ಶಿವಮೊಗ್ಗ : ಆರ್ಟಿಓ ಕಚೇರಿ ಅಧಿಕಾರಿಗೆ ಚಪ್ಪಲಿ ತೋರಿಸಿ ಜಾತಿ ನಿಂದನೆ ಮಾಡಿರುವ ಬಿಜೆಪಿ ಪಾಲಿಕೆ ಸದಸ್ಯ ವಿಶ್ವಾಸ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಗುರುವಾರ ಜಿಲ್ಲಾ ಸರಕಾರಿ ನೌಕರರ ಸಂಘದಿಂದ ಜಿಲ್ಲಾಧಿಕಾರಿ ಕೆ.ಎ.ದಯಾನಂದ್ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಘಟನೆ ನಡೆದು ಹಲವು ದಿನಗಳೇ ಕಳೆದರೂ ಆರೋಪಿಯನ್ನು ಇನ್ನು ಬಂಧಿಸಿಲ್ಲ. ಕರ್ತವ್ಯದಲ್ಲಿದ್ದ ಸರಕಾರಿ ಅಧಿಕಾರಿಗೆ ಚಪ್ಪಲಿ ತೋರಿಸಿದ್ದು, ಅಲ್ಲದೆ ಅಧಿಕಾರಿಗಳಿಗೆ ಜಾತಿ ನಿಂದನೆ ಮಾಡಿರುವ ವಿಶ್ವಾಸ್ನನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿದರು.
ಇದೇ ಸಂದರ್ಭದಲ್ಲಿ ಸರಕಾರಿ ನೌಕರರಿಗೆ ನೂತನ ಪಿಂಚಣಿ ಯೋಜನೆ ಕೈಬಿಟ್ಟು, ಹಳೆ ಪಿಂಚಣಿ ಯೋಜನೆಯನ್ನೆ ಜಾರಿಗೆ ತರಬೇಕು. ನೂತನ ಪಿಂಚಣಿ ಯೋಜನೆ ಜಾರಿಯಿಂದ ಹಲವು ಸರಕಾರಿ ನೌಕರರು ಮರಣ ಮತ್ತು ನಿವೃತ್ತಿ ಉಪದಾನ ಸೌಲಭ್ಯಗಳಿಂದ ದೂರ ಉಳಿಯುವಂತಾಗಿದೆ. ಹೀಗಾಗಿ ಈ ಯೋಜನೆಯನ್ನು ಕೈಬಿಟ್ಟಿ ಹಳೆ ಪಿಂಚನೆ ಯೋಜನೆಯನ್ನೇ ಮುಂದುವರಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ, ಪ್ರಮುಖರಾದ ರಮೇಶ್, ಕೃಷ್ಣಮೂರ್ತಿ, ಶಾಂತರಾಜು, ರಾಘು, ರುದ್ರಪ್ಪ, ರವಿ, ಮಹೇಶ್, ದಿನೇಶ್ ಮತ್ತಿತರರು ಇದ್ದರು.
ಈ ಘಟನೆ ನಡೆದು ಹಲವು ದಿನಗಳೇ ಕಳೆದರೂ ಆರೋಪಿಯನ್ನು ಇನ್ನು ಬಂಧಿಸಿಲ್ಲ. ಕರ್ತವ್ಯದಲ್ಲಿದ್ದ ಸರಕಾರಿ ಅಧಿಕಾರಿಗೆ ಚಪ್ಪಲಿ ತೋರಿಸಿದ್ದು, ಅಲ್ಲದೆ ಅಧಿಕಾರಿಗಳಿಗೆ ಜಾತಿ ನಿಂದನೆ ಮಾಡಿರುವ ವಿಶ್ವಾಸ್ನನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿದರು.
ಇದೇ ಸಂದರ್ಭದಲ್ಲಿ ಸರಕಾರಿ ನೌಕರರಿಗೆ ನೂತನ ಪಿಂಚಣಿ ಯೋಜನೆ ಕೈಬಿಟ್ಟು, ಹಳೆ ಪಿಂಚಣಿ ಯೋಜನೆಯನ್ನೆ ಜಾರಿಗೆ ತರಬೇಕು. ನೂತನ ಪಿಂಚಣಿ ಯೋಜನೆ ಜಾರಿಯಿಂದ ಹಲವು ಸರಕಾರಿ ನೌಕರರು ಮರಣ ಮತ್ತು ನಿವೃತ್ತಿ ಉಪದಾನ ಸೌಲಭ್ಯಗಳಿಂದ ದೂರ ಉಳಿಯುವಂತಾಗಿದೆ. ಹೀಗಾಗಿ ಈ ಯೋಜನೆಯನ್ನು ಕೈಬಿಟ್ಟಿ ಹಳೆ ಪಿಂಚನೆ ಯೋಜನೆಯನ್ನೇ ಮುಂದುವರಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ, ಪ್ರಮುಖರಾದ ರಮೇಶ್, ಕೃಷ್ಣಮೂರ್ತಿ, ಶಾಂತರಾಜು, ರಾಘು, ರುದ್ರಪ್ಪ, ರವಿ, ಮಹೇಶ್, ದಿನೇಶ್ ಮತ್ತಿತರರು ಇದ್ದರು.