ಆ್ಯಪ್ನಗರ

ಗೋಮಾಳ ಜಮೀನು ತೆರವಿಗೆ ಆಗ್ರಹ

ಅಕ್ರಮವಾಗಿ ಮಂಜೂರು ಮಾಡಿಸಿಕೊಂಡಿರುವ ಗೋಮಾಳದ ಜಮೀನನ್ನು ಕೂಡಲೇ ತೆರವುಗೊಳಿಸಿಕೊಡಬೇಕೆಂದು ಒತ್ತಾಯಿಸಿ ಕೊರಕೋಡು ಗ್ರಾಮಸ್ಥರು ಬುಧವಾರ ಪ್ರತಿಭಟನೆ ನಡೆಸಿ ನಂತರ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.

Vijaya Karnataka 4 Jul 2019, 5:00 am
ಆನವಟ್ಟಿ: ಅಕ್ರಮವಾಗಿ ಮಂಜೂರು ಮಾಡಿಸಿಕೊಂಡಿರುವ ಗೋಮಾಳದ ಜಮೀನನ್ನು ಕೂಡಲೇ ತೆರವುಗೊಳಿಸಿಕೊಡಬೇಕೆಂದು ಒತ್ತಾಯಿಸಿ ಕೊರಕೋಡು ಗ್ರಾಮಸ್ಥರು ಬುಧವಾರ ಪ್ರತಿಭಟನೆ ನಡೆಸಿ ನಂತರ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.
Vijaya Karnataka Web urging to vacant gomala
ಗೋಮಾಳ ಜಮೀನು ತೆರವಿಗೆ ಆಗ್ರಹ


ಪ್ರತಿಭಟನೆ ನೇತೃತ್ವ ವಹಿಸಿದ್ದ ರಮೇಶ್‌ ಕುಮಾರ್‌ ಮಾತನಾಡಿ, ಕೊರಕೋಡು ಗ್ರಾಮದ ಸ.ನಂ 28ರಲ್ಲಿ 55 ಎಕರೆ 31 ಗುಂಟೆ ಜಮೀನು ಗೋಮಾಳ ಎಂದು ಜಾನುವಾರು ಮೇವಿಗಾಗಿ ಮೀಸಲಿಟ್ಟ ಜಮೀನಾಗಿದೆ. ಈ ಜಮೀನನ್ನು ಗ್ರಾಮದ ಹುಚ್ಚಪ್ಪ ಎಂಬುವವರು ಅಕ್ರಮವಾಗಿ 2002ರಲ್ಲಿ ಮಂಜೂರು ಮಾಡಿಸಿಕೊಂಡಿದ್ದು ಈ ವರೆಗೂ ಯಾವುದೇ ಸಾಗುವಳಿ ಮಾಡಿಲ್ಲ ಎಂದರು.

ಜಾನುವಾರು ಮೇವಿಗಾಗಿ ಜಮೀನು ತೆರವುಗೊಳಿಸಲು ಈ ಹಿಂದೆ ಗ್ರಾಮಸ್ಥರು ತಹಸೀಲ್ದಾರ್‌, ಉಪ ವಿಭಾಗಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಉಪ ವಿಭಾಗಾಧಿಕಾರಿ, ಜಿಲ್ಲಾಧಿಕಾರಿಗಳ ಪೀಠದಲ್ಲಿ ಮೊಕದ್ದಮೆ ಹಾಕಲಾಗಿದ್ದು ಮಂಜೂರಾತಿ ವಜಾಗೊಳಿಸಲಾಗಿದೆ. ಆದರೂ ಮಂಜೂರು ಮಾಡಿಸಿಕೊಂಡಿರುವವರು ಅಕ್ರಮವಾಗಿ ಗೋಮಾಳದಲ್ಲಿ ಸಾಗುವಳಿಗೆ ಮುಂದಾಗಿದ್ದಾರೆ, ಅಲ್ಲದೆ ಜಮೀನಲ್ಲಿರುವ ಹಲವಾರು ಕಾಡು ಜಾತಿ ಮರಗಳಿಗೆ ಬೆಂಕಿ ಹಾಕಿ ಸುಟ್ಟಿದ್ದಾರೆ. ಈ ಮಂಜೂರಾತಿ ಅಕ್ರಮವಾಗಿದ್ದು ಕೂಡಲೇ ಜಾನುವಾರುಗಳ ಮೇವಿಗಾಗಿ ಗೋಮಾಳದ ಜಮೀನನ್ನು ತೆರವುಗೊಳಿಸಿ ಕೊಡಬೇಕೆಂದು ಒತ್ತಾಯಿಸಿದರು.

ಮನವಿ ಸ್ವೀಕರಿಸಿದ ತಹಸೀಲ್ದಾರ್‌ ಪಟ್ಟರಾಜ ಗೌಡ ಮಾತನಾಡಿ, ತಾವು ಈ ದಿನವೇ ಕರ್ತವ್ಯಕ್ಕೆ ಹಾಜರಾಗಿದ್ದು ಈ ಪ್ರಕರಣದ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಪ್ರತಿಭಟನೆಯಲ್ಲಿ ಚನ್ನಬಸಪ್ಪ ಗೌಡ್ರು, ವಿಜಯ ಕುಮಾರ್‌ ಗೌಡ, ಈಶ್ವರಪ್ಪ, ಶಿವಾನಂದ, ಕೆ.ಬಿ ಕುಮಾರ್‌, ಯುವರಾಜ್‌, ಲಕ್ಷ ್ಮಣ ಅಲ್ಲದೇ ನೂರಾರು ಗ್ರಾಮಸ್ಥರು ಪಾಲ್ಗೊಂಡಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ