ಆ್ಯಪ್ನಗರ

ಅನರ್ಹ ಆಶ್ರಯ ಫಲಾನುಭವಿ ಹಕ್ಕುಪತ್ರ ರದ್ದು

ಅನರ್ಹ ಫಲಾನುಭವಿಗಳು ಆಶ್ರಯ ನಿವೇಶನ ಪಡೆದಿದ್ದರೆ ಅದು ರದ್ದಾಗುವ ಸಾಧ್ಯತೆ ಇದೆ ಎಂದು ಶಾಸಕ ಹರತಾಳು ಹಾಲಪ್ಪ ಹೇಳಿದರು.

Vijaya Karnataka 8 Mar 2019, 5:00 am
ಹೊಸನಗರ: ಅನರ್ಹ ಫಲಾನುಭವಿಗಳು ಆಶ್ರಯ ನಿವೇಶನ ಪಡೆದಿದ್ದರೆ ಅದು ರದ್ದಾಗುವ ಸಾಧ್ಯತೆ ಇದೆ ಎಂದು ಶಾಸಕ ಹರತಾಳು ಹಾಲಪ್ಪ ಹೇಳಿದರು.
Vijaya Karnataka Web SMR-5HOSP2


ಪಟ್ಟಣ ಪಂಚಾಯಿತಿ ಸಮುದಾಯ ಭವನದಲ್ಲಿ ಮಂಗಳವಾರ ವಾಜಪೇಯಿ ನಗರ ನಿವೇಶನ ಯೋಜನೆಯಡಿ ಮುಳುಗುಡ್ಡೆ ಸರ್ವೆ ನಂ.40ರಲ್ಲಿ ಅಭಿವೃದ್ಧಿ ಪಡಿಸಿರುವ ನಿವೇಶನಗಳ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿ ಅವರು ಮಾತನಾಡಿದರು.

ಹಕ್ಕುಪತ್ರ ವಿತರಣೆಗೆ ಕೊಂಚ ವಿಳಂಬವಾಗಿದೆ. ಈ ಹಿಂದೆ ನಿವೇಶನ ಪಡೆದವರು, ಅರ್ಹತೆ ಹೊಂದಿಲ್ಲದವರಿಗೆ, ಇಲಾಖೆ ಮಾನದಂಡಗಳನ್ನು ಉಲ್ಲಂಘಿಸಿ ನಿವೇಶನ ಹಂಚಲಾದ ನಿದರ್ಶನಗಳು ಇವೆ. ಅಧಿಕಾರಿಗಳು ಒತ್ತಡದ ನಡುವೆ ಫಲಾನುಭವಿಗಳ ಆಯ್ಕೆ ಅಂತಿಮಗೊಳಿಸಿರುವ ಸಾಧ್ಯತೆ ಇದೆ. ಇಂತಹ ಅಕ್ರಮದಲ್ಲಿ ಜನಪ್ರತಿನಿಧಿಗಳಾದ ನಾವು ಪಾಲುದಾರರಾಗಲು ಇಚ್ಛಿಸುವುದಿಲ್ಲ ಎಂದು ಸ್ಪಷ್ಟ ಪಡಿಸಿದರು.

ತಾಲೂಕಿನ ನಾಗೋಡಿ ಸರ್ವೆ ನಂಬರ್‌ 297ರಲ್ಲಿ 94ಸಿ ಅಡಿ ಹಕ್ಕುಪತ್ರ ವಿತರಣೆಯಲ್ಲಿ ಅಕ್ರಮ ನಡೆದಿರುವ ದೂರಿನ ಹಿನ್ನೆಲೆಯಲ್ಲಿ ಉಪವಿಭಾಗಾಧಿಕಾರಿ ತನಿಖೆ ನಡೆಸುತ್ತಿದ್ದಾರೆ. ಇಲ್ಲಿಯೂ ಬೇರೆಡೆ ವಸತಿ ಅಥವಾ ನಿವೇಶನ ಹೊಂದಿದವರು ಹಕ್ಕುಪತ್ರ ಪಡೆದಿದ್ದರೆ, ಅದು ರದ್ದಾಗಲಿದೆ. ನೈಜ ಫಲಾನುಭವಿಗಳಿಗೆ ಹಕ್ಕುಪತ್ರ ದೊರೆಯಬೇಕು ಎಂಬುದು ನಮ್ಮ ಆಶಯ ಎಂದರು.

ಜಿ.ಪಂ. ಸದಸ್ಯ ಎಸ್‌.ಸುರೇಶ್‌, ಪಟ್ಟಣ ಪಂಚಾಯಿತಿ ಅಧ್ಯಕ್ಷ ಹಾಲಗದ್ದೆ ಉಮೇಶ್‌, ಉಪಾಧ್ಯಕ್ಷೆ ಸುಜಾತ ಡಿ. ಉಡುಪ, ಸದಸ್ಯರಾದ ಎಚ್‌.ಎನ್‌.ಶ್ರೀಪತಿರಾವ್‌, ಬಿ.ಕೃಷ್ಣವೇಣಿ, ತಾ.ಪಂ. ಸದಸ್ಯೆ ರುಕ್ಮಿಣಿರಾಜು, ಪ.ಪಂ. ಮುಖ್ಯಾಧಿಕಾರಿ ಟಿ.ಬಾಲಚಂದ್ರಪ್ಪ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ