ಲಂಘಿಘಿಸಿ ಸಂಜೀವಿನಿ ಸ್ವಸಹಾಯ ಗುಂಪಿನ ಮುಳುಬಾಗಿಲು ಗ್ರಾಮಮಟ್ಟದ ಒಕ್ಕೂಟಕ್ಕೆ ಅಧ್ಯಕ್ಷೆಯಾಗಿ ನೇಮಕವಾಗಿರುವ ಗೀತಾಶೆಟ್ಟಿ ತಕ್ಷಣ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಜಿ.ಪಂ. ಸದಸ್ಯೆ ಭಾರತೀ ಪ್ರಭಾಕರ್‌, ಮುಳುಬಾಗಿಲು ಗ್ರಾ.ಪಂ. ಉಪಾಧ್ಯಕ್ಷೆ ಶೋಭಾ ಶ್ರೀಧರ್‌, ಸದಸ್ಯರಾದ ದಾಕ್ಷಾಯಣಿ ಪ್ರಭಾಕರ್‌, ಸುಧಾರಮೇಶ್‌, ಗ್ರಾ.ಪಂ.ಮಾಜಿ ಅಧ್ಯಕ್ಷೆ ಅಂಬಿಕಾ ವೆಂಕಟೇಶ್‌ ಲಿಖಿತ ಹೇಳಿಕೆಯಲ್ಲಿಆಗ್ರಹಿಸಿದ್ದಾರೆ.

Vijaya Karnataka 25 Sep 2019, 5:00 am
ತೀರ್ಥಹಳ್ಳಿ: ಕಡ್ಡಾಯ ನಿಯಮ ಉಲ್ಲಂಘಿಘಿಸಿ ಸಂಜೀವಿನಿ ಸ್ವಸಹಾಯ ಗುಂಪಿನ ಮುಳುಬಾಗಿಲು ಗ್ರಾಮಮಟ್ಟದ ಒಕ್ಕೂಟಕ್ಕೆ ಅಧ್ಯಕ್ಷೆಯಾಗಿ ನೇಮಕವಾಗಿರುವ ಗೀತಾಶೆಟ್ಟಿ ತಕ್ಷಣ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಜಿ.ಪಂ. ಸದಸ್ಯೆ ಭಾರತೀ ಪ್ರಭಾಕರ್‌, ಮುಳುಬಾಗಿಲು ಗ್ರಾ.ಪಂ. ಉಪಾಧ್ಯಕ್ಷೆ ಶೋಭಾ ಶ್ರೀಧರ್‌, ಸದಸ್ಯರಾದ ದಾಕ್ಷಾಯಣಿ ಪ್ರಭಾಕರ್‌, ಸುಧಾರಮೇಶ್‌, ಗ್ರಾ.ಪಂ.ಮಾಜಿ ಅಧ್ಯಕ್ಷೆ ಅಂಬಿಕಾ ವೆಂಕಟೇಶ್‌ ಲಿಖಿತ ಹೇಳಿಕೆಯಲ್ಲಿಆಗ್ರಹಿಸಿದ್ದಾರೆ.
Vijaya Karnataka Web union president calls for resignation
ಮುಳುಬಾಗಿಲು ಒಕ್ಕೂಟ ಅಧ್ಯಕ್ಷೆ ರಾಜೀನಾಮೆಗೆ ಆಗ್ರಹ


ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ, ಜೀವನೋಪಾಯ ಇಲಾಖೆ ಅನುಷ್ಠಾನಗೊಳಿಸುತ್ತಿರುವ ಸಂಜೀವಿನಿ ಸ್ವಹಾಯ ಗುಂಪು ಒಕ್ಕೂಟ ರಚನೆ ಕುರಿತಂತೆ ಸರಕಾರ ಅನೇಕ ನಿಬಂಧನೆಗಳನ್ನು ರೂಪಿಸಿದೆ. ಸೋಮವಾರ ಮುಳುಬಾಗಿಲು ಗ್ರಾ.ಪಂ. ಸಭಾಂಗಣದಲ್ಲಿಒಕ್ಕೂಟ ರಚನೆ ಸಂಬಂಧ ನಡೆದ ಆಯ್ಕೆ ಪ್ರಕ್ರಿಯೆ ಸಭೆಯಲ್ಲಿ ಗೀತಾಶೆಟ್ಟಿ ಅಧಿಕಾರಿಗಳೊಂದಿಗೆ ಅನುಚಿತವಾಗಿ ವರ್ತಿಸಿ ಕಾನೂನು ಬಾಹಿರವಾಗಿ ಒಕ್ಕೂಟದ ಅಧ್ಯಕ್ಷೆಯನ್ನಾಗಿ ನೇಮಿಸುವಂತೆ ಬಲವಂತ ಮಾಡಿರುವುದು ಖಂಡನೀಯ ಎಂದು ತಿಳಿಸಿದ್ದಾರೆ.

ಯಾವುದೇ ಹಂತದ ಚುನಾಯಿತ ಪ್ರತಿನಿಧಿಗಳು ಒಕ್ಕೂಟದ ಅಧ್ಯಕ್ಷರಾಗುವಂತಿಲ್ಲಎಂಬ ನಿಯಮ ಸ್ಪಷ್ಟವಾಗಿದೆ. ಚುನಾಯಿತ ಪ್ರತಿನಿಧಿಯನ್ನು ಅಧ್ಯಕ್ಷೆ ಹುದ್ದೆಗೆ ನೇಮಿಸಿದರೆ ಒಕ್ಕೂಟ ರಚನೆ ಅಸಿಂಧುವಾಗುತ್ತದೆ. ಒಕ್ಕೂಟಕ್ಕೆ ಸರಕಾರದಿಂದ ಸಹಾಯ ಸಿಗುವುದಿಲ್ಲ. ನಿಯಮಬಾಹಿರ ಒಕ್ಕೂಟ ರಚನೆಯಿಂದ ಮಹಿಳೆಯರಿಗೆ ಅನ್ಯಾಯವಾಗುತ್ತದೆ ಎಂದು ಸಂಬಂಧ ಪಟ್ಟ ಇಲಾಖೆ ಅಧಿಕಾರಿ ಸಭೆಗೆ ಮಾಹಿತಿ ನೀಡಿದರು. ಆದರೂ ಬಲವಂತವಾಗಿ ಅಧ್ಯಕ್ಷೆ ಹುದ್ದೆ ಪಡೆದಿದ್ದಾರೆ. ಒಕ್ಕೂಟದ ಅಧ್ಯಕ್ಷೆ ಹುದ್ದೆಯಿಂದ ಗೀತಾಶೆಟ್ಟಿ ಅವರನ್ನು ತಕ್ಷಣ ವಜಾಗೊಳಿಸಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ